ಎಲ್ಲ ಸಂಕಷ್ಟಗಳನ್ನು ಗೆದ್ದು ದರ್ಶನ ಹೊರ ಬಂದು ಮತ್ತೆ ತೆರೆಯ ಮೇಲೆ ಮಿಂಚುತ್ತಾರೆ ಎಂದು ಗಿಚ್ಚಿಗಿಲಿ ವಿನ್ನರ್ ಹುಲಿ ಕಾರ್ತಿಕ್ ಹೇಳಿದ್ದಾರೆ.
ಖಾಸಗಿ ವಾಹಿನಿ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಸದ್ಯ ಬಿಂದಿಗೆಯಲ್ಲಿ ತಳದಲ್ಲಿರುವ ನೀರಿನಂತೆ ಇರುವ ದರ್ಶನ್ ಅವರಿಗೆ ಕಾಗೆ ಹಾಕುವ ಒಂದೊಂದೆ ಕಲ್ಲಿನಂತ್ತೆ ಒಬ್ಬೊಬ್ಬರೆ ಪೆಟ್ಟು ಕೊಡುತ್ತಿದ್ದಾರೆ. ಆದರೆ ನೀರು ಮೇಲೆ ಬಂದ ಹಾಗೇ ದರ್ಶನ್ ಅವರು ಕೂಡಾ ಇದರಿಂದ ಹೊರಬಂದು ಮಿಂಚುತ್ತಾರೆ ಎಂದು ಹುಲಿ ಕಾರ್ತಿಕ್ ವರ್ಣಿಸಿದರು.
ದರ್ಶನ್ ಅವರಿಗೆ ಏನು ಆಗಬಾರದು. ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ಮೆಜೆಸ್ಟಿಕ್’ನಿಂದ ಹಿಡಿದು ‘ರಾಬರ್ಟ್’ವರೆಗೂ ಹೇಗೆ ಕುಣಿಸಿದರೋ ಹಾಗೇ ಅವರು ಬಂದ್ಮೇಲೆ ದುಪ್ಪಟ್ಟು ಅವರನ್ನು ಮೆರೆಸಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296