ಸರಗೂರು: ಲ್ಯಾಂಡ್ ಲಾರ್ಡ್ ಸಿನೆಮಾದ ನಾಯಕ ರಾಚಯ್ಯ ಸಂವಿಧಾನದ ಸ್ವರೂಪವಾಗಿಯೂ, ಆತ ಬಳಸುವ ಕೊಡಲಿಯು ಸಂವಿಧಾನ ಜಾರಿ ಮಾಡುವ ಕಾನೂನಿನ ರೂಪಕವಾಗಿರುವ ಸಿನಿಮಾ ನನ್ನ ಎಲ್ಲಾ ಸಮುದಾಯದ ಬಂಧುಗಳು ಸಿನಿಮಾ ನೋಡಬೇಕಾಗಿರುವ ಸಿನಿಮಾ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಮದನ್ ಮ್ಯಾಡಿ ತಿಳಿಸಿದರು.
ಪಟ್ಟಣದ ಶಂಕರ್ ಟಾಕೀಸ್ ನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ಬುಧವಾರದಂದು ಉಚಿತವಾಗಿ ಒಂದು ದಿನದ ಟಿಕೆಟ್ ಯನ್ನು ವಿತರಿಸಿ ಮಾತನಾಡಿದರು.
ಈ ಗ್ರಾಮಿಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಸಿನಿಮಾ ಟಿಕೆಟ್ ನೀಡುತ್ತಿದ್ದೇವೆ.ಅದರಿಂದ ಈ ಸಿನಿಮಾ ನೋಡಿ ಹಳ್ಳಿ ಹಳ್ಳಿಯ ಜನರು ಬಂದು ನೋಡಿ ಎಂದು ಕರೆ ನೀಡಿದರು.
ಸಿನಿಮಾದಲ್ಲಿ ಪಾಳೇಗಾರ ಸಣ್ಣಧಣಿಯ ಮಾತಿನಿಂದ ಹೊರಡುವ ಕಾನೂನುಗಳು ಬದಲಾದರೂ ಕಟ್ಟಳೆಗಳು ಬದಲಾಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿರಬಹುದು. ಆದರೆ, ನಮ್ಮ ಗ್ರಾಮಕ್ಕಲ್ಲ. ಕೂಲಿಗೆ ಕಾಳು ಮಾತ್ರವೇ. ಆಳು ಆಳಾಗಿಯೇ ಇರಬೇಕೆಂದು ಧ್ವನಿಸುವ ಮಾತುಗಳು ಪಾಳೇಗಾರಿಕೆಯ ಜಡ್ಡುಗಟ್ಟಿದ ಮನಃಸ್ಥಿತಿ ಸುಲಭವಾಗಿ ಹೋಗುವಂತಹದ್ದಲ್ಲ. ಸಂವಿಧಾನ ಜಾರಿ ಮಾಡುವವರು ಕಾನೂನಿನಡಿ ತಪ್ಪೆಂದು ಕಂಡರೂ ಸೌಮ್ಯವಾದಿಗಳಾಗಿದ್ದರೆ, ಮೌನಿಗಳಾಗಿದ್ದರೆ ಶತಮಾನಗಳಿಂದ ಕಟ್ಟಿರುವ ಜಾತಿಯ, ಮೇಲು–ಕೀಳು, ಅಸ್ಪೃಶ್ಯತೆಯ ಜಿಡ್ಡು ಹೋಗಲಾರದು. ಅದಕ್ಕೆ ಸಂವಿಧಾನದಡಿಯಲ್ಲಿ ಕಠಿಣವಾದ ಶಿಕ್ಷೆ ನೀಡದರೆ ಮಾತ್ರವೇ ಅಂತಹ ಜಿಡ್ಡು ಕರಗಲು ಸಾಧ್ಯ ಎಂಬುದನ್ನು ನಾಯಕನೆಂಬ ಸಂವಿಧಾನವು ಕೊಡಲಿಯೆಂಬ ಕಠಿಣವಾದ ಕಾನೂನಿನ ಅಸ್ತ್ರವಾಗಿ ಝಳಪಿಸಲಾಗಿದೆ.
ಲ್ಯಾಂಡ್ ಲಾರ್ಡ್ ಸಿನೆಮಾ ದೃಶ್ಯಗಳು 50–60ವರ್ಷದ ಹಿಂದಿನ ಕತೆಯಂತೆ ಭಾಸವಾಗಬಹುದು. ಆದರೆ, ಮಾನಸಿಕವಾಗಿ ನಮ್ಮ ಚಿಂತನೆಗಳು, ಆಲೋಚನೆಗಳು ಗತಕಾಲದ್ದೆ ಎಂಬುದನ್ನು ರಾಚಯ್ಯನ ಮಗಳು ನೆಲಕ್ಕೆ ಬಿದ್ದ ದೇವರ ವಸ್ತ್ರವನ್ನು ಎತ್ತಿ ಕೊಟ್ಟಿದ್ದಕ್ಕೆ ಮೈಲಿಗೆಯೆಂದು ಕಂಬಕ್ಕೆ ಕಟ್ಟಿಹಾಕಿ ಹೊಡೆಯುವಂತಹ ದೃಶ್ಯ, ನಮ್ಮ ಬಹುತೇಕ ಹಳ್ಳಿಗಳಲ್ಲಿ ಇವತ್ತಿಗೂ ಹೊಲೆಯ, ಮಾದಿಗರು ದೇವಸ್ಥಾನಕ್ಕೆ ಒಳಕ್ಕೆ ಪ್ರವೇಶಿಸಲು ಮನುವಾದಿಗಳಲ್ಲಿ ಇನ್ನೂ ಇದೆ. ಅಧಿಕಾರ ಹಾಗೂ ಮನುವಾದಿ ಕಟ್ಟಳೆಗಳಿಂದ ಇಡೀ ಸಮುದಾಯವನ್ನು ಬೆದರಿಸುವಂತಹ, ಪ್ರಶ್ನಿಸುವವರನ್ನು ಇಲ್ಲವಾಗಿಸುವಂತಹ ಸಾವಿರಾರು ವರ್ಷಗಳಿಂದ ಇಂದಿಗೂ ನಡೆದುಕೊಂಡು ಬರುತ್ತಿರುವ ಅನೈತಿಕತೆಯನ್ನು ಚಿತ್ರದಲ್ಲಿ ಯಶಸ್ವಿಯಾಗಿ ಕಟ್ಟಿಕೊಡಲಾಗಿದೆ. ಸಿನೆಮಾದಲ್ಲಿ ಸಣ್ಣಧಣಿ ಹೇಳಿದಂತೆಯೇ ಕಾನೂನುಗಳು ಬದಲಾವಣೆಯಾದರೂ ಪಂಚಾಯತಿಯ ಕಟ್ಟಳೆಗಳು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಬಹುಪಾಲನ್ನು ಪಡೆಯುವವರಾಗಿಯೂ, ಬಹುಸಂಖ್ಯಾತ ಶ್ರಮಿಕರು ಒಪ್ಪತ್ತಿನ ಊಟಕ್ಕೂ ಮತ್ತೊಬ್ಬರ ಮುಂದೆ ಕೈಚಾಚುವವರಾಗಿ ಇವತ್ತಿಗೂ ಮುಂದುವರೆದುಕೊಂಡು ಬರಲಾಗುತ್ತಿದೆ ಎಂದರು.
ದುಡಿಯುವ ವರ್ಗಗಳ ಜೀವನ ಪ್ರೀತಿ, ಪರಸ್ಪರರ ನಡುವಿನ ಬಾಂಧವ್ಯದ ನೈಜತೆ ಕಾಣ್ತುಂಬಿ ಬರುವಂತಹದಾಗಿದೆ. ಧಣಿಗಳು ಒಡ್ಡುವ ಸವಾಲಿಗೆ ಹತ್ತು ಏಟಿನ ಬದಲಾಗಿ ಒಂದೇ ಏಟಿಗೆ ಭದ್ರವಾಗಿ ನೆಟ್ಟಿದ್ದ ಬಲಿಷ್ಟವಾದ ಮರದ ಕಂಬದ ತುಂಡನ್ನು ಕತ್ತರಿಸುವ ದೃಶ್ಯದಲ್ಲಿ ನಾಯಕನ ನಟನಾಗಿ ರಾಚಯ್ಯ, ತಾಯಿಯ ಪಾತ್ರದಲ್ಲಿ ಉಮಾಶ್ರೀಯ ಕೆಚ್ಚು, ಆರ್ಭಟ ನೋಡಿ ಕಣ್ತುಂಬಿಸಿಕೊಳ್ಳುವಂತಹ ಅನನ್ಯವಾದ ದೃಶ್ಯಗಳಾಗಿವೆ ಅದರಿಂದ ಎಲ್ಲಾ ಸಮುದಾಯದ ಬಂಧುಗಳು ಈ ಸಿನಿಮಾ ನೋಡಲೇಬೇಕಾಗುವ ಸಿನಿಮಾ. ಅಂತಿಮವಾಗಿ ಲ್ಯಾಂಡ್ ಲಾರ್ಡ್ ಸಿನೆಮಾ ಕುರಿತು ಹೇಳುವುದಾದರೆ, ಹತ್ತಾರು ಸಿನೆಮಾಗೆ ಆಗುವಷ್ಟು ಕತೆಯ ಹಂದರವನ್ನು ಒಂದೇ ಸಿನೆಮಾದಲ್ಲಿ ಹೇಳಿಬಿಡಬೇಕೆಂಬ ಕಾತುರ, ಆತುರ ನಿರ್ದೇಶಕ ಜಡೇಶ್ ಅವರಿಗೆ ಯಾಕೆ ಬಂತೋ ಎಂಬುದನ್ನು ಅವರೇ ಹೇಳಬೇಕು. ಇನ್ನು ಸಂಭಾಷಣೆ ಮಾಸ್ತಿ ಸರ್ ಅವರ ತಂಡದ ಮಾನವೀಯ ಸೃಜನಶೀಲತೆಯನ್ನು ಸಿನೆಮಾ ನೋಡುವ ಮೂಲಕ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ನಾವುಗಳು ದುನಿಯಾ ವಿಜಯ್ ರವರ ಪರವಾಗಿ ನಿಲ್ಲುತ್ತವೆ. ದುನಿಯಾ ವಿಜಯ್ ರವರು ಎಲ್ಲಾ ಸಮುದಾಯದ ಪರವಾಗಿ ಸಿನಿಮಾ ಮಾಡುತ್ತಾನೆ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ಜನತೆ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ಸಾರ್ವಜನಿಕರು ಮುಗಿಬಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ವಕೀಲ ಸುರೇಶ್,ಬುದ್ಧ ಪ್ರಕಾಶ್, ಚನ್ನಪ್ಪ ಸರಗೂರು, ಕಿಟ್ಟಿ,ಮಾಜಿ ತಾಪಂ ಅಧ್ಯಕ್ಷ ರವಿಕುಮಾರ್, ಸತೀಶ್ ಉಯ್ಯಂಬಳ್ಳಿ ,ವಿಷಕಂಠ, ಮಹೇಂದ್ರ, ಪ್ರಕಾಶ್, ಮೂರ್ತಿ, ದಯಾನಂದ, ಪುಟ್ಟರಾಜು,ಜಮೀರ್,ಹಾಲಯ್ಯ, ಸೋಮೇಶ್, ಲೋಕೇಶ್ ,ಇನ್ನೂ ಮುಖಂಡರು ಕುಟುಂಬರ ಸಮೇತ ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


