ತುರುವೇಕೆರೆ: ನಮ್ಮ ಗ್ರಾಮ ನಮ್ಮ ಹೆಮ್ಮೆ, ಎಲ್ಲಾ ಗ್ರಾಮಗಳ ಅಭಿವೃದ್ಧಿಯೇ ನಮ್ಮ ಮೂಲ ಗುರಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವ ಮೂಲಕ ಒಂದು ವರ್ಷದ ಸಂಪೂರ್ಣ ಆಡಳಿತ ಅವಧಿಯನ್ನು ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರದಿಂದ ಪೂರೈಸಿದ್ದೇವೆ ಎಂದು ಮಾಯಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಗಳ ಗೌರಮ್ಮ ಹೊನ್ನಪ್ಪ ಅವರು ತಿಳಿಸಿದರು.
ಮಾಯಸಂದ್ರ ಗ್ರಾಮದ ರಾಜೀಮಾತೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಂತೋಷಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಬಹುಮುಖ್ಯವಾಗಿ ಹಿರಿಯ ಸದಸ್ಯರಾದ ಅಜಿತ್ ರವರ ಮಾರ್ಗದರ್ಶನದಂತೆ, ಸರ್ವ ಸದಸ್ಯರ ಬೆಂಬಲ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಒಂದು ವರ್ಷದ ಸಂಪೂರ್ಣ ಅಧಿಕಾರ ಅವಧಿಯನ್ನು ಉತ್ತಮವಾಗಿ ಪೂರೈಸಿದ್ದೇವೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿಯು ಎಲ್ಲಾ ಸದಸ್ಯರುಗಳು ಸಹಾ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ, ಅಭಿವೃದ್ಧಿ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹೆಮ್ಮೆ ಇರುವುದಾಗಿ ಸಂತಸ ವ್ಯಕ್ತಪಡಿಸಿದರು.
ಸಾಕಷ್ಟು ಲಕ್ಷಗಳಿಗೂ ಅಧಿಕವಾಗಿ ಸರ್ಕಾರದ ಅನುದಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮುಂದೆಯೂ ಸಹ ಅಧಿಕಾರ ಮುಂದುವರೆಯಲಿದ್ದು, ಸರ್ವ ಸದಸ್ಯರ ಬೆಂಬಲ, ಗ್ರಾಮಸ್ಥರ ಸಹಕಾರ ಸದಾ ಹೀಗೆ ಇರಲಿ ಎಂದು ಮನವಿ ಮಾಡುತ್ತಾ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಸರ್ವ ಸದಸ್ಯರಿಗೂ ಸಮಸ್ತ ನಾಗರಿಕರಿಗೂ ಕೃತಜ್ಞತೆಗಳನ್ನು ತಿಳಿಸುವುದಾಗಿ ಇದೇ ವೇಳೆ ತಿಳಿಸಿದರು.
ಸಂದರ್ಭದಲ್ಲಿ ಉಪಾಧ್ಯಕ್ಷರಾದ ಭಾರತಿ ಲಕ್ಷ್ಮಣ್, ಹಿರಿಯ ಸದಸ್ಯರಾದ ಅಜಿತ್, ಪಲ್ಲವಿ ಶಿವರಾಜು, ಉಷಾ ಶ್ರೀನಿವಾಸ್, ಸವಿತಾ ಶಿವಕುಮಾರ್, ಏಜಾಸ್ ಅಹಮದ್, ಪಾರ್ಥಸಾರಥಿ, ವಿಶಾಲಾಕ್ಷಮ್ಮ, ಚಂದ್ರಣ್ಣ, ಗ್ರಾಮದ ಹಿರಿಯ ಮುಖಂಡರಾದ ಸಿದ್ದೇಗೌಡ ಪ್ರಕಾಶ್, ಅಬೂಬಕ್ಕರ್, ಶಿಕ್ಷಕರಾದ ರಹಮತ್ ಉಲ್ಲಾ, ಪಂಚಾಕ್ಷರಯ್ಯ, ಹೇಮೇಶ್ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. ಮುಖಂಡರಾದ ಎನ್.ಎನ್. ಸುಬ್ರಮಣ್ಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವರದಿ: ಸಚಿನ್ ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB