ಬೀದರ್: ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಔರಾದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ಬಿ. ಭೇಟಿ ನೀಡಿ, ಶಾಲೆ ಮಕ್ಕಳ ಹಾಜರಾತಿ, ಬಿಸಿಯೂಟಸೇರಿದಂತೆ ಅನೇಕ ವಿಷಯಗಳ ಮಾಹಿತಿ ಪಡೆದರು.
ಶಾಲೆಯ ಸ್ವಚ್ಛತೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಪರಿಶೀಲಿದರು ಅಡುಗೆ ಕೋಣೆಯನ್ನು ವೀಕ್ಷಿಸಿ ಮಾತನಾಡಿದ ಅವರು, ಅಡುಗೆ ಕೋಣೆಯಲ್ಲಿ ಬರಿ ಕತ್ತಲು ನೋಡಿ, ಕತ್ತಲಿನಲ್ಲಿ ಅಡುಗೆ ಮಾಡುವುದಾದರೂ ಹೇಗೆ? ಅಡುಗೆ ಕೋಣೆ ಸ್ವಚ್ಛತೆ ಮಾಡುವಂತೆ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡರು. ಎರಡು ದಿವಸದೊಳಗೆ ಸಂಪೂರ್ಣ ಅಡುಗೆ ಕೋಣೆ ಸ್ವಚ್ಛಗೊಳಿಸಿ ಬಣ್ಣ ಹಚ್ಚುವಂತೆ ಹೇಳಿದರು.
ಇದೆ ವೇಳೆ ವಡಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಹೇಡೆ, ಬಲಭೀಮ ECO, ಈಶ್ವರ ECO, ರವಿಂದ್ರ ಡಿಗ್ಗಿ CRP ಮುಖ್ಯ ಶಿಕ್ಷಕ ಪ್ರೇಮಕುಮಾರ, ಶಿಕ್ಷಕರಾದ ಕಾಮಶೇಟ್ಟಿ, ಜಯಕುಮಾರ, ಸೇರಿದಂತೆ ಮೂರು ಶಾಲೆಯ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್


