ಪಾವಗಡ: ಅಸಂಘಟಿತ ಕಾರ್ಮಿಕರ ಶ್ರೇಯಸ್ಸಿಗೆ ಹೆಲ್ಪ್ ಸೊಸೈಟಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಸರ್ಕಾರಿ ಆಸ್ಪತ್ರೆ ಮೂಳೆ ರೋಗ ತಜ್ಞರಾದ ಡಾ.ರಮೇಶ್ ತಿಳಿಸಿದರು.
ಸಿದ್ದಗಂಗಾ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 115 ನೇ ಜನುಮ ದಿನದ ಅಂಗವಾಗಿ ಹಾಗೂ ಯುಗಾದಿ ಹಬ್ಬದ ಉಡುಗೊರೆಯಾಗಿ ಪಟ್ಟಣದ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕ ವರ್ಗಾವಾದ ಬಡಗಿ ಕಾರ್ಮಿಕರು, ಚಲನ ಚಿತ್ರ ಮಂದಿರ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಕ್ತಿ ಕ್ಲಿನಿಕ್ ವೈದ್ಯರಾದ ಶಕ್ತಿ ಮೇಡಂ ರವರು ಮಾತನಾಡುತ್ತಾ ಕಾಯಕ ಯೋಗಿ,ತ್ರಿವಿದ ದಾಸೋಹಿ,ಆದುನಿಕ ಬಸವಣ್ಣ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನುಮ ದಿನಕ್ಕೆ ಹೆಲ್ಪ್ ಸೊಸೈಟಿ ಸಂಸ್ಥೆ ಅಸಂಘಟಿ ತ ಕಾರ್ಮಿಕರನ್ನು ಗುರುತಿಸಿ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸುತ್ತಿರುವುದು ಅಭಿನಂದನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಶ್ರೀಮತಿ ಸಂದ್ಯಾ ಮಾನಂ ಶಶಿಕಿರಣ್,ಕಾರ್ಮಿಕ ಸಂಘಟನೆಯ ನಜೀರ್, ಅಲ್ಲಾಬಕ್ಷ, ಸಾಯಿ ಕುಮಾರ್, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಗೌತಮ್, ಶ್ರೀಕಾಂತ್ ವೀರ, ರಾಜು, ವೆಂಕಟೇಶ್ ನಾಯಕ್,, ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5