ತುರುವೇಕೆರೆ: ಪಟ್ಟಣದಲ್ಲಿ ಸಿ.ಐ.ಟಿ.ಯು. ಕಾರ್ಮಿಕ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಸತೀಶ್ ನೇತೃತ್ವದಲ್ಲಿ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ‘ಸರ್ಕಾರಿ ಉದ್ದಿಮೆಗಳ ಖಾಸಗೀಕರಣ’ವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಬಾಲಕರ ಪ್ರಾಥಮಿಕ ಶಾಲೆಯ ಬಳಿ ಸೇರಿದ ಪ್ರತಿಭಟನಾಕಾರರು ಬಳಿಕ, ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆಯಲ್ಲಿ ಸಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿಯ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿ.ಐ.ಟಿ. ಯು.ಸತೀಶ್ , ಇದೆ ತಿಂಗಳ 28 ಮತ್ತು 29 ರಂದು, ಸಿ.ಐ.ಟಿ.ಯು. ಸಂಘಟನೆಯ ಕರೆಯ ಮೇರೆಗೆ, ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣವನ್ನು ವಿರೋದಿಧಿಸಿ ದೇಶವ್ಯಾಪಿ ಮುಷ್ಕರ, ಹಮ್ಮಿಕೊಂಡಿದ್ದು ,ಇದಕ್ಕೆ ಗ್ರಾಮ ಪಂಚಾಯಿತಿ ನೌಕರರ ಸಂಘಟನೆ, ಅಕ್ಷರ ದಾಸೋಹದ , ಸಂಘಟನೆ, ಅಂಗನವಾಡಿ ನೌಕರರ ಸಂಘದ ಸಂಘಟನೆ, ಕಟ್ಟಡ ಕಾರ್ಮಿಕರ ಸಂಘಟನೆ, ರಾಜ್ಯ ರೈತ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳು ,ನಮಗೆ ಬೆಂಬಲಿಸಿವೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ, ಬಿ.ಎಸ್.ಎನ್. ಎಲ್. , ಪೆಟ್ರೋಲಿಯಮ್ , ರೈಲ್ವೆ ಇವುಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಇನ್ನು ಕೂಡ ಖಾಸಗೀಕರಣ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ, ವಸಂತಮ್ಮ, ಕಟ್ಟಡ ಕಾರ್ಮಿಕರಸಂಘದ ಕಾರ್ಯದರ್ಶಿ. ಮಂಜುನಾಥ್ , ಪಂಚಾಯ್ತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಮೇಶ್ , ಜಯಕರ್ನಾಟಕ ಜನಪರ ವೇದಿಕೆಯ ವೆಂಕಟೇಶ್, ರೈತ ಸಂಘದ ನಾಗೇಂದ್ರ , ಅಕ್ಷರ ದಾಸೋಹ ಸಂಘಟನೆಯ ಶಾಂತಮ್ಮ ಹಾಗೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ.ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5