ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಬೀರನಕೆರೆ ಗ್ರಾಮದ ರೈತಪುಟ್ಟಸ್ವಾಮಿಯವರಿಗೆ ಸೇರಿದ ತೋಟದ ಪಂಪ್ ಹೌಸ್ ನಲ್ಲಿ, ವಿದ್ಯುತ್ ಅವಘಡದಿಂದ 4,000ಕ್ಕೂ ಹೆಚ್ಚು ಕೊಬ್ಬರಿ ಗಳು ಬೆಂಕಿಗಾಹುತಿಯಾಗಿವೆ.
ರೈತ ಪುಟ್ಟಸ್ವಾಮಿ ತಂದೆ ಬೆಟ್ಟಯ್ಯ ನವರು ತಮ್ಮ ತೋಟದ ಸಾವಿರಾರು ಕೊಬ್ಬರಿಗಳನ್ನು ತಮ್ಮ ತೋಟದ ಪಂಪ್ ಹೌಸ್ ನಲ್ಲಿ ಶೇಖರಿಸಿದರು. ಭಾನುವಾರ ಬೆಳಗಿನ ಜಾವದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪಂಪ್ ಹೌಸ್ ನಲ್ಲಿದ್ದ ಸಾವಿರಾರು ಕೊಬ್ಬರಿಗಳು ಸೇರಿದಂತೆ ಹಲವಾರು ವಸ್ತುಗಳು ಸೇರಿದಂತೆ ಮೇಲ್ಛಾವಣಿಯ ಭಾಗವು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಈ ಸಂಬಂಧ ರೈತ ಪುಟ್ಟಸ್ವಾಮಿ ಅವರು ಸ್ಥಳೀಯ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ಬೆಸ್ಕಾಂ ಇಲಾಖೆಗೆ ದೂರು ನೀಡಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವರದಿ: ಸಚಿನ್, ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy