ಪಾವಗಡ: ಪಾವಗಡ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದ ಮೂಳೆ ತಜ್ಞ ರಮೇಶ್ ರವರನ್ನು ಮರು ನೇಮಕ ಮಾಡುವಂತೆ ಸಂಘ ಸಂಸ್ಥೆಗಳ ಮುಖಂಡರು ತುಮಕೂರು ಜಿಲ್ಲಾಧಿಕಾರಿಗಳಿಗೆ ಪಾವಗಡ ತಹಸೀಲ್ದಾರ್ ಕೆ. ಆರ್.ನಾಗರಾಜ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪಾವಗಡ ತಾಲ್ಲೂಕು ಅತೀ ಹಿಂದುಳಿದ ಬರಪೀಡಿತ ತಾಲೂಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಡು ಬಡವರು ವಾಸವಾಗಿದ್ದಾರೆ. ಆಕಸ್ಮಿಕ ಅಪಘಾತ ಅಥವಾ ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೈ ಕಾಲುಗಳಿಗೆ ಗಾಯಗಳಾದಾಗ ಜಿಲ್ಲಾ ಆಸ್ಪತೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಯಿತು.
ಈ ಹಿಂದೆ ನೇಮಕವಾಗಿರುವ ಮೂಳೆ ತಜ್ಞ ರಮೇಶ್ ರವರು ರೋಗಿಗಳನ್ನು ಗುಣಪಡಿಸಲು ನಿಪಕ್ಷಪಾತವಾಗಿ ಕೆಲಸ ನಿರ್ವಹಿಸುತಿದ್ದು, ಈ ತಾಲ್ಲೂಕಿನ ಜನತೆಗೆ ಇಂತಹ ದಕ್ಷ ತಜ್ಞ ವೈದ್ಯರೆ ಬೇಕಾಗಿರುವುದರಿಂದ ಕೂಡಲೇ ಡಾ.ರಮೇಶ್ ರವರನ್ನು ಮರುನೇಮಕ ಮಾಡುವಂತೆ ಸಂಘ ಸಂಸ್ಥೆಗಳ ಮುಖಂಡರು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಕೆ.ನಾರಾಯಣಪ್ಪ, ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ವೆಟರ್ನರಿ ಉಗ್ರಪ್ಪ ಬಿ.ಎಸ್.ಪಿ. ಮಂಜುನಾಥ್, ಕಣ್ಣಮೇಡಿ ಕೃಷ್ಣ ಮೂರ್ತಿ, ಬೇಕರಿ ನಾಗರಾಜ, ಶಂಕರ, ನರೇಶ್, ತಿಮ್ಮರಾಜು, ಜಗದೀಶ್, ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB