ಕೊರಟಗೆರೆ: ಗೌರಿಕಲ್ಲು ಗ್ರಾಮಸ್ಥರು ಮತ್ತು ಕಾರ್ಮಿಕರ ವಿರೋಧದಿಂದ 15 ವರ್ಷದಿಂದ ಸ್ಥಗಿತವಾಗಿದ್ದ ಕಲ್ಲುಗಣಿಗಾರಿಕೆಗೆ ಈಗ ತುಮಕೂರಿನ ಕಲ್ಲು ಮತ್ತು ಭೂವಿಜ್ಞಾನ ಇಲಾಖೆ ಜೀವನೀಡಿದೆ ಎಂದು ಆರೋಪಿಸಿ, ಬೆಂಡೋಣಿ ಜಯರಾಂ ವಿರುದ್ದ ಧಿಕ್ಕಾರ ಕೂಗಿ ಬಂಡೇ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಗೌರಿಕಲ್ಲು ಗ್ರಾಮದ ಸರ್ವೆ ನಂ.36ರಲ್ಲಿ ಕಲ್ಲು ಗಣಿಗಾರಿಕೆಯ ಸದ್ದು ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಗೌರಿಕಲ್ಲು ಗ್ರಾಮದ ಸರ್ವೆ ನಂ.36ರಲ್ಲಿ ಬೆಂಡೋಣಿಯ ಜಯರಾಮ್ ಎಂಬಾತನಿಗೆ ಕಳೆದ 15ವರ್ಷದ ಹಿಂದೆ ಗಣಿಗಾರಿಕೆಯಿಂದ ಇದೇ ಸರ್ವೆ ನಂ.36ರಲ್ಲಿ 4 ಎಕರೆ ಸರಕಾರಿ ಭೂಮಿ, ಗಣಿ ಇಲಾಖೆಯಿಂದ 4 ಎಕರೆ ಕಲ್ಲುಕ್ವಾರೇ ಮಂಜೂರು ಆಗಿದೆ. ಅಂದಿನಿಂದಲೇ ಕಾರ್ಮಿಕರ ಹೋರಾಟವು ಪ್ರಾರಂಭವಾಗಿದೆ.
ಕಾರ್ಮಿಕರು ಮತ್ತು ಜಯರಾಂ ನಡುವೆ ಸಂಘರ್ಷ:
ಗೌರಿಕಲ್ಲು ಸರ್ವೆ ನಂ.36ರ ಕಲ್ಲುಕ್ವಾರೆಯ ಬಂಡೆಯಲ್ಲಿ ಕಳೆದ ಬಂಡೇ ಕಾರ್ಮಿಕರು ಕಳೆದ 40 ವರ್ಷದಿಂದ ಬಂಡೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬೆಂಡೋಣಿ ಜಯರಾಮ್ ಈ ಹಿಂದೆ ಇಲ್ಲೇ ಗಣಿಗಾರಿಕೆ ಪ್ರಾರಂಭ ಮಾಡಿದಾಗ ಕಾರ್ಮಿಕರು ಮತ್ತು ಸ್ಥಳೀಯರ ವಿರೋಧದಿಂದ ಇಲ್ಲಿಯ ತನಕ ಗಣಿಗಾರಿಕೆ ಸ್ಥಗಿತವಾಗಿತ್ತು. ಈಗ ಮತ್ತೆ ಪ್ರಾರಂಭವಾಗಿ ಸಮಸ್ಯೆಯ ಜೊತೆ ಸಂಘರ್ಷವು ಸೃಷ್ಟಿಯಾಗಿದೆ.
ಭದ್ರತೆ ಇಲ್ಲದೇ ಬ್ಲಾಸ್ಟಿಂಗ್ ಗೆ ತಯಾರಿ:
ಕಾರ್ಮಿಕರ ವಿರೋಧದ ನಡುವೆಯು ಸಹ ಬೆಂಡೋಣಿ ಜಯರಾಮ್ ಬೆಂಬಲಿಗರು ಪರವಾನಗಿಯೇ ಇಲ್ಲದ ಟ್ರಾಕ್ಟರ್ ನಿಂದ ಕಲ್ಲುಕ್ವಾರೆಯಲ್ಲಿ ರಂಧ್ರಕೊರೆದು ಬ್ಲಾಸ್ಟಿಂಗ್ ನಡೆಸಲು ಪೂರ್ವತಯಾರಿ ನಡೆಸುತ್ತಿದ್ದಾರೆ. ಬ್ಲಾಸ್ಟಿಂಗ್ ಪರವಾನಗಿ ಇಲ್ಲ, ಅದರ ಜೊತೆ ಟ್ರಾಕ್ಟರ್ ನ ನಂಬರಿನ ಜೊತೆ ದಾಖಲೆಯೇ ಇಲ್ಲ. ಜಯರಾಂ ಬೆಂಬಲಿಗರನ್ನ ಕಾರ್ಮಿಕರು ಪ್ರಶ್ನಿಸಿದ್ರೇ ಕಲ್ಲುಬಂಡೆಯ ಜೊತೆ ನೀವು ಬ್ಲಾಸ್ಟ್ ಆಗ್ತೀರಾ ಎಂಬ ದೌರ್ಜನ್ಯದ ಮಾತುಗಳು ಕೇಳಿಬಂದಿವೆ.
100 ಜನ ಕಾರ್ಮಿಕರು ಬೀದಿಪಾಲು:
ಕಲ್ಲುಬಂಡೆಯನ್ನೇ ನಂಬಿರುವ ಗೌರಿಕಲ್ಲು, ಮಲ್ಲೇಕಾವು ಮತ್ತು ಗೊಂದಿಹಳ್ಳಿಯ ಬಂಡೇ ಕಾರ್ಮಿಕರು ಕಲ್ಲು ಗಣಿಗಾರಿಕೆಯಿಂದ ಬೀದಿಗೆ ಬರುತ್ತಾರೆ. ಬಡಕಾರ್ಮಿಕರ ದಿನನಿತ್ಯದ ಕೂಲಿನ ಅನ್ನವನ್ನು ಗಣಿಗಾರಿಕೆ ಮಾಡುತ್ತಿರುವ ಶ್ರೀಮಂತರು ಕಿತ್ತುಕೊಳ್ತಾರೆ. ಇದು ಸರಿಯೇ. ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿವರ್ಗ ಬಡ ಕಾರ್ಮಿಕರ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಈಗ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4