ಮೈಸೂರು: ದಸರಾ ಸಂಭ್ರಮಕ್ಕೆ ಕರೆತರಲಾಗಿರುವ ಆನೆಗಳು ಕಾದಾಡುತ್ತಾ ರಸ್ತೆಗೆ ಬಂದಿರುವ ಘಟನೆ ಅರಮನೆಯ ಮುಖ್ಯದ್ವಾರದ ಬಳಿಯಲ್ಲಿ ನಡೆದಿದೆ. ಘಟನೆಯಿಂದಾಗಿ ಕೆಲ ಕಾಲ ಆತಂಕದ ಪರಿಸ್ಥಿತಿ ಸೃಷ್ಟಿಯಾಯಿತು.
ಧನಂಜಯ ಆನೆ ಕಂಜನ್ ಮೇಲೆ ದಾಳಿ ನಡೆಸಿದೆ. ಇದರಿಂದ ಬೆದರಿದ ಕಂಜನ್ ಆನೆ ಮಾವುತನಿಲ್ಲದೇ ಅರಮನೆಯ ಮುಖ್ಯದ್ವಾರದಿಂದ ನೇರವಾಗಿ ರಸ್ತೆಗೇ ಬಂದಿದೆ. ಅದರ ಹಿಂದೆಯೇ ಧನಂಜಯ ಆನೆ ಕೂಡಾ ಬಂದಿದೆ.
ಕಂಜನ್ ಆನೆ ದೊಡ್ಡಕೆರೆ ಮೈದಾನದ ಗೇಟ್ ತಳ್ಳಿಕೊಂಡು ರಸ್ತೆಯತ್ತ ಓಡಿದೆ. ಧನಂಜಯ ಆನೆ ಮೇಲಿದ್ದ ಮಾವುತ ಕಷ್ಟಪಟ್ಟು ಆತನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಧನಂಜಯ ಅಟ್ಟಾಡಿಸುವುದು ನಿಂತಾಗ ಕಂಜನ್ ಆನೆ ಕೂಡಾ ನಿಂತಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296