ಮಧುಗಿರಿ: ಪುರಾತನ ಕಾಲದ ಬಾವಿಯನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕೆಡವಿದ ಘಟನೆ ಇಲ್ಲಿನ ಸಿದ್ಧಾಪುರ ಗ್ರಾಮದಲ್ಲಿ ನಡೆದಿದ್ದು, ಊರ ಹೊರಗಿನ ಕೋಟೆಗಳನ್ನು ಧ್ವಂಸ ಮಾಡಿದ ಬಳಿಕ ಇದೀಗ ಜನ ವಸತಿ ಪ್ರದೇಶದಲ್ಲಿರುವ ಸ್ಥಳಗಳನ್ನೂ ನಾಶ ಮಾಡಲು ಆರಂಭಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪುರಾತನ ಕಾಲದ ಈ ಬಾವಿ ಇಲ್ಲಿನ ಜನರ ಹೆಮ್ಮೆಯ ಸಂಕೇತವಾಗಿತ್ತು. ಆದರೆ, ರಾತ್ರೋ ರಾತ್ರಿ ಕಳ್ಳರಂತೆ ಬಂದ ಕಿಡಿಗೇಡಿಗಳು ಈ ಪ್ರದೇಶದ ಬೀದಿ ಲೈಟ್ ಗಳನ್ನು ಆಫ್ ಮಾಡಿದ ಬಳಿಕ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಘಟನಾ ಸ್ಥಳದಲ್ಲಿ ಬೀದಿ ಬಾವಿ ಲಕ್ಷ್ಮಿಕಾಂತ, ದ್ವಾರಕೀಶ್ ಬಾಲಾಜಿ, ಮಂಜುನಾಥ್, ರಮೇಶ್, ಶರತ್, ಬಾಬು, ನಾಗೇಶ್, ರಮೇಶ್ ಎಂ, ಆರ್. ಮಂಜುನಾಥ್, ವೆಂಕಟೇಶ್, ಶ್ರೀರಂಗ, ಡಾ.ಶ್ರೀನಿವಾಸ್, ಧನಂಜಯ ಶೆಟ್ಟರು, ಮಾದೇವಯ್ಯ, ರಂಗ, ಶಾಮಣ್ಣ, ವೆಂಕಟೇಶ್ ಪಂಚಾಕ್ಷರಯ್ಯ, ದಿನೇಶ್, ನಾಗಭೂಷಣ್ ಮೊದಲಾದ ಗ್ರಾಮಸ್ಥರು ಘಟನೆಯನ್ನು ಖಂಡಿಸಿ, ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB