nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಜ್ ಯಾತ್ರಿಕರು ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸಿಕೊಳ್ಳಬೇಕಾಗಿದೆ: ಸಚಿವ ರಹೀಮ್ ಖಾನ್

    May 14, 2025

    ಕುಣಿಗಲ್:  ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್‌!: ಕೊಲೆ ನಡೆದಿರುವುದು ಬಯಲು

    May 14, 2025

    ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ: ಮೇ 20ರಂದು ಸಾಧನಾ ಸಮಾವೇಶ

    May 14, 2025
    Facebook Twitter Instagram
    ಟ್ರೆಂಡಿಂಗ್
    • ಹಜ್ ಯಾತ್ರಿಕರು ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸಿಕೊಳ್ಳಬೇಕಾಗಿದೆ: ಸಚಿವ ರಹೀಮ್ ಖಾನ್
    • ಕುಣಿಗಲ್:  ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್‌!: ಕೊಲೆ ನಡೆದಿರುವುದು ಬಯಲು
    • ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ: ಮೇ 20ರಂದು ಸಾಧನಾ ಸಮಾವೇಶ
    • ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಬಿಡುಗಡೆ
    • ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಡ್ಲಾಪುರ ಪಿಡಿಓ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
    • ಉದ್ಯೋಗ: ಮೇ 16ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ
    • ರಾಕೇಶ್ ಪೂಜಾರಿ ಸಾವಿಗೂ ಕಾಂತಾರ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ: ಚಿತ್ರತಂಡ ಸ್ಪಷ್ಟನೆ
    • ಬಿ.ವಿ.ಎ: ಚಿತ್ರಕಲಾ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿಇಓ ವೈಯಕ್ತಿಕ ಜಿದ್ದಿಗೆ 8ಜನ ಶಿಕ್ಷಕರಿಗೆ ಅಮಾನತು | ಲೋಕಾಯುಕ್ತಗೆ ದೂರು ನೀಡಿದ್ರೇ ಬಿಇಓ ನೀಡ್ತಾರೇ ಅಮಾನತು ಶಿಕ್ಷೆ
    ಕೊರಟಗೆರೆ April 17, 2025

    ಬಿಇಓ ವೈಯಕ್ತಿಕ ಜಿದ್ದಿಗೆ 8ಜನ ಶಿಕ್ಷಕರಿಗೆ ಅಮಾನತು | ಲೋಕಾಯುಕ್ತಗೆ ದೂರು ನೀಡಿದ್ರೇ ಬಿಇಓ ನೀಡ್ತಾರೇ ಅಮಾನತು ಶಿಕ್ಷೆ

    By adminApril 17, 2025No Comments2 Mins Read
    beo

    ವರದಿ : ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : ಬಿಇಓ ಸಿ.ವಿ.ನಟರಾಜು ವಿರುದ್ದ ಕಚೇರಿಯ ಭ್ರಷ್ಟಚಾರದ ಬಗ್ಗೆ ತುಮಕೂರು ಲೋಕಾಯುಕ್ತ ಕಚೇರಿಗೆ ಶಿಕ್ಷಕ ಎಸ್.ದೇವರಾಜಯ್ಯ ದೂರು ನೀಡಿದ್ರೇ ಕಾರಣವೇ ನೀಡದೇ ಬಿಇಓ ವೈಯಕ್ತಿಕ ಜಿದ್ದಿನ ದ್ವೇಷದಿಂದ ಶಿಕ್ಷಕನನ್ನು ಏಕಾಏಕಿ ಅಮಾನತು ಮಾಡಿರುವ ಘಟನೆಗೆ ಎಲ್ಲೆಡೆಯು ಆಕ್ರೋಶ ವ್ಯಕ್ತವಾಗಿದೆ.


    Provided by

    ಕೊರಟಗೆರೆ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ರಾಜ್ಯ ಭೀಮಸೇನಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ದಿಢೀರ್ ಮುತ್ತಿಗೆ ಹಾಕಿ ಅಮಾನತು ಮಾಡಿರುವ ಶಿಕ್ಷಕರಿಗೆ ಕಾರಣ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಇಓ ನಟರಾಜು ಅಮಾನತಿಗೆ ಆಗ್ರಹ ಮಾಡಿದರು.

    ಭೀಮಸೇನಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಬಿಇಓ ನಡುವೆ ಗಂಟೆಗೂ ಹೆಚ್ಚುಕಾಲ ಮಾತಿನ ಚಕಮಕಿ ನಡೆಯಿತು. ಶಿಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಕಚೇರಿಯಿಂದ ಹೊರಗಡೆ ಬಿಇಓ ತಡೆದು ಮತ್ತೆ ಶಿಕ್ಷಕರು ಮುತ್ತಿಗೆ ಹಾಕಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಜಗಳವನ್ನು ಬಿಡಿಸಿ ಸಮಾಧಾನ ಮಾಡಿದ ಘಟನೆಯು ನಡೆಯಿತು.

    ಬಿಇಓ ಕೇಂದ್ರಸ್ಥಾನದಲ್ಲೇ ಏಕೆ ಇಲ್ಲ:

    ಕೊರಟಗೆರೆ ಬಿಇಓ ನಟರಾಜು ಶಿಕ್ಷಣ ಇಲಾಖೆ ಕಚೇರಿಗೆ ಪ್ರತಿನಿತ್ಯ ಬೆಂಗಳೂರು ಮತ್ತು ತುಮಕೂರು ನಗರದಿಂದ ಕಚೇರಿಗೆ ಬರ್ತಾರೇ. ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಬಿಇಓ ಕೇಂದ್ರಸ್ಥಾನದಲ್ಲೇ ವಾಸ ಇರಬೇಕಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಮತ್ತು ಫಲಿತಾಂಶದ ಕಾಳಜಿ ಹೇಗೆ ಸಾಧ್ಯ. ಶಿಕ್ಷಣ ಇಲಾಖೆ ತಕ್ಷಣ ಬಿಇಓ ವಿರುದ್ದ ಕ್ರಮ ಕೈಗೊಳ್ಳಬೇಕಿದೆ ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

    2 ತಿಂಗಳಲ್ಲಿ 8ಜನ ಶಿಕ್ಷಕರ ಅಮಾನತು:

    ಮುಗ್ಗೊಂಡನಹಳ್ಳಿ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿ ಕಮಲಮ್ಮ, ಸಹಶಿಕ್ಷಕ ಶಿವಮ್ಮ,  ಜೋನಿಗರಹಳ್ಳಿ ಮುಖ್ಯಶಿಕ್ಷಕಿ ಸಿದ್ದಲಕ್ಷ್ಮಮ್ಮ, ಸೂರೇನಹಳ್ಳಿಯ ಮುಖ್ಯಶಿಕ್ಷಕಿ ಸುವರ್ಣಮ್ಮ, ಕೆರೆಯಾಗಲಹಳ್ಳಿ ಮುಖ್ಯಶಿಕ್ಷಕ ದೇವರಾಜಯ್ಯ, ಚಿಂಪುಗಾನಹಳ್ಳಿ ಮುಖ್ಯಶಿಕ್ಷಕ ಹನುಮಂತರಾಯಪ್ಪ, ಸಹಶಿಕ್ಷಕ ಅನಂತರಾಜು, ಅಲಪನಹಳ್ಳಿ ಮುಖ್ಯಶಿಕ್ಷಕ ರಾಮಚಂದ್ರಯ್ಯನಿಗೆ ತಿಳುವಳಿಕೆಯ ನೊಟೀಸ್ ನೀಡದೇ ಬಿಇಓ ನಟರಾಜು ಏಕಪಕ್ಷಿಯವಾಗಿ ಅಮಾನತು ಮಾಡಿದ್ದಾರೆ.

    ಬಿಇಓ ವಿರುದ್ದ ಠಾಣೆಗೆ ದೂರು:

    ಅಮಾನತು ಆದೇಶದ ವಿರುದ್ದ ನ್ಯಾಯ ಕೇಳಲು ನಾವು ಬಂದ್ರೇ ಬಿಇಓ ನಟರಾಜು ಏಕಾಏಕಿ ನಮ್ಮ ಮನವಿಯನ್ನ ಆಲಿಸದೇ ಸಿಬ್ಬಂದಿಗಳನ್ನು ಕರೆದು ಹೊರಗಡೇ ದಬ್ಬುವಂತೆ ಹೇಳಿದ್ರು. ಅಂಬೇಡ್ಕರ್, ಭೀಮಾಸೇನಾ ಎಲ್ಲ ಕಂಡಿದ್ದೀನಿ ಹೊರಗಡೆ ನಡೀರಿ, ಯಾವ ಸಂವಿಧಾನ, ಕಾನೂನು ಇಲ್ಲಿ ನಡೆಯೋದಿಲ್ಲ, ನಿನ್ನ ವೇತನ ಹೇಗೆ ಪಡಿತೀಯಾ ನೋಡ್ತಿನಿ ಎಂಬ ಅಂಶಗಳನ್ನು ಬರೆದು ಬಿಇಓ ನಟರಾಜು ವಿರುದ್ದ ಕ್ರಮಕ್ಕಾಗಿ ಎಸ್.ದೇವರಾಜಯ್ಯ ಕೊರಟಗೆರೆ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.

    ಬಿಇಓ ಕಚೇರಿಯ ಭ್ರಷ್ಟಾಚಾರದ ಬಗ್ಗೆ ವಿರುದ್ದ ನಾನು ಲೋಕಾಯುಕ್ತ ಕಚೇರಿಗೆ ನಾನು ದೂರು ನೀಡಿದ್ದೇನೆ. ಏ.3ರಂದು ಲೋಕಾಯುಕ್ತ ಅಧಿಕಾರಿಗಳು ಬಿಇಓ ಕಚೇರಿಗೆ ತನಿಖೆಗೆ ಬಂದ್ರು. ನಮ್ಮ ಬಿಇಓ ನಮ್ಮ ಶಾಲೆಗೆ ಏ.5ರಂದು ಬಂದು ಪರಿಶೀಲನೆ ನಡೆಸಿ ಸರಿಯಾಗಿ ಎಂದು ಸಹಿ ಹಾಕಿದ್ರು. ಕಾರಣವೇ ನೀಡದೇ ನನ್ನನ್ನು ಏ.7ರಂದು ನನ್ನನ್ನು ಅಮಾನತು ಮಾಡಿದ್ದಾರೆ ಇದು ನ್ಯಾಯವೇ.

    — ಎಸ್.ದೇವರಾಜಯ್ಯ, ಮುಖ್ಯಶಿಕ್ಷಕ, ಕೆರೆಯಾಗಲಹಳ್ಳಿ


    ಶಿಕ್ಷಣ ಇಲಾಖೆಯ ಬಿಇಓ ಸ್ಥಾನ ಮತ್ತು ಕೆಲಸದ ಬಗ್ಗೆ ನಟರಾಜುಗೆ ನಿಜವಾಗ್ಲು ಗೊತ್ತಿಲ್ಲ. 8ಜನ ಶಿಕ್ಷಕರಿಗೆ ಕಾರಣವೇ ನೀಡಿದೇ ಅಮಾನತು ಮಾಡಿದ್ದಾರೇ. ಶಿಕ್ಷಣ ಇಲಾಖೆ ಬಿಇಓ ನಟರಾಜು ಅಮಾನತು ಮಾಡಿ ತಕ್ಷಣ ತನಿಖೆ ನಡೆಸಬೇಕು. ಇಲ್ಲವಾದ್ರೇ ನಾವು ರಾಜ್ಯಾಧ್ಯಂತ ಬಿಇಓ ವಿರುದ್ದ ಪ್ರತಿಭಟನೆ ನಡೆಸುವುದು ಅನಿವಾರ್ಯ.

    — ಇಂದ್ರಕುಮಾರಿ, ರಾಜ್ಯ ಮಹಿಳಾಧ್ಯಕ್ಷೆ, ಭೀಮಸೇನಾ ನೌಕರರ ಸಂಘ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಕಿರುಕುಳ: ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

    May 13, 2025

    ಇತಿಹಾಸ ಪ್ರಸಿದ್ಧ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯದ ಟ್ರಸ್ಟ್ ಸೀಜ್! | ಕೋಟ್ಯಾಂತರ ಹಣ ಗೋಲ್‌ ಮಾಲ್, ತನಿಖೆಗೆ ಆದೇಶ

    May 11, 2025

    ಮೇ 13ಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣರ 75ನೇ ಜನ್ಮದಿನದ ಅಮೃತೋತ್ಸವ ಸಮಾರಂಭ

    May 5, 2025
    Our Picks

    ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಬಿಡುಗಡೆ

    May 14, 2025

    ವಾಯುನೆಲೆ ಮೇಲೆ ಭಾರತ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ: ಪಾಕಿಸ್ತಾನದ ಮಿಲಿಟರಿ ವಕ್ತಾರ

    May 10, 2025

    ಶ್ರೀನಗರ, ಪಠಾಣ್ ಕೋಟ್ ನಲ್ಲಿ ಹಲವು ಕಡೆ ಸ್ಫೋಟ: ಅಮೃತಸರದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ

    May 10, 2025

    ಪಾಕಿಸ್ತಾನದ ಡ್ರೋನ್ ದಾಳಿ: ಒಂದೇ ಕುಟುಂಬದ ಮೂವರಿಗೆ ಗಾಯ: ಒಬ್ಬರ ಸ್ಥಿತಿ ಗಂಭೀರ

    May 10, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಹಜ್ ಯಾತ್ರಿಕರು ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸಿಕೊಳ್ಳಬೇಕಾಗಿದೆ: ಸಚಿವ ರಹೀಮ್ ಖಾನ್

    May 14, 2025

    ತುಮಕೂರು: ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಹಜ್ ಯಾತ್ರಿಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ…

    ಕುಣಿಗಲ್:  ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್‌!: ಕೊಲೆ ನಡೆದಿರುವುದು ಬಯಲು

    May 14, 2025

    ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ: ಮೇ 20ರಂದು ಸಾಧನಾ ಸಮಾವೇಶ

    May 14, 2025

    ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಬಿಡುಗಡೆ

    May 14, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.