nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್: ಸಾರಿಗೆ ಬಸ್ ಪಲ್ಟಿ, ಇಬ್ಬರಿಗೆ ಗಾಯ; ತಪ್ಪಿದ ಭಾರೀ ಅನಾಹುತ

    May 21, 2025

    ತುಮಕೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 37,661 ಕೋಟಿ ರೂ. ಬಿಡುಗಡೆ

    May 21, 2025

    ಸೂಟ್‌ ಕೇಸ್ ನಲ್ಲಿ ಯುವತಿಯ ಮೃತದೇಹ ಪತ್ತೆ

    May 21, 2025
    Facebook Twitter Instagram
    ಟ್ರೆಂಡಿಂಗ್
    • ಬೀದರ್: ಸಾರಿಗೆ ಬಸ್ ಪಲ್ಟಿ, ಇಬ್ಬರಿಗೆ ಗಾಯ; ತಪ್ಪಿದ ಭಾರೀ ಅನಾಹುತ
    • ತುಮಕೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 37,661 ಕೋಟಿ ರೂ. ಬಿಡುಗಡೆ
    • ಸೂಟ್‌ ಕೇಸ್ ನಲ್ಲಿ ಯುವತಿಯ ಮೃತದೇಹ ಪತ್ತೆ
    • ರಾಜ್ಯದಿಂದ ಆಂಧ್ರಪ್ರದೇಶಕ್ಕೆ 6 ಕುಮ್ಕಿ ಆನೆಗಳ ಹಸ್ತಾಂತರ
    • ಡಾ.ಜಿ.ಪರಮೇಶ್ವರ್ ಒಡೆತನ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿ
    • ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ: 1ರಿಂದ 5ನೇ ತರಗತಿಗೆ ಅರ್ಜಿ ಆಹ್ವಾನ
    • ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ
    • ಬಿಜೆಪಿಯಲ್ಲಿ ಮತ್ತೆ ಆರಂಭವಾಯ್ತಾ ಮುಸುಕಿನ ಗುದ್ದಾಟ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಿಲಾರ್ಲಹಳ್ಳಿ ಶಾಲೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ವಸ್ತು ಪ್ರದರ್ಶನ ಕಾರ್ಯಕ್ರಮ
    ತಿಪಟೂರು March 1, 2022

    ಕಿಲಾರ್ಲಹಳ್ಳಿ ಶಾಲೆ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ವಸ್ತು ಪ್ರದರ್ಶನ ಕಾರ್ಯಕ್ರಮ

    By adminMarch 1, 2022Updated:March 2, 2022No Comments2 Mins Read
    vastu pradarshana

    ಪಾವಗಡ: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಿಲಾರ್ಲಹಳ್ಳಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ನಿರೂಪಣೆಯನ್ನು ವಿಜ್ಞಾನ ಶಿಕ್ಷಕರಾದ ರಾಜಾನಾಯ್ಕ ಎಸ್.ಹೆಚ್. ನೆರವೇರಿಸಿದರು.

    ಸರ್ ಸಿ.ವಿ.ರಾಮನ್ ಫೋಟೋ ಪೂಜೆ ಮತ್ತು ಪ್ರಾರ್ಥನೆಯನ್ನು 7ನೇ ತರಗತಿ ಲಾವಣ್ಯ ಮತ್ತು ತಂಡ ನೆರವೇರಿಸಿದರು, ಮುಖ್ಯ ಶಿಕ್ಷಕರಾದ ಚಂದ್ರಪ್ಪ ಸ್ವಾಗತ ಮಾಡಿದರು.


    Provided by

    ಕ್ಷೇತ್ರಶಿಕ್ಷಣಾಧಿಕಾರಿಗಳಾದ ಅಶ್ವತ್ಥ ನಾರಾಯಣರವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಕ್ಕಳು ಉತ್ತಮ ಕಡಿಮೆ ವೆಚ್ಚದ ಮಾದರಿಗಳನ್ನು ತಯಾರಿಸಲು ವಿಜ್ಞಾನ ಶಿಕ್ಷಕರು ಮತ್ತು ಇತರ ಶಿಕ್ಷಕರು ಪ್ರೋತ್ಸಾಹಿಸಬೇಕು. ಪೋಷಕರು ಮಕ್ಕಳಿಗೆ 1 ರಿಂದ 10 ನೇ ತರಗತಿವರೆಗೆ ಹೆಚ್ಚು ಗಮನ ಕೊಟ್ಟರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.
    ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿಗಳಾದ ಹನುಮಂತರಾಯಪ್ಪ ಮಾತನಾಡಿ, ಈ ದಿನ ಸಿ.ವಿ. ರಾಮನ್ ರವರಿಗೆ ನೋಬಲ್ ಪ್ರಶಸ್ತಿ ಬಂದ ದಿನ. ಅವರು ಭೌತಶಾಸ್ತ್ರ ವಿಷಯದಲ್ಲಿ ಬೆಳಕಿನ ಚದುರುವಿಕೆಯ ಬಗ್ಗೆ ಕೊಡುಗೆ ಅಪಾರ ಎಂದು ತಿಳಿಸಿದರು.

    ಅದೇ ರೀತಿ ಶಿಕ್ಷಣ ಸಂಯೋಜಕರಾದ ಶಿವಮೂರ್ತಿನಾಯ್ಕ ಮಾತನಾಡಿ, ಮಕ್ಕಳು ಯಾವುದೇ ವಿಷಯ ಕಲಿಯಲು ಪ್ರಯತ್ನ ಬೇಕು ಎಂದು ತಿಳಿಸಿದರು. ಅದೇ ರೀತಿ ತಾಲ್ಲೂಕು ಪ್ರಾಥಮಿಕಶಾಲಾ ಸಂಘದ ಪದಾಧಿಕಾರಿಗಳಾದ ರಾಮಾಂಜಿನಪ್ಪ ಮತ್ತು ಸಾವಿತ್ರಮ್ಮರವರು ಈ ದಿನದ ವಿಶೇಷವನ್ನು ಕುರಿತು ಮಾತನಾಡಿದರು.

    ಅಲ್ಲಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಅಧಿಕಾರಿಗಳು ಜನಪ್ರತಿನಿಧಿಗಳು ವಿಕ್ಷಿಸಿದರು. ಮಕ್ಕಳು ವಿಜ್ಞಾನ ಶಿಕ್ಷಕರಾದ ರಾಜಾನಾಯ್ಕ ಎಸ್.ಹೆಚ್. ರವರ ಮಾರ್ಗದರ್ಶನದಲ್ಲಿ ವಾಕಿಂಗ್ ಮಾದರಿಗಳಾದ ರೋಪ್ ವೇ, ವಿದ್ಯುತ್ ವಾಹಕ ಅವಾಹಕಗಳು, ಸೋಲಾರ್ ವಾಟರ್ ಹೀಟರ್ , ವ್ಯಾಕುಮ್ ಕ್ಲೀನರ್ , ವಿದ್ಯುತ್ ಸರಣಿ ಮತ್ತು ಸಮಾಂತರ ಮಾದರಿಗಳು , ಉಷ್ಣ ವಾಹಕಗಳು, ಶಕ್ತಿಯ ನಾನಾ ರೂಪಗಳು, ಶ್ವಾಸಕೋಶ, ರಾಸಾಯನಿಕ ಬದಲಾವಣೆಗಳು, ಸಿಂಟೆಕ್ಸ್ ತುಂಬಿದಾಗ ಎಚ್ಚರಿಕೆ ಕೊಡುವ ಮಾದರಿ, ಮಿನಿ ಎ ಟಿ ಎಮ್ ಮುಂತಾದ ಕಡಿಮೆ ವೆಚ್ಚದ ಮಾದರಿಗಳು ತಯಾರಿಸಿದ್ದರು.
    ಅಧ್ಯಕ್ಷತೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣದ ವಿಜ್ಞಾನ ಶಿಕ್ಷಕರು , ಇತರೆ ಶಿಕ್ಷಕರು ಮುಖ್ಯ ಶಿಕ್ಷಕರ ಕಾರ್ಯದ ಬಗ್ಗೆ ಶ್ಲಾಘಿಸಿದರು.

    ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಶಿವಕುಮಾರ್, ಸಿ ಆರ್ ಪಿ ಗಳಾದ ವಸಂತ್ ಕುಮಾರ್ ಮತ್ತು ಗಂಗಾಧರ್ , ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತನಾಯ್ಕ, ಎಸ್ ಡಿ ಎಂ ಸಿ ಸದಸ್ಯರಾದ ಶಂಕರ್ ನಾಯ್ಕ, ಹನುಮಂತಪ್ಪ, ಶಿಕ್ಷಣ ಆಸಕ್ತರಾದ ನಾಗರಾಜನಾಯ್ಕ ಪೋಷಕರು , ಶಿಕ್ಷಕಿಯರಾದ ಲಕ್ಷ್ಮೀದೇವಿ, ರೇಣುಕಮ್ಮ ಹಾಜರಿದ್ದರು.

    ವರದಿ: ರಾಮಪ್ಪ, ಸಿ.ಕೆ.ಪುರ. ಪಾವಗಡ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಗ್ಯಾಸ್ ಸಿಲಿಂಡರ್ ಸ್ಫೋಟ:  ಮನೆ ಕಳೆದುಕೊಂಡ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಪರಿಹಾರ ವಿತರಣೆ

    May 18, 2025

    ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹೋರಾಟಗಾರರ ಬಂಧನಕ್ಕೆ ಖಂಡನೆ: ಡಿಸಿ ವಿರುದ್ಧ ಆಕ್ರೋಶ

    May 16, 2025

    ತಿಪಟೂರು: ಭಾರೀ ಮಳೆಗೆ ಮರ ಮುರಿದು ಬಿದ್ದು ಕಾರು ಜಖಂ

    May 16, 2025
    Our Picks

    ಆಂಧ್ರಪ್ರದೇಶ ಕರ್ನೂಲ್ ಬಳಿ ಭೀಕರ ಅಪಘಾತ: ತುಮಕೂರು ಮೂಲದ ಮೂವರು ಸಾವು

    May 19, 2025

    ನ್ಯೂಸ್ ಪೇಪರ್ ನ್ನೇ ಡ್ರೆಸ್ ಮಾಡಿಕೊಂಡು, “ನನ್ನನ್ನು ಓದುವಿರಾ?” ಎಂದು ಕೇಳಿದ ನಟಿ ಪೂನಂ ಪಾಂಡೆ

    May 17, 2025

    ಆಪರೇಷನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ: ಯುವಕ ಅರೆಸ್ಟ್

    May 17, 2025

    ಮೌಂಟ್ ಎವರೆಸ್ಟ್ ನಿಂದ ಇಳಿಯುತ್ತಿದ್ದ ವೇಳೆ ಭಾರತೀಯ ಪರ್ವತಾರೋಹಿ ಸಾವು

    May 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್: ಸಾರಿಗೆ ಬಸ್ ಪಲ್ಟಿ, ಇಬ್ಬರಿಗೆ ಗಾಯ; ತಪ್ಪಿದ ಭಾರೀ ಅನಾಹುತ

    May 21, 2025

    ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೀದರ್…

    ತುಮಕೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 37,661 ಕೋಟಿ ರೂ. ಬಿಡುಗಡೆ

    May 21, 2025

    ಸೂಟ್‌ ಕೇಸ್ ನಲ್ಲಿ ಯುವತಿಯ ಮೃತದೇಹ ಪತ್ತೆ

    May 21, 2025

    ರಾಜ್ಯದಿಂದ ಆಂಧ್ರಪ್ರದೇಶಕ್ಕೆ 6 ಕುಮ್ಕಿ ಆನೆಗಳ ಹಸ್ತಾಂತರ

    May 21, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.