ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ರೈತ ಸಂಘ , ಸಿ.ಐ.ಟಿ.ಯು , ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ , ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ , ಯುದ್ಧ್ ವೀರಸಿಂಗ್ ಮತ್ತು ರೈತರ ಮೇಲೆ ಬಿ.ಜೆ.ಪಿ .ಗೂಂಡಾಗಳು ಹಲ್ಲೆಯನ್ನು ಖಂಡಿಸಿ , ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಜಮಾವಣೆಗೊಂಡು, ರಾಷ್ಟ್ರೀಯ ಹೆದ್ದಾರಿ 151 ಎ ಮೂಲಕ ಕಾಲ್ನಡಿಗೆ ಜಾಥಾ ಮೂಲಕ ಸಾಗಿದ ಪ್ರತಿಭಟನಾಕಾರರು ಬಿ.ಜೆ.ಪಿ. ಗೂಂಡಾಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಘೋಷಣೆಗಳನ್ನು ಕೂಗುತ್ತಾ, ಆಕ್ರೋಶವನ್ನು ಹೊರಹಾಕಿದರು . ಬಳಿಕ ತಾಲೂಕು ತಹಸಿಲ್ದಾರ್ ರವರ ಕಚೇರಿ ಬಳಿ ಬಂದು ತಹಶೀಲ್ದಾರ್ ನಯೀಮ್ ಉನ್ನಿಸಾ ಅವರಿಗೆ ಮನವಿ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ರೈತ ಸಂಘಟನೆಯ ತಾಲೂಕು ಅಧ್ಯಕ್ಷರಾದ ಶ್ರೀನಿವಾಸಗೌಡ , ಇದು ಕೇವಲ ರಾಷ್ಟ್ರೀಯ ರೈತ ಮುಖಂಡ ಟಿಕಾಯತ್ ರವರಿಗೆ ಮಸಿ ಬಳಿದುದ್ದಲ್ಲ, ದೇಶದ ರೈತರ ಹೋರಾಟದ ಮೇಲೆಯೇ ಮಸಿಬಳಿಯುವ ಷಡ್ಯಂತ್ರವನ್ನು ಬಿ.ಜೆ.ಪಿ ಪಕ್ಷ ಹೆಣೆಯುತ್ತಿದೆ. ಈ ಷಡ್ಯಂತ್ರವನ್ನು ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸುತ್ತದೆ .ಈ ಕೃತ್ಯಕ್ಕೆ ,ಸಂಬಂಧಿಸಿದಂತೆ ಬಿ.ಜೆ.ಪಿ ಪಕ್ಷವು ಕ್ಷಮಾಪಣೆ ಕೇಳಿ , ಷಡ್ಯಂತ್ರವನ್ನು ನಿಲ್ಲಿಸಬೇಕು,. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು. ಸತೀಶ್ , ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಾಲಚಂದ್ರ ಗೌರವಾಧ್ಯಕ್ಷರಾದ ಈರಣ್ಣ , ಕಳ್ಳನ ಕೆರೆ ಉಮೇಶ್ ಕಾರ್ಯದರ್ಶಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು .ಎಂ .ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5