ತುರುವೇಕೆರೆ: ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮದೇವತೆ ಶ್ರೀ ಕಾಲಘಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡಿರುವ ಘಟನೆ ನಡೆದಿದೆ.
ಜಾತ್ರೆಯ ವೇಳೆ ಸುಶೀಲಮ್ಮ ಎಂಬವರ ಗಮನವನ್ನು ಕಳ್ಳರ ತಂಡ ಬೇರೆಡೆಗೆ ಸೆಳೆದಿದ್ದು, ಈ ವೇಳೆ ಮಹಿಳೆಯರ ಗುಂಪಿನಲ್ಲಿದ್ದ ಕಳ್ಳರ ತಂಡದ ಮಹಿಳೆ ಸರ ಎಗರಿಸಿದ್ದು, ಈ ವೇಳೆ ಮಹಿಳೆಯನ್ನು ಇತರ ಮಹಿಳೆಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳರ ತಂಡದಲ್ಲಿ 4ರಿಂದ 5 ಜನರಿದ್ದರು ಎನ್ನಲಾಗಿದೆ. ಸರ ಎಳೆದ ಮಹಿಳೆಯನ್ನು ಹಿಡಿದುಕೊಂಡ ವೇಳೆ ಜೊತೆಗಿದ್ದವರು ಚಿನ್ನದ ಸರದೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಮೂರು ವರ್ಷಗಳ ಹಿಂದೆ ತಾನು 31 ಗ್ರಾಂ ಚಿನ್ನದ ಸರ ಮಾಡಿಸಿಕೊಂಡಿದ್ದೆ. ಅದರ ಬೆಲೆ 1 ಲಕ್ಷದ 20 ಸಾವಿರ ಆಗಿರುತ್ತದೆ ಎಂದು ದೂರಿನಲ್ಲಿ ಸುಶೀಲ ತಿಳಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5