ಕೊರಟಗೆರೆ: ತಾಲ್ಲೂಕಿನ ಹೊರವಲಯದಲ್ಲಿರುವ ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಹೊರಾಂಗಣದಲ್ಲಿ ವಿಷ್ಣು ಸಮಾಜವು ಹೋಳಿ ಹಬ್ಬವನ್ನು ಸಡಗರ ಸಂಭ್ರಮ ಆಚರಿಸಿದರು.
ವಿಷ್ಣು ಸಮಾಜದ ಹೆಣ್ಣು ಮಕ್ಕಳು ಅವರ ಜನಾಂಗದಲ್ಲಿ ಬರುವ ಜನಪದ ಗೀತೆಗಳನ್ನು ಹಾಡುತ್ತಾ ಸಂಭ್ರಮಿಸಿದರೆ, ಇತ್ತ ಹುಡುಗರು ನಾವೇನು ಕಮ್ಮಿ ಎನ್ನುವಂತೆ ಸಮಾಜದ ಹಲವು ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ವಿಷ್ಣು ಸಮುದಾಯದ ಮುಖಂಡ ಜಯರಾಂ ಮಾತನಾಡಿ, ನಮ್ಮ ಪೂರ್ವಿಕರ ಕಾಲದಿಂದಲೂ ಮಾಡಿಕೊಂಡು ಬಂದಿರುವ ಹೋಳಿ ಹಬ್ಬದ ಸಂಭ್ರಮಾಚರಣೆ ನಾವು ಕೂಡ ಮುಂದುವರಿಸುತ್ತಿದ್ದೇವೆ. ಪ್ರತಿವರ್ಷ ಹೋಳಿ ಹಬ್ಬ ಬಂತೆಂದರೆ ಸಾಕು ನಮ್ಮ ಸಮುದಾಯದ ಎಲ್ಲಾ ಜನರು ಒಟ್ಟಿಗೆ ಕೂಡಿ ಸಂಭ್ರಮಿಸುತ್ತೇವೆ. ಕಳೆದ 3ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾವುದೇ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ ಇದೀಗ ದೇವರ ದಯೆಯಿಂದ ಎಲ್ಲಾ ಮಹಾಮಾರಿಯಿಂದ ದೂರವಾಗಿ ಸಂಭ್ರಮಗಳು ಮನೆ ಮಾಡುತ್ತಿವೆ ಎಂದು ತಿಳಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB