ಮಾಯಸಂದ್ರ : ಐದು ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಯಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿ ಐದು ವರ್ಷ ಅಧಿಕಾರದಲ್ಲಿರುವುದು ವಾಡಿಕೆ.
ಆದರೆ ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಘಟಕಕ್ಕೆ ಇಂದು ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಐದು ವರ್ಷಕ್ಕೆ ಐದು ಅಧ್ಯಕ್ಷರನ್ನು ಸದಸ್ಯರು ಆಯ್ಕೆ ಮಾಡುವ ಮೂಲಕ ಹೊಸದೊಂದು ಪ್ರಯೋಗ ಮತ್ತು ಇತಿಹಾಸಕ್ಕೆ ಕ.ಸಾ.ಪ ಸಾಕ್ಷಿಯಾಯಿತು.
ಮಾಯಸಂದ್ರದ ಕನ್ನಡ ಭವನದಲ್ಲಿ ಇಂದು ನಡೆದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ತಾಲ್ಲೂಕಿನ ಕ.ಸಾ.ಪ. ಪ್ರಮುಖರು ಮತ್ತು ಸದಸ್ಯರ ಸಮ್ಮುಖದಲ್ಲಿ ಮಾತನಾಡಿದ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಎನ್.ಆರ್.ಜಯರಾಮ್, ” ಕನ್ನಡ ತಾಯಿಯ ಸೇವೆ ಮಾಡಲು ಅನೇಕರು ಬಹಳ ಉತ್ಸುಕರಾಗಿದ್ದು, ಎಲ್ಲರಿಗೂ ಅವಕಾಶ ಸಿಗಬೇಕೆಂದರೆ ವರ್ಷಕ್ಕೊಮ್ಮೆಯಂತೆ ಅಧ್ಯಕ್ಷರು ಆಯ್ಕೆಯಾಗಿ ಕನ್ನಡ ಸೇವೆ ಮಾಡಬೇಕೆಂಬುದೇ ನನ್ನ ಅಭಿಪ್ರಾಯ ” ಎಂದರು.
ಎನ್.ಆರ್.ಜಯರಾಮ್‘ರವರ ಅಭಿಪ್ರಾಯಕ್ಕೆ ಸರ್ವಸದಸ್ಯರಿಂದ ವ್ಯಾಪಕ ಬೆಂಬಲ ವ್ಯಕ್ತವಾದ ಕಾರಣ, ತಕ್ಷಣ ಇದೇ ನಿರ್ಧಾರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಇದರಂತೆ ವರ್ಷಕ್ಕೊಮ್ಮೆಯಂತೆ ಐದು ವರ್ಷಗಳಿಗೆ ಆಯ್ಕೆಯಾದ ಸದಸ್ಯರುಗಳ ಹೆಸರು ಈ ರೀತಿ ಇವೆ:
ಮೊದಲನೇ ವರ್ಷ: ಜವರೇಗೌಡ
ಎರಡನೇ ವರ್ಷ: ಶ್ರೀಧರಮೂರ್ತಿ
ಮೂರನೇ ವರ್ಷ: ಹನುಮಂತಯ್ಯ
ನಾಲ್ಕನೇ ವರ್ಷ: ಪ್ರಕಾಶ್ ಸಿ.ಪಿ.
ಐದನೇ ವರ್ಷ: ಮುನಿರಾಜು
ಸಭೆಯಲ್ಲಿ SDMC ಅಧ್ಯಕ್ಷರಾದ ಕರಿಬಸವಪ್ಪ, ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಪಿ.ರಾಜು, ರಾಜ್ಯ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಹ್ಲಾದ್, ತುರುವೇಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ತಾಲ್ಲೂಕು ಕಲಾವಿದರ ಒಕ್ಕೂಟದ ಅಧ್ಯಕ್ಷ ಬೋರೇಗೌಡ ಹಾಗೂ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB