ತುರುವೇಕೆರೆ: ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕಕ್ಕೆ ನೂತನ ಸದಸ್ಯರು ಸೇರ್ಪಡೆಗೊಂಡಿದ್ದು, ಸಂಘಟನೆಯ ಅಧ್ಯಕ್ಷರಾದ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನೂತನ ಸದಸ್ಯರನ್ನು ಸಂಘಟನೆಗೆ ಬರಮಾಡಿಕೊಳ್ಳಲಾಯಿತು.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸುರೇಶ್, ಈ ಕುಟುಂಬದಲ್ಲಿ ಎಲ್ಲರೂ ಸಮಾನರು ಸಂಘಟನೆಯನ್ನು ಒಗ್ಗೂಡಿ ಮುನ್ನಡೆಸೋಣ , ಸಾಮಾನ್ಯ ಜನರ ಜನ ಮಾನಸದಲ್ಲಿ ಉಳಿಯುವಂತೆ ಕಾರ್ಯಕ್ರಮಗಳನ್ನು ಮಾಡೋಣ ಎಂದರು.
ಬಿಗನೆನಹಳ್ಳಿ ಪುಟ್ಟರಾಜು ,ಬಿ.ಪುರ ತಮ್ಮಯ್ಯ, ವಿಠ್ಠಲದೇವರಹಳ್ಳಿ ನರಸಿಂಹ ಮೂರ್ತಿ, ವಿವೇಕಾನಂದನಗರದ ದಿಲೀಪ್ ,ವಿಠ್ಠಲ ದೇವರಹಳ್ಳಿ ಚಂದ್ರು ,ಬಿ.ಪುರ ಚಿಕ್ಕರಾಮಯ್ಯ, ಚಿಕ್ಕಯ್ಯ, ಮೇಲಿನವಳಗೆರೆ ರಂಗಸ್ವಾಮಿ , ಹಳ್ಳದಹೊಸಹಳ್ಳಿ ಮಂಜು ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು .
ವರದಿ: ಸುರೇಶ್ ಬಾಬು ಎಂ.ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB