ಬೆಂಗಳೂರು: ಅರಣ್ಯ ಸಚಿವರ ಹೆಸರು ದುರ್ಬಳಕೆ ಮಾಡಿ ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
2023ರಲ್ಲಿ ವೀರೇಶ್ ಎಂಬಾತ ಅಡವಿ ಎಂಬುವವರಿಗೆ ಪರಿಚಯವಾಗಿದ್ದು, ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಮತ್ತು ಅರಣ್ಯ ರಕ್ಷಕರ ಹುದ್ದೆಗಳಿಗೆ ವಿವಿಧ ಜಿಲ್ಲೆಯಗಳಲ್ಲಿ ಅರ್ಜಿ ಕರೆದಿದ್ದು, ತನಗೆ ಅರಣ್ಯ ಸಚಿವರು ತುಂಬಾ ಆತ್ಮೀಯರಾಗಿದ್ದು, ಸರ್ಕಾರ ಹುದ್ದೆ ಕೊಡಿಸುವುದಾಗಿ ಅವರನ್ನು ನಂಬಿಸಿದ್ದಾನೆ.
ಈತನ ಮಾತನ್ನು ನಂಬಿದ ಪಿ.ಹೆಚ್.ಅಡವಿ(ರಾಣಿಬೆನ್ನೂರು) ಅವರು ತಮ ಮಕ್ಕಳು ಮತ್ತು ಸಹೋದರನ ಮಕ್ಕಳು ಮತ್ತು ಹೆಂಡತಿಯ ಅಕ್ಕನ ಮಗ ಸೇರಿ ಮೂವರಿಗೆ ಧಾರವಾಡ, ಶಿವಮೊಗ್ಗ ಮತ್ತು ಚಾಮರಾಜ ನಗರ ಜಿಲ್ಲೆಗಳಿಗೆ ಅರ್ಜಿ ಹಾಕಿಸಿದ್ದಾರೆ. ನಂತರ ವೀರೇಶ್ ಗೆ ಮುಂಗಡವಾಗಿ 2 ಲಕ್ಷದಂತೆ ಮೂವರಿಂದ ಒಟ್ಟು 6 ಲಕ್ಷ ಹಣ ಕೊಡಬೇಕು ಎಂದು ಹೇಳಿ ವಿಕಾಸ ಸೌಧದ ಬಳಿ ಪೋನ್ಪೇಯಿಂದ 50ಸಾವಿರ ಹಣವನ್ನು ಪಡೆದಿದ್ದಾನೆ. ತದನಂತರದಲ್ಲಿ ನಗದು ರೂಪದಲ್ಲಿ ಉಳಿದ 2.50ಲಕ್ಷ ಹಣವನ್ನು ಮಾಹಿತಿ ಸೌಧದ ಬಳಿ ಪಡೆದಿದ್ದಾನೆ.
ಅಲ್ಲದೇ ಮತ್ತೆ 2 ಲಕ್ಷ ಹಣ ಮತ್ತು ಪೋನ್ ಪೇ ಮೂಲಕ 20 ಸಾವಿರ ಹಾಗೂ 80 ಸಾವಿರ ಹಣವನ್ನು ಹಂತ ಹಂತವಾಗಿ ಪಡೆದುಕೊಂಡಿದ್ದಾನೆ. ಒಟ್ಟು 6 ಲಕ್ಷ ಹಣವನ್ನು ಪಡೆದುಕೊಂಡಿದ್ದ ವೀರೇಶ್ ಒಂದು ವರ್ಷವಾದರೂ ಸರ್ಕಾರಿ ಉದ್ಯೋಗ ಕೊಡಿಸದೇ, ಹಣವನ್ನು ಹಿಂದಿರುಗಿಸದೇ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx