ರಾಮಕ್ಷೇತ್ರ ಪ್ರಾಣಪ್ರತಿಷ್ಠೆಯ ನಿಮಿತ್ತ ಭಾರೀ ಭದ್ರತೆಯಲ್ಲಿ ಅಯೋಧ್ಯೆ. ನಗರದಲ್ಲಿ 10,000 ಸಿಸಿಟಿವಿ ಕ್ಯಾಮೆರಾಗಳು ಮತ್ತು ವಿಶೇಷ ಡ್ರೋನ್ ಕಣ್ಗಾವಲು ಅಳವಡಿಸಲಾಗಿದೆ. ರಾಜ್ಯ ಪೊಲೀಸರು ಮತ್ತು ಕೇಂದ್ರ ಪಡೆಗಳ ಹೊರತಾಗಿ ಎನ್ ಎಸ್ ಜಿ ಸ್ನೈಪರ್ ತಂಡಗಳು ಕೂಡ ಅಯೋಧ್ಯೆಯಲ್ಲಿ ಭದ್ರತೆಯನ್ನು ಒದಗಿಸುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಧಾರ್ಮಿಕ, ರಾಜಕೀಯ, ಚಲನಚಿತ್ರ ಮತ್ತು ಸಾಂಸ್ಕೃತಿಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯ ಹಳದಿ ವಲಯದಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನದೊಂದಿಗೆ AI ಆಧಾರಿತ ಕ್ಯಾಮೆರಾಗಳನ್ನು ಸಹ ನಿಯೋಜಿಸಲಾಗಿದೆ. ಬಾಂಬ್-ಶ್ವಾನದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳನ್ನು ಸಹ ನಿಯೋಜಿಸಲಾಗಿದೆ.


