ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ಕೊರಟಗೆರೆ: 2023ಕ್ಕೆ ನೀವು ಸುಧಾರಕಲಾಲ್ ಗೆಲ್ಲಿಸಿ ವಿಧಾನಸೌಧಕ್ಕೆ ಕಳ್ಸಿ.. ನಾನು ಸುಧಾಕರಲಾಲ್ ಮಂತ್ರಿ ಮಾಡಿ ಕೊರಟಗೆರೆಗೆ ಕಳಿಸ್ತೀನಿ.. ಕೊರಟಗೆರೆ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ದಿ ಮಾಡ್ತೀನಿ.. ನಾನು ರೈತನ ಮಗ ನುಡಿದಂತೆ ನಡಿತ್ತೀನಿ-ಕೊಟ್ಟ ಮಾತನ್ನು ಉಳಿಸಿಕೋಳ್ತಿನಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊರಟಗೆರೆ ಕ್ಷೇತ್ರದ ಜನತೆಗೆ ಭರ್ಜರಿ ಭರವಸೆ ನೀಡಿದರು.
ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಾತ್ಯಾತೀತ ಜನತಾ ದಳದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸುಧಾಕರಲಾಲ್ ಬಡಜನರು ಕಷ್ಟ-ಸುಖಕ್ಕೆ ಪೋನ್ ಮಾಡಿದ್ರೇ ಬರ್ತಾರೇ. ಲಾಲ್ ಪೋನ್ ನಂಬರ್ ನಿಮ್ಮೇಲ್ಲರ ಹತ್ತಿರ ಇದೆ ಅಲ್ವಾ. ಬಡಜನರು ಕಷ್ಟ ಅಂತಾ ಕರೇದರೇ ತಕ್ಷಣ ನಿಮ್ಮ ಮನೆ ಬಾಗಿಲಿಗೆ ಲಾಲ್ ಬರ್ತಾರೇ. ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿ ಬರ್ತಾರಾ ಹೇಳಿ ನೀವೇ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯ ಪೋನ್ ನಂಬರ್ ಅವರ ಮುಖಂಡರ ಬಳಿಯೇ ಇಲ್ಲ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ 25ಕ್ಕೂ ಅಧಿಕ ಚೆಕ್ಡ್ಯಾಂ ಕಂ ಬ್ಯಾರೇಜ್ನಿಂದ ನೀರಾವರಿ ಅಭಿವೃದ್ದಿ, 950ಕ್ಕೂ ಬಹುರ್ಹುಕ್ಕು ಕಮಿಟಿಯಿಂದ 950ಜನ ರೈತರಿಗೆ ಸಾಗುವಳಿ, 35ಸಾವಿರ ಬಡಜನರಿಗೆ ವೈದ್ಯಕೀಯ ಚಿಕಿತ್ಸೆಯೇ ನನ್ನ ಅಭಿವೃದ್ದಿಗೇ ಸಾಕ್ಷಿ. 30ವರ್ಷ ಕೊರಟಗೆರೆ ಕ್ಷೇತ್ರದ ಮನೆಮಗನಾಗಿ ಕೆಲಸ ಮಾಡಿರುವ ನನಗೇ 2023ಕ್ಕೆ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೋಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಮಾಜಿ ಶಾಸಕ ಷಫಿ ಅಹಮ್ಮದ್, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಜೆಡಿಎಸ್ ರಾಜ್ಯ ಕಾರ್ಯಧ್ಯಕ್ಷ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ಪ್ರಕಾಶ್, ರಮೇಶ್, ಲಕ್ಷ್ಮೀನರಸಪ್ಪ, ಅಮರ, ಕಲೀಂವುಲ್ಲ, ಸೈಯದ್ಸೈಪುಯಲ್ಲ, ಕರವೇ ನಟರಾಜು, ಪುಟ್ಟನರಸಪ್ಪ ಸೇರಿದಂತೆ ಇತರರು ಇದ್ದರು.
ಜೆಡಿಎಸ್ ಬೃಹತ್ ಸಮಾವೇಶಕ್ಕೆ ಜನಸಾಗರವೇ ಹರಿದುಬಂಧು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಪರವಾಗಿ ಜೈಕಾರ ಹಾಕಿದರು. ಸಮಾವೇಶಕ್ಕೆ ಮುನ್ನಾ ಕುಮಾರಣ್ಣ ನೋಡಲು ಹೇಲಿಪ್ಯಾಡ್ ಆವರಣದ ಸುತ್ತಮುತ್ತಲು ಸಾವಿರಾರು ಜನ ಅಭಿಮಾನಿಗಳು ದೌಡಾಯಿಸಿದ ಪರಿಣಾಮ ಕಾರ್ಯಕರ್ತರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಹೇಲಿಕ್ಯಾಪ್ಟರ್ ಇಳಿಯುವ ಮುನ್ನವೇ ಕುಮಾರಣ್ಣ ಪರವಾಗಿ ಜೆಡಿಎಸ್ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ಲಾಲ್ ಮಂತ್ರಿ ಅಂದಾಕ್ಷಣ ಒಂದು ಕ್ಷಣ ವೇದಿಕೆಯೇ ಸ್ತಬ್ದವಾಗಿ ಜೈಕಾರ ಘೋಷಣೆಯೇ ಕೇಳಿಬಂದದ್ದು ವಿಶೇಷವಾಗಿತ್ತು.
5 ದಿನ ಮಾತ್ರ ನನ್ನ ಜೊತೆಯಾಗಿ ಇರೀ ಸಾಕು. ನಾನು ಮುಂದಿನ 5ವರ್ಷ ನಿಮ್ಮ ಸೇವಕನಾಗಿ ಕೆಲಸ ಮಾಡ್ತೀನಿ.. ನನ್ನ ಅಣ್ಣ ಕುಮಾರಣ್ಣನೇ ನನಗೇ ಶಕ್ತಿ ಮತ್ತು ಅಭಿಮಾನಿ ಬಂಧುಗಳೇ ನನ್ನ ಆಸ್ತಿ.. ಭಗವಂತನಲ್ಲಿ ಪ್ರಾರ್ಥನೆ ಮಾಡ್ತೀನಿ ಕುಮಾರಣ್ಣ ಸಿಎಂ ಆಗ್ಬೇಕು ಅಂತಾ. ನನ್ನ ಕ್ರ.ಸಂ.4ಕ್ಕೆ ಮತ ನೀಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ.
–ಪಿ.ಆರ್.ಸುಧಾಕರ್ ಲಾಲ್, ಮಾಜಿ ಶಾಸಕ, ಕೊರಟಗೆರೆ
26ಲಕ್ಷ ರೈತ ಕುಟುಂಬದ 25ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ. 2ಲಕ್ಷ ಸಾಲಮನ್ನಾ ಯೋಜನೆಯಡಿ 35ಸಾವಿರ ರೈತರ 1800ಕೋಟಿ ಹಣವನ್ನು ಬಿಜೆಪಿ ಸರಕಾರ ಬಿಡುಗಡೆ ಮಾಡಿಲ್ಲ. ನಾನು ಮತ್ತೇ ಮಂತ್ರಿ ಆಗ್ತೀನಿ ಮಾಡ್ತೀನಿ. ಸ್ತ್ರೀಶಕ್ತಿ ಸಂಘದ ಸಂಪೂರ್ಣ ಸಾಲಮನ್ನಾ ಮಾಡಿ ಗ್ರಾಪಂಗೊಂದು ಹೈಟೇಕ್ ಆಸ್ಪತ್ರೆ ಮತ್ತು ಸರಕಾರಿ ಶಾಲೆ ಕಟ್ಟಿಸ್ತೀನಿ.
–ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy