nammatumakuru

    Subscribe to Updates

    Get the latest creative news from FooBar about art, design and business.

    What's Hot

    KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್‌: ವಿಪಕ್ಷ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ

    July 27, 2026

    ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು

    July 27, 2026

    ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

    July 27, 2026
    Facebook Twitter Instagram
    ಟ್ರೆಂಡಿಂಗ್
    • KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್‌: ವಿಪಕ್ಷ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ
    • ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
    • ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
    • ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ: ರಾಜ್ಯ ಉಪಾಧ್ಯಕ್ಷರಾಗಿ ಎಂ. ದಾಸಪ್ಪ ಆಗತ್ತೂರು ನೇಮಕ
    • ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ದ್ರೋಹ ಬಗೆದ ಸರ್ಕಾರ!
    • ಅಕ್ರಮ ಸಾರಾಯಿ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಿ: ಗೌತಮ್ ಪಿ. ಮೇತ್ರೆ ಆಗ್ರಹ
    • ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
    • ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಮಯ ಕಲಿಸುವ ಪಾಠ
    ಲೇಖನ January 14, 2025

    ಸಮಯ ಕಲಿಸುವ ಪಾಠ

    By adminJanuary 14, 2025No Comments3 Mins Read
    time

    ಬಹಳ ಹಿಂದೆ ಚಂದ್ರಪ್ರಭ ಎಂಬ ಬಡವನಿದ್ದ, ಅವನು ಯಾವಾಗಲೂ ಸುಖಾಸುಮ್ಮನೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವಿದ್ದಿತು. ಯಾರು ಕರೆಯದಿದ್ದರೂ ತಾನೇ ಹೋಗಿ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಅವನನ್ನು ಕೆಲಸದವರು ನೀನು ಯಾರಿಗೆ ಎಷ್ಟೇ ಸಹಾಯ ಮಾಡಿದರೂ, ನಿನ್ನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ. ಸುಮ್ಮನೆ ಏಕೆ ಎಲ್ಲರ ವಿಷಯದಲ್ಲಿ ಮೂಗು ತೂರಿಸುತ್ತೀಯ ನೀನು ಬಡವ ದೇವರು ಇಟ್ಟ ಹಾಗೆ ಇರಬೇಕು ಎಂದು ಹೇಳುತ್ತಿದ್ದರು.

    ಆಗ ಅಂತಹವರಿಗೆ ಅದು ಅವರ ಗುಣ ಇದು ನನ್ನ ಗುಣ ನಾನು ಜನ ಮೆಚ್ಚಲೆಂದು ಸಹಾಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದ. ಹೀಗೆಯೇ ಒಮ್ಮೆ ಅದೇ ಊರಿನ ಒಬ್ಬರು ಚಂದ್ರಪ್ರಭನಲ್ಲಿಗೆ ಬಂದು ಬಾವಿಗೆ ಹಗ್ಗ ಬಿದ್ದು ಹೋಗಿದೆ ಬಂದು ಸಹಾಯ ಮಾಡು ಸಂಭಾವನೆ ನೀಡುತ್ತೇವೆ ಎಂದಾಗ ಆಗಲೆಂದು ಬಂದು ಪಾತಾಳಗರಡಿಯ ಸಹಾಯದಿಂದ ಹಗ್ಗ ತೆಗೆದು ಕೊಟ್ಟು ಸಂಭಾವನೆ ಕೇಳಿದಾಗ ಅವರು ನೀನು ಎಷ್ಟೋ ಜನರಿಗೆ ಸಹಾಯಗಳನ್ನು ಉಚಿತವಾಗಿ ಮಾಡಿದ್ದೀಯ ಇದನ್ನೂ ಹಾಗೆ ಅಂದುಕೋ ಎಂದಾಗ ಸ್ವಲ್ಪ ಬೇಸರಗೊಂಡ ಚಂದ್ರಪ್ರಭ ಮರು ಮಾತನಾಡದೆ ಹಿಂತಿರುಗಿದ. ಮಾರನೆಯ ದಿನ ಬೀದಿಯಲ್ಲಿ ಏನೋ ಚಿಂತಿಸುತ್ತಾ ನಡೆದು ಹೋಗುವಾಗ ಒಬ್ಬ ವ್ಯಾಪಾರಿ ಬಾಳೇ ಹಣ್ಣುಗಳ ಗೊನೆ ತುಂಬಿದ್ದ ತಳ್ಳುವ ಗಾಡಿಯನ್ನು ರಸ್ತೆ ಮೇಲಿನಿಂದ ಇಳಿಜಾರಿದ್ದ ಕಾರಣ ಬಹಳ ಕಷ್ಟ ಪಟ್ಟು ಮುಂದೆ ತಳ್ಳುತ್ತಿದ್ದ, ಅದನ್ನು ನೋಡಿದ ಚಂದ್ರಪಭ ಅವನಿಗೆ ಸಹಾಯ ಮಾಡಲು ತಾನೂ ತನ್ನ ಕೈಗಳಿಂದ ತಳ್ಳಲು ಮುಂದಾದ ಇದನ್ನು ನೋಡಿದ ವ್ಯಾಪಾರಿ ಏ ನಿನ್ನನ್ನು ಯಾರು ಕರೆದಿದ್ದು, ಇದು ನನ್ನ ಕೆಲಸ ನಾನು ಮಾಡಿಕೊಳ್ಳುತ್ತೇನೆ, ನಿನ್ನ ಅವಶ್ಯಕತೆ ಇಲ್ಲ ಎಂದು ಅವನನ್ನು ತಳ್ಳಿದ. ಅರೆ ಇದು ಏಕೆ ಹೀಗೆ ಆಗುತ್ತಿದೆ ಅಂದುಕೊಳ್ಳುತ್ತಾ ಮುಂದೆ ನಡೆದ.

    ಮುಂದೆ ದಾವಖಾನೆಯಲ್ಲಿ ತನ್ನ ಸ್ವೇಹಿತ ಚಿಕಿತ್ಸೆಗೆಂದು ಬಂದಿದ್ದ ಅವನನ್ನು ನೋಡುತ್ತಲೇ ಚಂದ್ರಪ್ರಭ ಹತ್ತಿರಹೋಗಿ ವಿಚಾರಿಸಿ ಹಿಂತಿರುಗುವಾಗ ಸ್ನೇಹಿತನ ಕೈಗೆ ಸ್ವಲ್ಪ ಹಣಕೊಟ್ಟು ಹಿಂತಿರುಗಿದ. ಕೆಲವು ದಿನಗಳ ಬಳಿಕ ಚಂದ್ರಪ್ರಭ ಹುಷಾರು ತಪ್ಪಿದ ಮತ್ತು ಅವನ ಬಳಿ ಚಿಕಿತ್ಸೆ ಪಡೆಯಲು ಹಣವಿರಲಿಲ್ಲ, ನಂತರ ತನ್ನ ಸ್ನೇಹಿತನ ಮನೆಗೆ ಹೋಗಿ ತನಗೆ ಹುಷಾರು ತಪ್ಪಿದೆ ಎಂದು ಚಿಕಿತ್ಸೆಗೆ ಸ್ವಲ್ಪ ಹಣಬೇಕೆಂದೂ ಕೇಳಿದಾಗ, ಸ್ನೇಹಿತ ನನಗೆ ಗೊತ್ತಿತ್ತು ನೀನು ಬಂದೇ ಬರುತ್ತೀಯ ಎಂದು ನಿನ್ನನ್ನು ಆವತ್ತು ದಾವಖಾನೆಗೆ ಕರೆದಿದ್ದು ಯಾರು, ನಾನೇನಾದರೂ ನಿನ್ನಲ್ಲಿ ಚಿಕಿತ್ಸೆಗೆ ಹಣ ಬೇಕೆಂದು ಕೇಳಿದ್ದೇನಾ, ನೀನಾಗೆ ಕೊಟ್ಟೆ ನಾನು ತೆಗೆದುಕೊಂಡೆ ಅಷ್ಟೇ, ಹಣನೂ ಇಲ್ಲ ಏನೂ ಇಲ್ಲ ಹೊರಟುಹೋಗು ಎಂದು ಬೈದು ಕಳುಹಿಸಿದ.

    ಕೆಲದಿನಗಳ ಬಳಿಕ ಬೀದಿಯಲ್ಲಿ ನಡೆದು ಬರುವಾಗ ಅದೇ ಬಾಳೆಹಣ್ಣಿನ ವ್ಯಾಪಾರಿ ಇಳಿಜಾರಿನ ಕಡೆಯಿಂದ ಗಾಡಿ ಇಳಿಸುವಾಗ ತೂಕಕ್ಕೆ ಗಾಡಿ ರಭಸದಿಂದ ಅವನ್ನನ್ನು ಎಳೆದುಕೊಂಡು ಹೋಗುತ್ತಿತ್ತು, ಚಂದ್ರಪ್ರಭನನ್ನು ನೋಡಿದ ವ್ಯಾಪಾರಿ ಅಯ್ಯೋ ಸಹಾಯಮಾಡಿ ಅಂದು ನಾನು ನಿಮ್ಮನ್ನು ಬೈಯಬಾರದಿತ್ತು ಎಂದಾಗ, ಚಂದ್ರಪ್ರಭ ಇದು ನನ್ನ ಕೆಲಸವಲ್ಲ, ಇದು ನಿಮ್ಮ ಕೆಲಸ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ ಎಂದು ಸೀದಾ ನಡೆದ, ಗಾಡಿ ಬಿದ್ದು ಹೋಗಿ ಹಣ್ಣೆಲ್ಲಾ ನೆಲದಪಾಲಾಯಿತು, ವ್ಯಾಪಾರಿಗೂ ಸ್ವಲ್ಪ ಏಟಾಯಿತು. ಮುಂದೆ ಅದೇ ಬಾವಿಯಲ್ಲಿ ರಾಟೆಗೆ ಹಗ್ಗ ಹಾಕಲಾಗಿತ್ತು,  ಅದನ್ನು ತೆಗೆದ ಚಂದ್ರಪ್ರಭ ಬಾವಿಯೊಳಗೆ ಎಸದ. ಅದನ್ನು ನೋಡಿದ ಮಾಲಿಕ ಏಕೆ ಹಗ್ಗವನ್ನು ಬಾವಿಯೊಳಗೆ ಎಸೆದೆ ಅಂದಾಗ ಅಂದು ನನಗೆ ಸಂಭಾವನೆ ಕೊಡಲಿಲ್ಲ ಅಲ್ಲವೇ ಇಂದು ಬೇರೆಯವರಿಗೆ ಸಂಭಾವನೆ ಕೊಟ್ಟು ನಿಮ್ಮ ಹಗ್ಗ ತೆಗೆಸಿಕೊಳ್ಳಿ ಎಂದು ಅಲ್ಲಿಂದ ಸೀದಾ ಮನೆಗೆ ಬಂದ. ಮನೆಗೆಬರುವಷ್ಟರಲ್ಲಿ ಅವನ ಸ್ನೇಹಿತ ಮನೆಯ ಬಾಗಿಲ್ಲಿ ಕುಳಿತು ಚಂದ್ರಪ್ರಭನನ್ನು ನೋಡಿ, ಅಂದು ನಿನ್ನ ಹಣ ನಾನು ಹಿಂತಿರುಗಿಸಿ  ಕೊಡಬೇಕಿತ್ತು. ಬಾಯಿಗೆ ಬಂದಂತೆ ಬೈದೆ, ನನ್ನನು ಕ್ಷಮಿಸು, ನನಗೆ ಮತ್ತೆ ಹುಷಾರು ತಪ್ಪಿದೆ ಸ್ವಲ್ಪ ಹಣವಿದ್ದರೆ ಕೊಡು, ನಾನು ಚಿಕಿತ್ಸೆ ಪಡೆದು ಗುಣವಾದ ನಂತರ ಅಂದು ನೀ ಕೊಟ್ಟ ಹಣದ ಜೊತೆಗೆ ಇಂದು ಪಡೆದ ಹಣವನ್ನು ಸೇರಿಸಿ ಬಡ್ಡಿ ಸಮೇತ ವಾಪಸ್ಸು ಕೊಡುತ್ತೇನೆ ಇಲ್ಲ ಅನ್ನಬೇಡ ಅಂದಾಗ ಚಂದ್ರಪ್ರಭ ಈಗ ನನ್ನ ಬಳಿ ಹಣವಿದೆ. ಆದರೆ ಈ ಹಿಂದೆ ಇದ್ದ ಗುಣವಿಲ್ಲ, ಈಗ ನಾನು ನಿನಗೆ ಒಂದು ಬಿಡಿಗಾಸು ಕೊಡುವುದಿಲ್ಲ ಹೊರಟುಹೋಗು ಇಲ್ಲಿಂದ ಎಂದು ಬಾಗಿಲು ಎಳೆದುಕೊಂಡು ಒಳ ನಡೆದ.

    ವೇಣುಗೋಪಾಲ್

    ನೀತಿ:  ಕೆಲವೊಮ್ಮೆ ಸಂದರ್ಭಗಳು ಒಳ್ಳೆಯವರನ್ನು ಕೆಟ್ಟವರನ್ನಾಗಿಯೂ, ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಬದಲಾಯಿಸುತ್ತವೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ

    July 17, 2026

    ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!

    July 13, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್‌: ವಿಪಕ್ಷ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ

    July 27, 2026

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬೃಹತ್ ಅಕ್ರಮ ನಡೆದಿದ್ದು, 400 ಹುದ್ದೆಗಳಿಗೆ ತಲಾ 2…

    ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು

    July 27, 2026

    ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ

    July 27, 2026

    ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ: ರಾಜ್ಯ ಉಪಾಧ್ಯಕ್ಷರಾಗಿ ಎಂ. ದಾಸಪ್ಪ ಆಗತ್ತೂರು ನೇಮಕ

    July 27, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.