ಸಾಮಾಜಿಕ ಕಾರ್ಯ ಕರ್ತ ಮಾಧವ ರಾವ್ ಬಾಗಲ್( 1895-1986) ಅವರು ದಿ 9/12/1950 ರಲ್ಲಿ ಕೊಲ್ಹಾಪುರದಲ್ಲಿ ಪ್ರಪ್ರಥಮವಾಗಿ ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದರು.ಇದು ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವಂತದ ಅವಧಿಯಲ್ಲೇ ನಡೆದದ್ದು.ಬಾಬಾಸಾಹೇಬರು ಈ ಮೂರ್ತಿಯ ದರ್ಶನ ಕೂಡಾ ಮಾಡಿದ್ದರು.
ಮಹಾರಾಷ್ಟದ ಕೊಲ್ಹಾಪುರನಗರದಲ್ಲಿರುವ ಹಿಂದೂ ಚೌಕ್ ನಲ್ಲಿ ಈ ಮೂರ್ತಿ ಒಂದು ಐತಿಹಾಸಿಕ ಮೂರ್ತಿಯಾಗಿದೆ.ಇದು ವಿಶ್ವದ ಮೊಟ್ಟ ಮೊದಲ ಪ್ರತಿಮೆಯಾಗಿದೆ.1950 ಬಾಬಾಸಾಹೇಬರ ಮೂರ್ತಿಯನ್ನು ಅನಾವರಣ ಮಾಡಲಾಗಿತ್ತು.ಮಾಧವರಾವ್ ಬಾಗಲ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.ಬಾಬಾಸಾಹೇಬರು ಬದುಕಿರುವಾಗಲೇ ಈ ಮೂರ್ತಿ ನಿರ್ಮಾಣ ಮಾಡಲಾಗಿದ್ದು ಇದನ್ನು ಬಾಳ್ ಚೌಹಾಣ ಅನ್ನುವವರು ತಯಾರಿಸಿದ್ದರು. ಅದೇ ರೀತಿಯಲ್ಲಿ ನಮ್ಮ ಮೂಲನಿವಾಸಿ ಅಂಬೇಡ್ಕರ್ ಸಂಘದವತಿಯಿಂದ 2ನೇ ಮೂರ್ತಿಯಾಗಿದ್ದು ಇದು 11/12/22ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ತಾವೆಲ್ಲರೂ ಬಂದು ಭಾಗವಹಿಸಿ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಈ ಕಾರ್ಯಕ್ರಮನ ಯಶಸ್ವಿಗೊಳ್ಳಿಸೋಣ… ಜೈ ಭೀಮ್ ಜೈ ಮೂಲನಿವಾಸಿ ಅಂಬೇಡ್ಕರ್ ಸಂಘ…
ಇಂತೀ ನಿಮ್ಮ
ಪಿ ಲೋಕೇಶ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy