ತುಮಕೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯೆ ಕಲಿಸಿದರೆಷ್ಟೇ ಸಾಲದು, ಅವರನ್ನು ಬುದ್ಧಿವಂತರನ್ನಾಗಿ ಮಾಡುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಪಾದಿಸಿದ್ದಾರೆ.
ತುಮಕೂರು ಸಿದ್ಧಗಂಗಾಮರದ ಸನಿವಾಸ ವಿದ್ಯಾಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಸೇರಿಸುವ ಜವಾಬ್ದಾರಿ ತಂದೆ–ತಾಯಿಯದಾದರೆ, ಶಾಲೆಗೆ ಸೇರಿದ ಮಕ್ಕಳಿಗೆ ವಿದ್ಯೆಯ ಜೊತೆಗೆ, ಚಾರಿತ್ರ್ಯಕ್ಕೆ ಆದ್ಯತೆ ನೀಡಿ, ನೈತಿಕತೆ ಮೌಲ್ಯ ತಿಳಿಸಿ, ಪ್ರಾಯೋಗಿಕ ಶಿಕ್ಷಣದೊಂದಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲುವಂತೆ ವಿದ್ಯಾರ್ಥಿಗಳನ್ನು ಬುದ್ಧಿವಂತರನ್ನಾಗಿ ಮಾಡಬೇಕಾದ ಶಿಕ್ಷಕರ ಕರ್ತವ್ಯ ಎಂದರು.
ಮಠದಿಂದ ಸ್ವಾಮಿಯಲ್ಲಿ, ಸ್ವಾಮಿಯಲ್ಲೇ ಮಾತ ಎಂದು ಈ ಜಗತ್ತಿಗೆ ತೋರಿಸಿಕೊಟ್ಟವರು ಡಾ. ಶಿವಕುಮಾರಸ್ವಾಮಿಗಳು ಎಂದ ಈಶ್ವರ ಖಂಡ್ರೆ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ಮಹಾಪುರುಷರು ಎಂದರು.
ಕೆಲವರು ತಮ್ಮ ತಮ್ಮ ಜೀವಿತ ಕಾಲದಲ್ಲಿ ಕೇವಲ ಬದುಕುತ್ತಾರೆ. ಆದರೆ ಮತ್ತೆ ಕೆಲವರು ತಾವು ಬದುಕಿದ್ದ ಕಾಲವರ್ಣವೇ ಬದಲಾಯಿಸುತ್ತಾರೆ. ಅಂತಹ ಮಹಾಪುರುಷರಲ್ಲಿ ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿ ಅವರೂ ಒಬ್ಬರಾಗಿದ್ದಾರೆ. ತಮ್ಮ ಸೇವಾಕೇಂಕಿಯ್, ಚಿಂತನೆ, ಸಂಸ್ಥೆ ಮತ್ತು ಸೇವಾ ಪರಂಪರೆಗೆ ಬುನಾದಿ ಹಾಕಿದ ಅವರು, ಹುತ್ತಿಸಿದ ಒಲೆ ಆರದಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಮತ್ತು ಅರಿವು ನೀಡು ಮೂಲಕ ಅಮರರಾಗಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.
ರಾಧಾಕೃಷ್ಣನ್ ಅವರು ರಾಷ್ಟ್ರಪತಿಗಳಾಗಿದ್ದರೂ ತಾವೊಬ್ಬ ಶಿಕ್ಷಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಬೇಕೆಂದು ಬಯಸಿದ್ದರು. ಅದೇ ರೀತಿ ಭಾರತದ ಖ್ಯಾತ ವಿಜ್ಞಾನಿ, ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಹಾಗೂ ರಾಷ್ಟ್ರಪತಿಗಳಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೂ ಸಹ ತಮನ್ನು ಜನ ಶಿಕ್ಷಕ ಎಂದು ಗುರುತಿಸಬೇಕು ಎನ್ನುತ್ತಿದ್ದರು. ಗುರುವಿನ ಹೃದಯದ ಹಿರಿಮೆ ಎಲ್ಲ ಹುದ್ದೆಗಿಂತ ಮಿಗಿಲಾದು ಎಂದರು.
ಇಂದು ದೇಶ ಕವಲು ದಾರಿಯಲ್ಲಿದೆ. ದೇಶದಲ್ಲಿ ಜಾತಿ, ಧರ್ಮದ ವಿಷಜ್ವಾಲೆ ವ್ಯಾಪಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳಲ್ಲಿ ಸೌಹಾರ್ದ, ಸದ್ಗುಣ, ಸಹಿಷ್ಣುತೆಯನ್ನು ತುಂಬಿ, ಎಲ್ಲರೂ ಸೋದರತ್ವದೊಂದಿಗೆ ಬಾಳುವ ಮೌಲ್ಯಯುತ ಶಿಕ್ಷಣವನ್ನು ನೀಡುವ ಗುರುತರ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದರು.
ಎಲ್ಲ ಮಕ್ಕಳಿಗೂ ಸರ್ಕಾರವೇ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ವೀರಶೈವ, ಲಿಂಗಾಯತ ಮಠ ಮನ್ಹಗಳ ಕೊಡುಗೆ ಅಪಾರವಾದು. ಸಿದ್ಧಗಂಗಾಮಠದಲ್ಲಿ ಯಾವುದೇ ಜಾತಿ, ಮತ, ಪಂಥ, ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಲಾಗಿದೆ. ಈ ಮಠದ ಶಾಲೆಗಳಲ್ಲಿ ಓದಿದ ಯಾವುದೇ ವಿದ್ಯಾರ್ಥಿ ತನ್ನ ಬದುಕಿನಲ್ಲಿ ವಿಫಲನಾಗಿಲ್ಲ. ಯಶಸ್ಸಿ ನ ಒಂದೊಂದೇ ಮಟ್ಟೇಲೇರಿ ಮಹಾನ್ ಸಾಧಕರಾಗಿದ್ದಾರೆ ಎಂದರು.
ಗುರುಶಿಷ್ಯರ ಬಾಂಧವ್ಯಕ್ಕೆ ರಾಧಾಕೃಷ್ಣನ್ ಮಾದರಿ:
ಸರ್ವಪಲ್ಲಿ ರಾಧಾಕೃಷ್ಣನ್ ಅವರು 1918 ರಿಂದ 1921ರವರೆಗೆ ಮೂರು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜ್ ನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಮೈಸೂರು ವಿಶ್ವವಿದ್ಯಾಲಯ ಬಿಟ್ಟು, 1921ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಹೋಗು ವಾಗ ಅವರ ವಿದ್ಯಾರ್ಥಿಗಳು ಅವರು ಪ್ರಯಾಣಿಸುತ್ತಿದ್ದ ರೈಲು ಬೋಗಿಗೆ ಹೂವಿನಿಂದ ಅಲಂಕಾರ ಮಾಡಿ, ಕುದುರೆಗಾಡಿಗೂ ಅಲಂಕಾರ ಮಾಡಿ, ತಮ್ಮ ಗುರುಗಳನ್ನು ಕುದುರೆಗಾಡಿಯಲ್ಲಿ ಕೂರಿಸಿ, ಕುದುರೆ ಬದಲಿಗೆ ತಾವೇ ಗಾಡಿಯನ್ನು ಎಳೆದುಕೊಂಡು ರೈಲು ನಿಲ್ದಾಣದವರೆಗೆ ತಡೆ ಜಯಘೋಷ ಮಾಡಿ ಬೀಳ್ಕೊಟ್ಟಿದ್ದರು ಎಂದು ಕೇಳಿದ್ದೇನೆ. ಇದು ಗುರು–ಶಿಷ್ಯ ಪರಂಪರೆ ಹಿಡಿದ ಕನ್ನಡಿಗಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
