ಜುಲೈ 17 ಅನ್ನು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತದೆ. 1998ರಲ್ಲಿ ರೂಮ್ ಸಂಸ್ಥೆಯ ಅಂಗಸಂಸ್ಥೆಯಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ICC) ಸ್ಥಾಪನೆಗೊಂಡ ದಿನವಾಗಿದ್ದು, ಈ ದಿನದ ಆಚರಣೆ ಮಾನವೀಯತೆ, ನ್ಯಾಯ ಮತ್ತು ಮಾನವ ಹಕ್ಕುಗಳ ಪರ ಹೋರಾಟದ ಸಂಕೇತವಾಗಿದೆ.
ಈ ವಿಶೇಷ ದಿನವು ನ್ಯಾಯದ ಮಹತ್ವವನ್ನು ನೆನಪಿಸುತ್ತದೆ ಮತ್ತು ಕಾನೂನು ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಹಾಸಿಲು ಮಾಡುತ್ತದೆ. ಮಾನವೀಯ ಹಕ್ಕುಗಳ ಉಲ್ಲಂಘನೆ, ಗಂಭೀರ ಅಪರಾಧಗಳು, ಮತ್ತು ಅತಿರೇಕದ ಘಟನೆಗಳನ್ನು ತಡೆಹಿಡಿಯಲು ಮತ್ತು ನ್ಯಾಯ ಒದಗಿಸಲು ಬದ್ಧತೆ ನೀಡಿದೆಯೆಂದು ಪ್ರತಿಬಿಂಬಿಸುತ್ತದೆ.
ವಕೀಲನಾಗಿ, ನಾನು ಭಾರತೀಯ ಸಂವಿಧಾನದ ಸಿದ್ಧಾಂತಗಳಿಗೆ ತಲೆಬಾಗುತ್ತೇನೆ ಮತ್ತು ನನ್ನ ಕೊನೆಯ ಉಸಿರು ಇರುವವರೆಗೂ ಕಷ್ಟದಲ್ಲಿರುವ ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವ ಪ್ರತಿಜ್ಞೆ ಮಾಡುತ್ತೇನೆ. ನಮ್ಮ ದೇಶದ ನ್ಯಾಯ ವ್ಯವಸ್ಥೆಯ ಆಧಾರ ಸತ್ಯ ಮತ್ತು ಧರ್ಮದ ಮೇಲೆ ನಿಂತಿದೆ.
ಸಂವಿಧಾನವು ನಮಗೆ ಹಕ್ಕುಗಳನ್ನು ಮಾತ್ರವಲ್ಲ, ಕರ್ತವ್ಯಗಳನ್ನೂ ನೀಡುತ್ತದೆ. ಈ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವ ಮೂಲಕ ಮಾತ್ರ ನಿಜವಾದ ನ್ಯಾಯವನ್ನು ಪ್ರಜಾಪ್ರಭುತ್ವದಲ್ಲಿ ಸಾಧಿಸಲು ಸಾಧ್ಯ. ಸತ್ಯಮೇವ ಜಯತೆ ಎಂಬ ನಮ್ಮ ದೇಶದ ಸಂಕೇತವು, ಸತ್ಯದ ಮೇಲಿನ ನಮ್ಮ ನಂಬಿಕೆಯನ್ನು ತೋರಿಸುತ್ತದೆ ಮತ್ತು ನ್ಯಾಯದ ಪರವಾಗಿ ಸತ್ಯವನ್ನೇ ಹೋರಾಟದ ಧ್ಯೇಯವಾಗಿರಿಸುತ್ತದೆ.
ಈ ಅಂತರರಾಷ್ಟ್ರೀಯ ನ್ಯಾಯ ದಿನದಂದು, ನಮ್ಮ ದೇಶದ ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡು, ನಾವು ಒಟ್ಟಾಗಿ ನ್ಯಾಯಕ್ಕಾಗಿ ಶ್ರಮಿಸೋಣ. ನಮ್ಮ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ಉಲಿಯಲು, ಪ್ರತಿಯೊಬ್ಬರು ತಮ್ಮ ಪಾತ್ರವನ್ನು ಸಲ್ಲಿಸೋಣ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA