nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂತಪೂರ ಗ್ರಾಮದಲ್ಲಿ ‘ಗೃಹಲಕ್ಷ್ಮಿ ದಿನ’: ಸಸಿ ನೆಟ್ಟು ಚಾಲನೆ

    July 20, 2026

    ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ನಿಧನಕ್ಕೆ ಔರಾದ್ ತಾಲೂಕು ಜೆ.ಡಿ.ಎಸ್. ಸಂತಾಪ

    July 20, 2026

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026
    Facebook Twitter Instagram
    ಟ್ರೆಂಡಿಂಗ್
    • ಸಂತಪೂರ ಗ್ರಾಮದಲ್ಲಿ ‘ಗೃಹಲಕ್ಷ್ಮಿ ದಿನ’: ಸಸಿ ನೆಟ್ಟು ಚಾಲನೆ
    • ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ನಿಧನಕ್ಕೆ ಔರಾದ್ ತಾಲೂಕು ಜೆ.ಡಿ.ಎಸ್. ಸಂತಾಪ
    • ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ
    • ಜು.25: ಕೆಂಪೇಗೌಡ ಜಯಂತಿ, ಪ್ರತಿಭಾ ಪುರಸ್ಕಾರ
    • ಮೊರಾರ್ಜಿ ವಸತಿ ಶಾಲೆಯಲ್ಲಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್
    • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    • ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ
    • ವಲಸೆಗೆ ಬ್ರೇಕ್; ‘ವಿಬಿ–ಜಿ ರಾಮ್-ಜಿ’ ಯೋಜನೆಯಿಂದ ಗ್ರಾಮದಲ್ಲೇ ಉದ್ಯೋಗದ ಭರವಸೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೆಂಪಮ್ಮದೇವಿ– ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಮುಂದೂಡಿಕೆ ಬೇಸರ ತಂದಿದೆ: ಮಾದಿಗ ಸಮುದಾಯದ ಮುಖಂಡ ಬೈರಯ್ಯ ಅಸಮಾಧಾನ
    ತುರುವೇಕೆರೆ April 10, 2025

    ಕೆಂಪಮ್ಮದೇವಿ– ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಮುಂದೂಡಿಕೆ ಬೇಸರ ತಂದಿದೆ: ಮಾದಿಗ ಸಮುದಾಯದ ಮುಖಂಡ ಬೈರಯ್ಯ ಅಸಮಾಧಾನ

    By adminApril 10, 2025No Comments2 Mins Read
    adi jambhava

    ತುರುವೇಕೆರೆ: ನಮ್ಮ ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗುತ್ತಿದ್ದು ಪ್ರತಿ ವರ್ಷದಂತೆ ನಡೆಯಬೇಕಿದ್ದ ಕೆಂಪಮ್ಮದೇವಿ ಮತ್ತು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಮುಂದೂಡಿರುವುದು ನಮಗೆ ಬಹಳ ಬೇಸರ ತಂದಿದೆ ಎಂದು ಮರಾಠಿ ಪಾಳ್ಯದ ಮಾದಿಗ ಸಮುದಾಯದ ಮುಖಂಡರಾದ ಬೈರಯ್ಯರವರು ಅಸಮಾಧಾನ ವ್ಯಕ್ತಪಡಿಸಿದ್ರು.

    ಪಟ್ಟಣದ ಆದಿಜಾಂಭವ ಸಮಿತಿಯ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವುಗಳು ಕೂಡ ದಲಿತ ಜನಾಂಗದ ಮಾದಿಗ ಜಾತಿಗೆ ಸೇರಿದವರಾಗಿದ್ದು, ಅಸ್ಪೃಶ್ಯತೆ ನಮ್ಮ ಗ್ರಾಮದಲ್ಲಿ ಕುಣಿಕೇನಹಳ್ಳಿ ಗ್ರಾಮದಲ್ಲಿ ಇಲ್ಲ ಎಂದರು.

    ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ತಿಂಗಳ 5 ರಿಂದ ನಡೆಯಬೇಕಿದ್ದ ಜಾತ್ರಾ ಮಹೋತ್ಸವ ಕುಣಿಕೇನಹಳ್ಳಿ ಗ್ರಾಮದ ಚಲವಾದಿ ಸಮುದಾಯದ ಜಗದೀಶ್ ರವರು ಸಮಿತಿಗಳಲ್ಲಿ ನಮಗೂ ಸೇರ್ಪಡೆ ಮಾಡಿಕೊಳ್ಳಿ ಎಂಬುವ ಬೇಡಿಕೆಯಿಟ್ಟ ಕಾರಣ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ಉಂಟಾಗಿದ್ದು, ಜಾತ್ರಾ ಮಹೋತ್ಸವಕ್ಕಾಗಿ ತಾಲೂಕು ಕಚೇರಿಯಲ್ಲಿ ಶಾಂತಿ ನಡೆಸಿದರೂ ಅದು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎ.ಎನ್.ಅಹಮದ್ ಜಾತ್ರೆಯನ್ನು ಮುಂದೂಡುವಂತೆ ಹೇಳಿದ್ದರು.

    ಕುಣಿಕೇನಹಳ್ಳಿ ಗ್ರಾಮದಲ್ಲಿ ಕೆಂಪಮ್ಮ ದೇವಿಯ ಜಾತ್ರೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ದೇವರು ನಾವು ಪೂಜೆ ಮಾಡುವ ಚಿಕ್ಕಮ್ಮ ದೇವಿ ದೇವತೆಯಾಗಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ನಾವು ಮರಾಠಿ ಪಾಳ್ಯದಲ್ಲಿ ಸುಮಾರು 10 ಮನೆಗಳ ಅರ್ಚಕರಿದ್ದು, ಪ್ರತಿ ತಿಂಗಳು ಪೂಜೆ ಪುನಸ್ಕಾರಗಳನ್ನು ಮುಂದೂಡಿಕೆ ಮಾಡುತ್ತಿರುವುದರಿಂದ ನಮಗೆ ಬಹಳ ಬೇಸರವಾಗಿದೆ ಎಂದರು.

    ಈ ದೇವತೆಯ ಜಾತ್ರೆ ಮಾಡದಿದ್ದರೆ ಗ್ರಾಮಗಳಿಗೆ ಒಳಿತಾಗುವುದಿಲ್ಲ ಎಂಬ ಆತಂಕ ನಮ್ಮಲ್ಲಿ ಕಾಡುತ್ತಿದೆ. ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ಜಾತ್ರಾ ಮಹೋತ್ಸವವನ್ನು ಯಾವುದೇ ಜಾತಿ ಭೇದವಿಲ್ಲದೆ ತಾರತಮ್ಯ ಮಾಡದೆ ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದಾರೆ. ಶಾಂತಿ, ಸಾಮರಸ್ಯದಿಂದ ಜೀವನ ಮಾಡಿಕೊಂಡು, ಜಾತ್ರಾ ಮಹೋತ್ಸವದಲ್ಲಿ ವಿಜೃಂಭಣೆಯಿಂದ ಸಡಗರದಿಂದ ಆಚರಣೆ ಮಾಡುತ್ತಿದ್ದೆವು. ಆದರೆ ಈ ವರ್ಷದ ಜಾತ್ರೆಗೆ ಭಂಗ ಉಂಟಾಗಿದೆ. ದಯಮಾಡಿ ತಾಲೂಕು ಆಡಳಿತ ಇದನ್ನು ಸರಿಪಡಿಸಿ ಜಾತ್ರಾ ಮಹೋತ್ಸವ ಮಾಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸವಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಮರಾಠಿ ಪಾಳ್ಯ, ಚನ್ನಿಗಯ್ಯ, ನಾಗರಾಜ್, ಚೆನ್ನಿಗರಾಯ, ಗೇಟಪ್ಪ, ಪುಟ್ಟರಾಜು, ಚಂದ್ರೇಶ್, ಚನ್ನಪ್ಪ, ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ವರದಿ: ಸುರೇಶ್ ಬಾಬು ಎಂ., ತುರುವೇಕೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KN8LiGgEw492Ijygqm0dVW

    ————————————


    Provided by
    Provided by
    admin
    • Website

    Related Posts

    ಬೆಳೆ ವಿಮೆ ನೋಂದಣಿ: ರೈತರಿಗೆ ಸಲಹೆ

    July 10, 2026

    ಹಸಿರು ಶಾಲು ರೈತರಿಗೆ ನ್ಯಾಯ ಕೊಡಿಸುವ ಅಸ್ತ್ರ: ಇಂದುವಾಳು ಚಂದ್ರಶೇಖರ್

    July 7, 2026

    ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ

    June 30, 2026

    Comments are closed.

    Our Picks

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸಂತಪೂರ ಗ್ರಾಮದಲ್ಲಿ ‘ಗೃಹಲಕ್ಷ್ಮಿ ದಿನ’: ಸಸಿ ನೆಟ್ಟು ಚಾಲನೆ

    July 20, 2026

    ಔರಾದ್:  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸೋಮವಾರ ತಾಲೂಕು ಪಂಚ ಗ್ಯಾರಂಟಿ…

    ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ನಿಧನಕ್ಕೆ ಔರಾದ್ ತಾಲೂಕು ಜೆ.ಡಿ.ಎಸ್. ಸಂತಾಪ

    July 20, 2026

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಜು.25: ಕೆಂಪೇಗೌಡ ಜಯಂತಿ, ಪ್ರತಿಭಾ ಪುರಸ್ಕಾರ

    July 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.