ಬೆಂಗಳೂರು : ನಗರದ ಅರಕೆರೆ ವಾರ್ಡಿನ ಮಾಜಿ ಬಿಬಿಎಂಪಿ ಸದಸ್ಯರಾದ ಮುರಳಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಬಡಬಗ್ಗರಿಗೆ ಸಹಾಯವನ್ನು ಹಾಗೂ ಅವರಿಗೆ ಬೇಕಾದ ಆಹಾರದ ಸಾಮಗ್ರಿಗಳನ್ನು ಹಂಚಲಾಯಿತು. ಬೆಂಗಳೂರು ಡಿ ಎಸ್ ಎಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಬೇಗೂರು ಅಬ್ದುಲ್, ರಮೇಶ್ ಬಾಬು ( ಹುಳಿಮಾವು ಬಿಜೆಪಿ ಮುಖಂಡರು) ಹಾಗೂ ಸ್ನೇಹಿತರಾದ ಉಪೇಂದ್ರ, ರಾಮಕೃಷ್ಣ ರೆಡ್ಡಿ, ರಘು, ಶಾಜಿರ್, ಅನ್ಸರ್, ಶ್ರೀಧರ್ ಇನ್ನಿತರ ಶುಭಾಶಯಗಳನ್ನು ಕೋರಿದರು.
ಡಿ ಎಸ್ ಎಸ್ ನಾಯಕರಾದ ಅಲ್ಪಸಂಖ್ಯಾತ ಅಧ್ಯಕ್ಷರು ಬೇಗೂರು ಅಬ್ದುಲ್ ಮಾತನಾಡಿ, ಮಾಜಿ ಬಿಬಿಎಂಪಿ ಸದಸ್ಯರಾದ ಮುರಳಿ ಅನೇಕ ರೀತಿಯಲ್ಲಿ ಜನರಿಗೆ ನೆರವಾಗುತ್ತಿದ್ದಾರೆ, ಇವರ ಜೊತೆ ಹುಳಿಮಾವು ಬಿಜೆಪಿ ಮುಖಂಡರಾದ ರಮೇಶ್ ಬಾಬು ರವರು ಸಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಪರ ಕಾರ್ಯಕ್ರಮಗಳನ್ನು ಅವರಿಗೆ ಅನುಕೂಲವಾಗುವಂತೆ ಸಹಾಯವನ್ನು ಮಾಡುತ್ತಿದ್ದಾರೆ. ಮುರಳಿ ಅವರಿಗೆ ಇನ್ನಷ್ಟು ಜನರ ಸೇವೆಯನ್ನು ಮಾಡಲು ಅವರಿಗೆ ಬೇಕಾದ ಎಲ್ಲಾ ರೀತಿಯ ಬೆಂಬಲವನ್ನು ವ್ಯಕ್ತಪಡಿಸುವುದಾಗಿ ಹೇಳಿದ ಅವರು, ಶುಭಾಶಯಗಳನ್ನು ಕೋರಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB