ಗುಬ್ಬಿ: ತುಮಕೂರು ಅಶೋಕ ನಗರದಲ್ಲಿರುವ ಜಿಲ್ಲೆಯ ಹೆಸರಾಂತ ಮಹೇಶ್ ಪಿ.ಯು.ಕಾಲೇಜಿನಿಂದ ಆಗಮಿಸಿದ್ದ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿರವರು ತಾಲೂಕಿನಲ್ಲಿರುವ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಜಿಲ್ಲೆಯಲ್ಲಿ ಮಹೇಶ್ ಪಿ.ಯು. ವಿದ್ಯಾಸಂಸ್ಥೆ ಒಂದೇ ಶಾಖೆ ಇರುವುದಾಗಿ ತಿಳಿಸಿದರು.
ಗುಬ್ಬಿ ಪಟ್ಟಣದ ಹೆಸರಾಂತ ಪ್ರಿಯಾ ಆಂಗ್ಲ ಶಾಲೆ, ನಿಟ್ಟೂರು ಸಿದ್ದಶ್ರೀ, ವಿದ್ಯಾಶಾಲೆ ಮತ್ತು ತಾಲೂಕಿನ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಉಪನ್ಯಾಸಕ ಹರೀಶ್ ಮತ್ತು ನಾಗಲಕ್ಷ್ಮಿರವರು ವಿದ್ಯಾರ್ಥಿಗಳೊಂದಿಗೆ ಕಾಲೇಜು ಶಿಕ್ಷಣ ಕುರಿತು ಸಂವಾದ ನಡೆಸಿದರು.
ಈ ವೇಳೆ ಉಪನ್ಯಾಸಕರಾದ ಹರೀಶ್ ಮತ್ತು ನಾಗಲಕ್ಷ್ಮಿಮಾತನಾಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ಕಾಲೇಜು ಶಿಕ್ಷಣ ಕುರಿತು ವಿದ್ಯಾರ್ಥಿಗಳ ಪಾತ್ರ ಮತ್ತು ಪೋಷಕರ ಪಾತ್ರದ ಹಲವು ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ ತಮ್ಮ ಮಹೇಶ್ ಪಿ.ಯು. ಕಾಲೇಜು ತುಮಕೂರು ಜಿಲ್ಲಾಧ್ಯಂತ ಒಂದೇ ಶಾಖೆ ಇರುವುದಾಗಿ ಮಾಹಿತಿ ನೀಡಿದರು. ತಮ್ಮ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ ಸಾಲಿನಲ್ಲಿ ಹಾಗೂ ಇನ್ನುಳಿದ ವರ್ಷಗಳ ಸಾಲಿನಲ್ಲಿ ಜಿಲ್ಲೆಯಲ್ಲೆ ಉತ್ತಮ ಪ್ರಗತಿ ಸಾಧಿಸಿದ ಶಿಕ್ಷಣ ಸಂಸ್ಥೆಯಾಗಿದೆ. ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಸಂಬಂಧಿಸಿದ ಮಾಹಿತಿಗಾಗಿ ಸಂಸ್ಥೆಯ ಬಗ್ಗೆ ಅಂತರ್ಜಾಲದಲ್ಲಿ ಪರಿಶೀಲಿಸುವುದಾಗಿ ಮನವಿ ಮಾಡಿದರು. ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಮುಂದಿನ ಶಿಕ್ಷಣ ಭವಿಷ್ಯ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಿಯಾ ಆಂಗ್ಲ ಶಾಲೆ ಸಂಸ್ಥೆಯ ಮುಖ್ಯಸ್ಥರಾದ ದೀಪಕ್ ರವರು. ನಿಟ್ಟೂರು ಸಿದ್ದಶ್ರೀ ವಿದ್ಯಾ ಶಾಲೆಯ ಮುಖ್ಯ ಶಿಕ್ಷಕರು, ಸೇರಿದಂತೆ ಶಾಲಾ ಸಹಾ ಶಿಕ್ಷಕರು ಆಡಳಿತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy