nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ

    August 6, 2026

    ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ

    August 6, 2026

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026
    Facebook Twitter Instagram
    ಟ್ರೆಂಡಿಂಗ್
    • ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ
    • ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ
    • ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ
    • ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ
    • ಸಚಿವ ಸಂಪುಟ ವಿಸ್ತರಣೆ: ಎಚ್.ಕೆ. ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ–ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ
    • ತುಮಕೂರು ಕಾಂಗ್ರೆಸ್ ನಲ್ಲಿ ಆಕ್ರೋಶ ಸ್ಫೋಟ: ವಿಪಕ್ಷ ಸಾಲಿನಲ್ಲಿ ಆಸನ ಕೋರಿದ ಟಿ.ಬಿ. ಜಯಚಂದ್ರ, ಹೆಚ್ ಡಿಕೆಯನ್ನು ಹೊಗಳಿದ ಶಾಸಕ ಶ್ರೀನಿವಾಸ್
    • ಸಚಿವ ಸ್ಥಾನ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ: ಪ್ರಿಯಾಂಕ್ ಖರ್ಗೆ
    • ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಚುರುಕು: 105 ಅಡಿಗೆ ತಲುಪಿದ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ
    ಲೇಖನ September 28, 2025

    ನನ್ನ ದೃಷ್ಟಿಕೋನದಲ್ಲಿ ಆತ್ಮಗಳ ಪರಿಕಲ್ಪನೆ

    By adminSeptember 28, 2025No Comments4 Mins Read
    venugopal

    ನಾನು ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಆತ್ಮಗಳಿಗೆ ಸಂಬಂಧಿಸಿದಂತೆ ಯಾವ ಲೇಖನವನ್ನೂ ಓದಿರುವುದಿಲ್ಲ ಎಂದು ಸ್ಪಷ್ಟೀಕರಣ ಮಾಡುತ್ತಾ ಪ್ರಾರಂಭಿಸುತ್ತೇನೆ. ಒಂದು ವೇಳೆ ನನ್ನ ಈ ಲೇಖನದ ಯಾವುದಾದರೂ ಒಂದು ಅಂಶ ಈ ಹಿಂದಿನ ಯಾರದಾದರೂ ಲೇಖನಕ್ಕೆ ಸಂಬಂಧಪಟ್ಟಿರುವುದು ಕಂಡುಬಂದರೆ ಅದು ಕಾಕತಾಳಿಯವಾಗಿರುತ್ತದೆ.


    ವೈಯಕ್ತಿಕವಾಗಿ ತಿಳಿದಿರುವಂತೆ ನಾನು ಆತ್ಮಗಳಿಗೆ ಸಂಬಂಧಿಸಿದಂತೆ ನಮ್ಮ ಹಿರಿಯರು ಕೆಲವು ಸಂದರ್ಭಗಳಲ್ಲಿ ದೆವ್ವ ಎಂತಲೂ ಕರೆದಿದ್ದಾರೆ, ಇದಕ್ಕೆ ಅವರು ಕೊಡುತ್ತಿದ್ದ ಕಾರಣ ಯಾರಾದರೂ ಬದುಕಿನಲ್ಲಿ ತಮ್ಮದೇ ಕೆಲವು/ಹಲವು ಆಸೆಗಳನ್ನು ಇಟ್ಟುಕೊಂಡು ಆಯಸ್ಸು ತುಂಬುವ ಮೊದಲು ಯಾವುದಾದರೂ ಕಾರಣಕ್ಕೆ, ಅದು ಆತ್ಮಹತ್ಯೆಯಾಗಿರಲೂ ಬಹುದು ಅಥವಾ ಯಾರಿಂದಲಾದರೂ ಸಾವು ಸಂಭವಿಸರಲೂ ಬಹುದು ಈ ಕಾರಣಗಳಿಂದ ಅಸುನೀಗಿದರೆ ಅವರು ಬದುಕಿ ಉಳಿದಿರುವಷ್ಟು ಕಾಲ ಅಸುನೀಗಿದ ಸಮಯದಿಂದ ದೆವ್ವವಾಗಿ (ಅಂತರ ಪಿಶಾಚಿ) ಉಳಿದ ಆಯಸ್ಸನ್ನು ಕಳೆಯಬೇಕಾಗುತ್ತದೆ ಎಂದು ಹೇಳುತ್ತಿದ್ದರು. ನಂತರ ಪುನರ್ಜನ್ಮೋ ಅಥವಾ ಅವರ ಪಾಪದ ಕರ್ಮದನಿಮಿತ್ತ ನರಕವಾಸ ಅಥವಾ ಬೇರೊಂದು ಜೀವಿಯಾಗಿ ಹುಟ್ಟಿ ಶಿಕ್ಷೆ ಅನುಭವಿಸಬೇಕು ಎಂದು ಹಲವು ಸಂದರ್ಭಗಳಲ್ಲಿ ನಮ್ಮ ಹಿರಿಯರು ಹೇಳಿರುವುದು ನನಗೆ ನೆನಪಿದೆ.

    ಈಗ ನಾನು ತಿಳಿಸುತ್ತಿರುವುದೇನೆಂದರೆ ನಾವು ಹಿಂದೂ ಧರ್ಮದ ನಂಬಿಕೆಯಂತೆ ಸ್ವರ್ಗ ನರಕಗಳ ಪರಿಕಲ್ಪನೆ ಇದರ ಬಗ್ಗೆ ನಂಬಿಕೆ ಇರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಆದರೆ ಕೆಲವರು ದೇವರಿದ್ದಾನೆ ದೆವ್ವಗಳು ಇರುವುದಿಲ್ಲ ಎಂದು ನಂಬಿಕೆ ಇಟ್ಟರೆ ಮತ್ತೆ ಕೆಲವರು ದೇವರು ಇದೆ ಎಂದು ನಂಬುವುದಾದರೆ ದೆವ್ವಗಳೂ ಇರುತ್ತವೆ ಎಂದು ವಾದ ಮಾಡುತ್ತಾರೆ. ಇಲ್ಲಿ ನಾನು ಸ್ವರ್ಗ ನರಕದ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸುತ್ತಿಲ್ಲ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು. ಈಗ ವಿಷಯಕ್ಕೆ ಬರುವುದಾದರೆ ನಾವು ಹಿಂದೂ ಧರ್ಮದಲ್ಲಿ ನಂಬಿರುವಂತೆ ನಮ್ಮ ಕರ್ಮಕ್ಕೆ ಅನುಗುಣವಾಗಿ ಸಾವಿನ ನಂತರ ಸ್ವರ್ಗ ಅಥವಾ ನರಕ ಪ್ರಾಪ್ತಿಯಾಗುವುದಾದರೆ, ಇದರ ಬಗ್ಗೆ ನಂಬಿಕೆ ಇರದ ಅಥವ ನಮ್ಮ ಸಿದ್ಧಾಂತ ಒಪ್ಪದ ಪಾಶ್ಚಿಮಾತ್ಯರು ತಮ್ಮ ಸಾವಿನ ನಂತರ ಅವರಿಗೆ ಏನು ಪ್ರಾಪ್ತಿಯಾಗುವುದು? ಅವರು ಹಳೆಯ ಮಹಲ್ ಗಳಲ್ಲಿ ರಾತ್ರಿಯ ವೇಳೆ ಕೆಲವು ವಿಚಿತ್ರ ಶಬ್ದಗಳು ಕೇಳಿಬರುತ್ತಿರುವ ವಿಷಯ ಕುರಿತ ಹಲವು ಲೇಖನಗಳನ್ನು ನಾವು ಅಲ್ಲಿ ಇಲ್ಲಿ ಓದಿರುತ್ತೇವೆ ಮತ್ತು ಅಂತಹ ಶಬ್ದಗಳು ಹಿಂದಿನ ಕೆಲವು ಮಹಾನ್ ವ್ಯಕ್ತಿಗಳ ಸಾವಿನ ನಂತರ ಆತ್ಮರೂಪದಲ್ಲಿ ಇರುವುದರ ಬಗ್ಗೆ ಹಲವು ಕಥೆಗಳನ್ನು (ನಿಜವೋ ಸುಳ್ಳೋ ಗೊತ್ತಿಲ್ಲ) ಆಸಕ್ತಿದಾಯಕವಾಗಿ ಓದಿರುತ್ತೇವೆ. ಹಾಗಾದರೆ ಅವರು ಆತ್ಮಗಳು ಇರುವಿಕೆಯನ್ನು ನಂಬಿದಂತೆ ಆಯ್ತು. ಹಾಗಾದರೆ ಅವರು ಬದುಕಿರುವಾಗ ಮಾಡಿದ ತಪ್ಪಿಗೆ ಅವರಿಗೆ ನರಕವಾಸವಿಲ್ಲವೇ? ವಿಜ್ಞಾನ ಕೇವಲ ಕಣ್ಣಿಗೆ ಕಾಣುವ ಬಗ್ಗೆ ಸಂಶೋಧನೆ ಮಾಡುತ್ತದೆಯೇ ಹೊರತು, ಕಣ್ಣಿಗೆ ಕಾಣದ ಅತೀಂದ್ರೀಯ ಶಕ್ತಿಗಳ ಬಗ್ಗೆ ಏನು ಹೇಳಲೂ ಸಾಧ್ಯವಿಲ್ಲ ಹೇಳಿದರೆ ಸಂಶೋಧಕರ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಕೇವಲ ಊಹಾಪೋಹವಾಗುತ್ತದೆ, ಒಬ್ಬೊಬ್ಬರ ಹೇಳಿಕೆ ಒಂದೊಂದು ರೀತಿ ಇರುತ್ತದೆ ಹೀಗಿರುವಾಗ ವಿಜ್ಞಾನ ಕೇವಲ  ಒಂದು ಪರ ನಿಲ್ಲಬೇಕಾದರೆ ಅದು ಸಾರ್ವಕಾಲಿಕ ಒಪ್ಪುವಂತೆ ಇರಬೇಕು.

    ಇಲ್ಲಿ ಒಂದು ವಿಷಯದ ಬಗ್ಗೆ ಚಿಂತಿಸುವಾಗ ನನ್ನ ಚಿಂತನಗೆ ಬಂದಿದ್ದು ಓರ್ವ ವ್ಯಕ್ತಿ ಅಸುನೀಗಿದ ನಂತರ ಆತನ ಮೆದುಳು ನಿಷ್ಕ್ರಿಯಗೊಂಡ ತಕ್ಷಣ ಆತ ಎಲ್ಲವನ್ನು ಮರೆಯುತ್ತಾನೆ, ತಾನು ಬದುಕಿ ಬಾಳಿದ ಎಲ್ಲವೂ ಅಳಿಸಿದಂತೆ ಆಗಬಹುದು, ಮತ್ತು ಆತನ ದೇಹದ ಶಾಖ ಪ್ರಕೃತಿಯಲ್ಲಿ ಲೀನವಾಗಿ ಹೋಗುತ್ತದೆ. ಎಂದುಕೊಳ್ಳಬಹುದು. ಆ ವ್ಯಕ್ತಿಗೆ ಮುಂದೆ ನಡೆಯುವ ಯಾವ ಪ್ರಕ್ರಿಯೆಯೂ ತಿಳಿಯುವುದಿಲ್ಲ. ಮತ್ತೊಂದು ಚಿಂತನೆಯಂತೆ ದೇಹದಿಂದ ಆತ್ಮ ಬೇರ್ಪಟ್ಟಮೇಲೆ ವ್ಯಕ್ತಿ ತಾನೊಂದು ಕನಸಿನಲ್ಲಿ ಇರುವಂತೆ ಭಾಸವಾಗಬಹುದು, (ಇಲ್ಲಿ ನಾವು ಬದುಕಿದ್ದಾಗ ನಮ್ಮ ಮನಸ್ಸನ್ನು ನಮ್ಮ ದೇಹವನ್ನು ಆಳುತ್ತಿರುವ ಆತ್ಮ ಎಂದು ಅಂದುಕೊಳ್ಳೋಣ ಏಕೆಂದರೆ ನಿರ್ಜೀವ ದೇಹ ಏನು ಮಾಡಲಾಗದು, ದೇಹಕ್ಕೆ ಆತ್ಮದ ಅವಶ್ಯಕತೆ ಇದ್ದರೆ, ಆತ್ಮಕ್ಕೆ ದೇಹದ ಅವಶ್ಯಕತೆ ಇರುತ್ತದೆ.) ಹಾಗೂ ಎಚ್ಚರವಾಗಲು ಶತಾಯ ಗತಾಯ ಎಷ್ಟು ಪ್ರಯತ್ಮಪಟ್ಟರೂ ಸಾಧ್ಯವಾಗದಂತೆ ಆಗಬಹುದು, ಅಯ್ಯೋ ಇದೇಕೆ ಹೀಗೆ ಆಗುತ್ತಿದೆ ಅನ್ನಿಸಬಹುದು. ಲೌಕಿಕ ಜಗತ್ತನ್ನು ನೋಡುತ್ತಿರುವಂತೆ ಭಾಸವಾಗಬಹುದು, ಆದರೆ ಯಾರ ಬಳಿ ಹೋಗಿ ಯಾರನ್ನು ಸಂಪರ್ಕಿಸಿದರೂ ಅವರು ನಮಗೆ ಯಾವುದೇ ಪ್ರತಿಕ್ರಿಯೆ ಕೊಡದಂತೆ ಆಗಬಹುದು. ಒಂದು ವೇಳೆ ಆತ್ಮ ದೇಹದಿಂದ ಬೇರ್ಪಟ್ಟಮೇಲೆ ತನ್ನ ದೇಹಕ್ಕೆ ಸಾವು ಸಂಭವಿಸಿದೆ ಎಂದು ತಿಳಿಯಲೂ ಬಹದು ಆದರೆ ಸಾಯುವ ಮೊದಲು ಹಲವರೊಂದಿಗೆ ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸದಂತೆ ಆಯಿತಲ್ಲಾ ಎಂಬ ನೋವು ಉಂಟಾಗಬಹುದು. ಅದನ್ನು ತಿಳಿಯಪಡಿಸಲು ಯಾವುದೇ ದಾರಿ ಇಲ್ಲವಲ್ಲವೆಂಬ ಅತಿ ನೋವು ಉಂಟಾಗಬಹುದು. ಚಡಪಡಿಸಬಹುದು. ಆದರೆ ಇವೆಲ್ಲವೂ ನನ್ನ ಕಾಲ್ಪನಿಕ.

    ಒಂದು ವೇಳೆ ವಿಧಿ ವ್ಯಕ್ತಿಯ ಸಾವಿನ ನಂತರ ಆತ್ಮಕ್ಕೆ ಹಿಮ್ಮುಖ ಚಲನೆಯ ಆಯಸ್ಸನ್ನು ನೀಡಲೂ ಬಹುದು ಅಂದರೆ ವ್ಯಕ್ತಿ ಹುಟ್ಟಿದ ಸಮಯದಿಂದ ಆತನ ಆಯಸ್ಸು ಮುಮ್ಮುಖ ಚಲನೆ ಆರಂಭಿಸಿ ಅಂದರೆ 1,2,3 ವರುಷದಂತೆ ಜೀವಿತ ದೇಹದ ಜೀವನ ಅನುಭವಿಸಿ ಕೊನೆಗೆ 80 ವರುಷ ಬದುಕಿ ನಂತರ ಅಸುನೀಗಿದ ಅಂದುಕೊಳ್ಳೋಣ, ಆಗ ಆತ ಅಸುನೀಗಿದ ಸಮಯದಿಂದ ಮತ್ತೆ ಆತ ಆತ್ಮರೂಪದಲ್ಲಿ 80,79,78 ಹೀಗೆ ಆತ್ಮಜೀವನ ಸಾಗಿಸಿ ಕೊನೆಗೆ 1 ವರುಷದ ಆತ್ಮವಾಗಿ, 1 ದಿನದ ಆತ್ಮವಾಗಿ ಕೊನೆಗೆ ಒಂದು ಸಮಯದಲ್ಲಿ ಮತ್ತೆ ಒಂದು ದೇಹಜೀವ ತಳೆಯಬಹುದು ಅನ್ನಿಸುತ್ತದೆ. ಏಕೆಂದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಇಲ್ಲಿ ಹುಟ್ಟಿದ ಮಗುವಿಗೆ ತಾನು ಎಲ್ಲಿಂದ ಬಂದೆ ಮತ್ತು ಈ ಮೊದಲು ನಾನು ಏನಾಗಿದ್ದೆ ಎಂಬ ಬಗ್ಗೆ ಯಾವುದೇ ನೆನಪು ಇರುವುದಿಲ್ಲ ಹಾಗೂ ದೊಡ್ಡವರಾದ ಮೇಲೂ ನೆನಪಾಗುವುದಿಲ್ಲ ಅಲ್ಲವೆ, ಇದಕ್ಕೆ ಕಾರಣ ಆತ್ಮಗಳ ಆಯಸ್ಸಿನ ಹಿಂಮ್ಮುಖ ಚಲನೆ ಕಾರಣವಾಗಿರಬಹುದು, ಏಕೆಂದರೆ ಎಲ್ಲವನ್ನು ಮರೆಸುವ ವಿಧಿಯ ನಿಯಮವಾಗಿರಲೂ ಬಹುದು.

    ಇಲ್ಲಿ ಒಂದೊಂದು ವರುಷ ಕಡಮೆಯಾದಂತೆ ಆತ್ಮಕ್ಕೆ ಮರೆವು ಸಂಭವಿಸುತ್ತಿರಬಹುದು ಏಕೆಂದರೆ ಆತ್ಮ ವಯಸ್ಸಿನಲ್ಲಿ ಚಿಕ್ಕದಾಗುತ್ತಾ ಹೋದಂತೆ ಹಾಗೂ ಒಂದು ವರುಷ, ಒಂದು ದಿನದ ಆಯಸ್ಸಿನ ಆತ್ಮವಾಗುತ್ತಿದ್ದಂತೆ ಎಲ್ಲ ಮರೆತಿರುವ ಆತ್ಮ ‘ಪುನರಪಿ ಜನನಂ’ ಎಂಬಂತೆ ಮತ್ತೊಂದು ದೇಹ ಸಿಗಬಹುದು ಅನ್ನಿಸುತ್ತದೆ. ಅಂದರೆ ಇಲ್ಲಿ ವಿಧಿ ದೈಹಿಕ ಮತ್ತು ಆತ್ಮರೂಪ ಈ ಎರಡು ಜೀವನವನ್ನು ಸಮವಾಗಿ ಸಮತೋಲನ ಮಾಡುವಂತೆ ಇದ್ದರೆ, ಆತ್ಮರೂಪದಲ್ಲಿ ಮತ್ತೆ 80 ವರುಷ ಬದುಕಬೇಕಾಗುತ್ತದೆ ಎಂಬಂತೆ ಆಗುತ್ತದೆ.  ಒಂದು ವೇಳೆ ಆತ್ಮರೂಪ ಜೀವನದಲ್ಲಿ ಹಿಮ್ಮುಖ ಚಲನೆಯ ಆಯಸ್ಸು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ, ಪುನಃ ಬಹುಬೇಗ ಪುನರ್ಜನ್ಮ ಪಡೆಯುವ ಆತ್ಮಕ್ಕೆ ದೇಹ ಮತ್ತು ಮನಸ್ಸು ದೊಡ್ಡದಾದಂತೆ ಒಂದೊಂದೇ ನೆನಪಾಗಬೇಕಿತ್ತು ಆದರೆ ಕಾಕತಾಳಿಯವಂತೆ ಕೆಲವರು ತಮ್ಮ ಪುನರ್ ಜನ್ಮವನ್ನು ನೆನಪು ಮಾಡಿಕೊಂಡು ತಮ್ಮ ಹಿಂದಿನ ಜನುಮದ ವೃತ್ತಾಂವನ್ನೆಲ್ಲಾ ತಿಳಿಸುವ ವಿಚಾರ ನೋಡಿರುತ್ತೇವೆ. ಆದರೆ ಆತ್ಮಜೀವನದ ಬಗ್ಗೆ ಕೆಲವು ಕಥೆಗಳನ್ನು ಕೇಳಿರುತ್ತೇವೆ ಯಮಧರ್ಮ ನಿಮಗೆ ಇನ್ನೂ ಆಯಸ್ಸು ಮುಗಿದಿಲ್ಲ ಹೋಗಿ ಎಂದು ನಮ್ಮನ್ನು ಮತ್ತೆ ತಳ್ಳಿದ ಎಂದು, ಇದನ್ನು ನಂಬುವ ಯಾವುದೇ ಪುರಾವೆ ಮತ್ತು ಖಚಿತತೆ ಇರುವುದಿಲ್ಲ.

    ಪರಿಕಲ್ಪನೆ: ವೇಣುಗೋಪಾಲ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026

    ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ “ಓ ಮೈ ಡಾಗ್”  ಆಗಸ್ಟ್ 7ರಂದು  ಅದ್ದೂರಿ ರಿಲೀಸ್

    August 5, 2026

    ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು

    August 2, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರದಿಂದ ₹2 ಲಕ್ಷ ಧನಸಹಾಯ

    August 6, 2026

    ತಿಪಟೂರು: ತಿಪಟೂರು ಗ್ರಾಮಾಂತರ ತಾಲೂಕಿನ ಬಿಳಿಗೆರೆ ವಲಯದ ಕುಪ್ಪುರು ಕಾರ್ಯಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ…

    ಬೀದರ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಸುರೇಖಾ ನೇಮಕ

    August 6, 2026

    ಕರ್ನಾಟಕದ ಮೊದಲ ಎಲೆಕ್ಟಾ ಯುನಿಟಿ ಎಂಆರ್–ಲೈನಾಕ್ ಯಂತ್ರ ಅನಾವರಣ, ಕ್ಯಾನ್ಸರ್ ರೋಗಿಗಳಿಗೆ HCG ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    August 6, 2026

    ಹೊಳೆನರಸೀಪುರಕ್ಕೆ ನೂತನ ವಸತಿ ಸಚಿವ ಕೆ.ಎಂ.ಶಿವಲಿಂಗೇಗೌಡ ಭೇಟಿ: ಪಟಾಕಿ, ಸೇಬಿನ ಹಾರ ಹಾಕಿ ಭವ್ಯ ಸ್ವಾಗತ

    August 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.