ತುಮಕೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಇಂದು ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆ ನಷ್ಟದ ಕುರಿತು ಜಮೀನುಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು.
ಮೊಬೈಲ್ ನಲ್ಲೇ ರೈತನ ಜಮೀನಿನ ಆರ್.ಟಿ.ಸಿ ಪರಿಶೀಲಿಸಿದ ಆರ್. ಅಶೋಕ್, ಬೆಳೆ ವಿವರ ದಾಖಲಿಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವಿವರವಾಗಿ ಮಾಹಿತಿ ಸಂಗ್ರಹಿಸದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಆರ್.ಅಶೋಕ್, ಅಧಿಕಾರಿಗಳು ರೈತನ ಜಮೀನಿಗೆ ಹೋಗದೆ ಬೆಳೆ ಸಮೀಕ್ಷೆ ಮಾಡಲಾಗಿದೆ. ಬೆಳೆ ಸಮೀಕ್ಷೆ ನಡೆಸಿರುವ ಬಗ್ಗೆ ಕನಿಷ್ಠ ಸಂಬಂಧಪಟ್ಟ ರೈತನಿಗೆ ಯಾವುದೇ ಮಾಹಿತಿ ನೀಡಿಲ್ಲ ಅಲ್ಲದೆ ರೈತ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೂಡ ಮಾಡುವಂತಹ ಮಾಹಿತಿ ಲಭ್ಯವಾಗಿಲ್ಲ. ಇದು ಬೇಜವಾಬ್ದಾರಿಯಿಂದ ಕೂಡಿದ ಕೃಷಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷವಾಗಿದೆ ಎಂದು ಹೇಳಿದರು. ಸರಿಯಾದ ಮಾಹಿತಿ ನೀಡದ ಪರಿಣಾಮ ಎನ್.ಡಿಆರ.ಎಫ್ ಪರಿಹಾರ ಸಿಗಲ್ಲ ಎಂದು ಹೇಳಿದರು.
ಚಾಮರಾಜನಗರ, ಬೀದರ್ ನಲ್ಲಿ ಚೆಕ್ ಮಾಡಿದ್ದೆ ಎಲ್ಲಾ ಕಡೆ ಒಂದೇ ರೀತಿ ಮಾಹಿತಿ ದಾಖಲಿಸುತ್ತಾರೆ ನಾನು ರೆವಿನ್ಯೂ ಮಿನಿಸ್ಟರ್ ಇದ್ದೆ.ಒಂದೇರಡು ತಿಂಗಳಲ್ಲೇ ಪರಿಹಾರ ನೀಡಿದ್ವಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಪರಿಹಾರ ಕೊಡಲಿ ಅಂತ ಕಾಯುತ್ತಿರಲಿಲ್ಲಿ. ರೈತರಿಗೆ ಅರಿವು ಮೂಡಿಸಬೇಕು. ಇದು ಇಂಪಾರ್ಟೆಂಟ್. ಆ್ಯಪ ಬಳಕೆ ಬಗ್ಗೆ ರೈತರಿಗೆ ತಿಳುವಳಿಕೆ ಇರಲ್ಲ ಎಂದರು.
ಬೀದರ್ ನಿಂದ ಇಲ್ಲಿವರೆಗೂ ಒಂದೇ ಲೈನ್ ಬರೆದರೆ ಹೇಗೆ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಮಾಡ್ತೀನಿ ಎಂದರು.