ಬೆಂಗಳೂರು: ನಿರ್ದೇಶಕ ನಂದ ಕಿಶೋರ್ ಯುವ ನಟರೊಬ್ಬರಿಗೆ ಅವಕಾಶ ನೀಡುವ ಆಮಿಷವೊಡ್ಡಿ ಬರೋಬ್ಬರಿ 22 ಲಕ್ಷ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಯುವ ನಟ ಶಬರೀಶ್ ಶೆಟ್ಟಿ ಎಂಬವರು ಈ ಗಂಭೀರ ಆರೋಪ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವಾಟ್ಸಾಪ್ ಚಾಟ್ ಹಂಚಿಕೊಂಡಿದ್ದಾರೆ.
2016ರಲ್ಲಿ ನಂದಕಿಶೋರ್ ಜಿಮ್ ನಲ್ಲಿ ಪರಿಚಯವಾಗಿದ್ದರು. ನನ್ನ ಫ್ರೆಂಡ್ ಥರ ಇದ್ದ ಅವರು ದುಡ್ಡಿನ ಸಹಾಯ ಕೇಳಿದರು. ನಾನು ಬೇರೆಯವರ ಮೂಲಕ ಅವರಿಗೆ ಸಹಾಯ ಮಾಡಿದೆ. ನಾನು ಸುದೀಪ್ ಅವರ ಫ್ಯಾನ್ ಆಗಿರುವುದರಿಂದ ನಂದ ಕಿಶೋರ್ ಜೊತೆಗೆ ಫ್ರೆಂಡ್ ಶಿಪ್ ಬೆಳೆಸಿದರೆ ಸುದೀಪ್ ಅವರನ್ನು ಸಂಪರ್ಕಿಸಬಹುದು ಎಂದು ಭಾವಿಸಿದ್ದೆ ಎಂದು ಶಬರೀಶ್ ಹೇಳಿದ್ದಾರೆ.
ಸುದೀಪ್ ಸರ್ ಅವರನ್ನು ಸಂಪರ್ಕ ಮಾಡಬೇಕು ಅವರ ಜೊತೆ ಕ್ರಿಕೆಟ್ ಆಡಬೇಕು ಅನ್ನೋ ಕನಸಿತ್ತು. ನಂದ ಕಿಶೋರ್ ಅವರು ಸುದೀಪ್ ಸರ್ ಜೊತೆಗೆ ತುಂಬಾ ಆತ್ಮೀಯವಾಗಿದ್ರು ಅನ್ನೋ ಕಾರಣಕ್ಕೆ, ನಾನು ಅವರ ಜೊತೆ ಫ್ರೆಂಡ್ಶಿಪ್ ಬೆಳೆಸಿಕೊಂಡಿದ್ದೆ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಅವರು ನನ್ನ ಬಳಿ ದುಡ್ಡು ಕೇಳೋದಕ್ಕೆ ಶುರು ಮಾಡಿದ್ದರು. ನಾನು ಬೇರೆಯವರ ಬಳಿ ಹಣ ಪಡೆದು ಅವರಿಗೆ ಕೊಟ್ಟಿದ್ದೆ. ಬಳಿಕ ಹೀಗೆ ಪದೇ ಪದೇ ಹಣವನ್ನು ಪಡೆದಿದ್ದರು. ಆದರೆ ಒಂದು ರೂಪಾಯಿ ಬಡ್ಡಿ ಕೂಡ ಅವರು ಕೊಟ್ಟಿಲ್ಲ. ಸಿನಿಮಾದಲ್ಲಿ ಪಾತ್ರ ಕೊಡ್ತೀನಿ ಅಂತ ಹೇಳಿದ್ದರು ಎಂದು ಶಬರೀಶ್ ಆರೋಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW