ತುಮಕೂರು: ಜಿಲ್ಲೆಯ ಪಾವಗಡ ತಾಲೂಕು, ನಿಡಗಲ್ಲು ಹೋಬಳಿಯ ಹರಿಹರಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮನೆಗೆ ವಿಶಿಷ್ಟವಾಗಿ ಗೃಹ ಪ್ರವೇಶ ನೆರವೇರಿಸಲಾಯಿತು.
ನಿರ್ಮಲ ಮತ್ತು ತಿಪ್ಪೇಸ್ವಾಮಿ ಎಚ್.ಈ. ಇವರು ನಿರ್ಮಿಸಿರುವ ಗೂಳಿರು ಈರಣ್ಣ ನಿಲಯದ ಗೃಹಪ್ರವೇಶವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿದ ಬೌದ್ಧ ದಮ್ಮದ ಅನುಸಾರ ವಿಶಿಷ್ಟ ಬುದ್ಧ ವಂದನೆ ಕಾರ್ಯಕ್ರಮದೊಂದಿಗೆ ನೆರವೇರಿತು. ಬೌದ್ಧ ಬಿಕ್ಕು ಪೂಜ್ಯ ನ್ಯಾನಲೋಕ ಬಂತೇಜಿ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಭಾರತೀಯ ಪರಿವರ್ತನ ಸಂಘ ರಾಜ್ಯಾಧ್ಯಕ್ಷರು ಹಾಗೂ ಹೈಕೋರ್ಟ್ ವಕೀಲರಾದ ಹರಿರಾಮ್ ಎ. ಅವರು ಭಾಗವಹಿಸಿದ್ದರು. BPS ತುಮಕೂರು ಜಿಲ್ಲಾಧ್ಯಕ್ಷ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್.ಕೆಂಚರಾಯ, ಪಾವಗಡ ತಾಲೂಕು ಸಂಯೋಜಕರಾದ ಹರಿಹರಪುರ ಗ್ರಾಮದ ಎಚ್.ಡಿ.ಈರಣ್ಣ, ಕಲಾವಿದರಾದ ನಾಗರಾಜ್, ನರಸಿಂಹಮೂರ್ತಿ, BPS ಕಾರ್ಯಕರ್ತರಾದ ತುಮಕುಂಟೆ ಗ್ರಾಮದ ತಿಪ್ಪೇಶ್, DSS ತುಮಕೂರು ಜಿಲ್ಲಾ ಸಂಚಾಲಕರಾದ ಸಿ.ಕೆ.ತಿಪ್ಪೇಸ್ವಾಮಿ, ಪಾವಗಡ ಚೈತ್ರ ಪ್ರಿಂಟರ್ಸ್ ಮಾಲೀಕರಾದ ಡಿ.ಎನ್.ತಿಪ್ಪೇಸ್ವಾಮಿ ಹಾಗೂ ನಿರ್ಮಲ ತಿಪ್ಪೇಸ್ವಾಮಿ ವರ ಕುಟುಂಬಸ್ಥರು ಹಾಗೂ ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296