ತುಮಕೂರು: ನಗರದ ಸದಾಶಿವನಗರ ನಾಗಾರ್ಜುನ ಕಾಂಪ್ಲೆಕ್ಸ್ ಬಳಿ ಜನನಿಬಿಡ ಪ್ರದೇಶದಲ್ಲಿ ಫ್ಯೂಸ್ ಕಟೌಟರ್ ( Fuse cutouter)ವೊಂದು ಜನರ ಪ್ರಾಣ ಬಲಿಗಾಗಿ ಕಾಯುತ್ತಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಲಂಚಮುಕ್ತ ವೇದಿಕೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ವಿಚಾರ ಚರ್ಚೆಯಾದ ವೇಳೆ ಇದೇ ಗ್ರೂಪ್ ನಲ್ಲಿದ್ದ ತುಮಕೂರು ಕಾರ್ಯನಿರ್ವಾಹಕ ಅಭಿಯಂತರರು ತಕ್ಷಣವೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ನೆಲದಿಂದ ಕೇವಲ 3 ಅಡಿ ಎತ್ತರದಲ್ಲಿ ಫ್ಯೂಸ್ ಕಟೌಟರ್ ಇದ್ದು, ಯಾರಾದರೂ ತಪ್ಪಿ ಸ್ಪರ್ಶಿಸಿದರೆ, ಪ್ರಾಣ ಹಾನಿಯಾಗುವ ಸಾಧ್ಯತೆಗಳಿವೆ. ಇಷ್ಟೊಂದು ಅವೈಜ್ಞಾನಿಕವಾಗಿ ಇದನ್ನು ಹೇಗೆ ನಿರ್ಮಾಣ ಮಾಡಿದರು ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಯಾರದ್ದಾದರೂ ಪ್ರಾಣ ಹಾನಿಯಾದ ಬಳಿಕವೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವುದೇ? ಅದಕ್ಕಿಂತ ಮೊದಲು ಸಮಸ್ಯೆಯನ್ನು ಗಮನಕ್ಕೆ ತಂದರೆ ಎಚ್ಚೆತ್ತುಕೊಳ್ಳುದಿಲ್ಲವೇ ಎಂದು ಗ್ರೂಪ್ ನಲ್ಲಿ ಪ್ರಶ್ನಿಸಲಾಗಿತ್ತು.
ಯಾವ ವೇಳೆಯಲ್ಲಾದರು ಜೀವಕ್ಕೆ ಹಾನಿ ಉಂಟು ಮಾಡಬಹುದಾದ ಈ ಪರಿವರ್ತಕವನ್ನು ಬದಲಿಸುವಂತೆ ಗ್ರೂಪ್ ನಲ್ಲಿ ಲಂಚಮುಕ್ತ ಕ.ನಿ.ವೇ.ಯ ಹಂದ್ರಾಳ್ ನಾಗಭೂಷಣ್ ಮನವಿ ಮಾಡಿಕೊಂಡಿದ್ದರು.
ಇನ್ನೂ ಈ ಸಮಸ್ಯೆಯ ಪರಿಹಾರ ಮಾಡುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಲಂಚಮುಕ್ತ ಕ.ನಿ.ವೇದಿಕೆಯ ಜಿಲ್ಲಾ ಘಟಕ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy