ಕೊರಟಗೆರೆ : ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕರಕಲಘಟ್ಟ ಗ್ರಾಮದಲ್ಲಿ ಕುರುಬ ಸಮಾಜದ ಸಮಾವೇಶ ನಡೆಯಿತು.
ತುಮಕೂರು ಲೋಕಸಭಾ ಎನ್ ಡಿ ಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಭರ್ಜರಿ ಮತ ಭೇಟೆ ನಡೆಸಿದರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮತ್ತು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಎನ್ ಡಿ ಎ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರಕ್ಕೆ ಇಳಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಕುರುಬ ಜನಾಂಗದ ಮತ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಹೇಳುವುದು ತಪ್ಪು, ಈ ಭಾರಿ ಅವರಿಗೆ ಮೀಸಲಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗುತ್ತಾರೆ ಎಂದು ನಮ್ಮ ಕುರುಬ ಜನಾಂಗದ ಜನರು ಮತ ಹಾಕಿದ್ದಾರೆ. ಆದ್ದರಿಂದ ಹೆಚ್ಚಿನ ಸ್ಥಾನಗಳು ಕಾಂಗ್ರೆಸಿಗೆ ಬಂದು ಸಿದ್ದರಾಮಯ್ಯ ಎರಡನೇ ಬಾರಿಯೂ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ಬಿಜೆಪಿಗೆ ರಾಜ್ಯದಲ್ಲಿ 25 ಸೀಟು ಬಂದಿತ್ತು. ಕಾಂಗ್ರೆಸ್ ಗೆ 01 ಸೀಟು ಜೆಡಿಎಸ್ ಗೆ 01 ಸೀಟು, ರಾಜ್ಯ ಸರ್ಕಾರ ಯಾವುದೇ ಇರಲಿ ಜನರು ಅದರ ವಿರುದ್ಧವೇ ಓಟು ಹಾಕೋದು. ನಿದ್ರೆಯಲ್ಲಿರುವ ಜನರನ್ನು ಎಬ್ಬಿಸಿ ಕೇಂದ್ರದಲ್ಲಿ ಯಾವ ಸರ್ಕಾರ ಬರುತ್ತೆ ಅಂದ್ರೆ ಮೋದಿ ಸರ್ಕಾರವೇ ಬರುತ್ತೆ ಅಂತಾರೆ…ಎರಡು ಬಾರಿ ಕಾಂಗ್ರೇಸ್ಗೆ ವಿರೋಧ ಪಕ್ಷದ ನಾಯಕರೇ ಸಿಕ್ಕಿಲ್ಲ ಅಂತಹ ದುಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಕೇಂದ್ರಲ್ಲಿ 272 ಸಿಟ್ ಬೇಕು ಅಧಿಕಾರಕ್ಕೆ ಬರೋಕೆ ಅಮ್ಮಮ್ಮ ಅಂದ್ರೆ 50 ಸೀಟು ಬರಬಹುದು ಸರ್ಕಾರ ಮಾಡೋಕೆ ಹೇಗ್ ಆಗುತ್ತೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು ಕೊಟ್ಟಿದ್ದಾರ..? 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಯಾರದ್ದು ಮೋದಿ ಸರ್ಕಾರದ್ದು ಕಣ್ರೀ ಕೊಟ್ಟ ಮಾತಿನಂತೆ 10 ಕೆಜಿ ಬಡವರಿಗೆ ಕೊಡ್ರಿ ಎಂದು ಕಟುವಾಗಿ ಟೀಕಿಸಿದರು.
ಕಾಂಗ್ರೆಸ್ ನವರು ಮಹಾನ್ ಸುಳ್ಳುಗಾರರು ಆದ್ದರಿಂದ ಇವರಿಗೆ ಮತ ಕೊಡಬೇಡಿ, ರಾಜ್ಯದ ಅನ್ನದಾತನ ಬೆನ್ನು ಮೂಳೆ ಮುರಿಯುತ್ತಿದ್ದಾರೆ. ಅದರಿಂದ ನೀವು ಈಗ ಅವರ ಬೆನ್ನ ಮೂಳೆ ಮುರಿಯುವ ಟೈಮ್ ಬಂದಿದೆ ನಮ್ಮ NAD ಅಭ್ಯರ್ಥಿಗೆಳಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಗೆ ಬುದ್ಧಿ ಕಳಿಸಿ ಎಂದರು.
ಚೊಂಬು ತೋರಿಸುವ ರಾಜಕೀಯ ಮಾಡಿರುವ ಕಾಂಗ್ರೆಸ್ ನವರಿಗೆ ಜನ ಈ ಬಾರಿಯೂ ಚಿಪ್ಪು ಕೊಡ್ಬೇಕು. ಹಾಗಾಗಿ ಗೆದ್ದೆತ್ತಿನ ಬಾಲ ಹಿಡಿಯುವ ಕೆಲಸ ನೀವು ಮಾಡಬೇಕು ಎಂದರು.
ಮಾಜಿ ಶಾಸಕ ಸುಧಾಕರ್ ಲಾಲ್ ಮತ್ತು ಬಿಜೆಪಿ ಮುಖಂಡರ ಜೊತೆ ಇದ್ದು ಕೊರಟಗೆರೆಯಿಂದ ದಿಲ್ಲಿಯವರೆಗೂ ಕುರುಬರ ಸಂಪರ್ಕ ಇರಬೇಕು ಎಂದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ನಮ್ಮ ಎಸ್ ಟಿ ಹೋರಾಟ ಗೆಲ್ಲಬೇಕು ಅಂದ್ರೆ ನೋ ಸ್ಪೀಡ್ ಬ್ರೇಕರ್ ಆಗಿ ಕುರುಬರು ಕೆಲಸ ಮಾಡಬೇಕು ಎಂದರು.
ದೇಶ ಮುನ್ನೆಡೆಗೆ ಸಾಗಬೇಕು ಅಂದ್ರೆ ಸಮರ್ಥ ನಾಯಕನಾದ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಆದ್ದರಿಂದ ಕುರುಬರು ಒಟ್ಟಾಗಿ ವಿ ಸೋಮಣ್ಣಗೆ ಮತ ಹಾಕಬೇಕು ಕನಿಷ್ಠ 3 ಲಕ್ಷ ಅಂತರದಲ್ಲಿ ಸೋಮಣ್ಣ ಗೆಲ್ಲುದ್ದಾರೆ ಎಂದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಇಂಡಿಯಾ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಲ್ಲಿ ಮೋದಿಯ ಎತ್ತರಕ್ಕೆ ಬೆಳೆದ ನಾಯಕ ಯಾರಿದ್ದಾರೆ ಯೋಗ್ಯತೆ ಯಾರಿಗಿದೆ. ಸಿದ್ದರಾಮಯ್ಯ ನವರ ಗ್ಯಾರಂಟೀಗಳು ತಾತ್ಕಾಲಿಕವಷ್ಟೇ ಆದ್ದರಿಂದ ಮೋದಿ ಕೈ ಬಲಪಡಿಸಬೇಕು ಎಂದರೆ ತುಮಕೂರಲ್ಲಿ ವಿ ಸೋಮಣ್ಣ ಗೆಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ತಿಪ್ಪೇಸ್ವಾಮಿ,ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸ್ವಾಮಿ,ಕುರುಬ ಸಮಾಜದ ಮುಖಂಡರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296