ಸರಗೂರು: ಜೆಡಿಎಸ್ ನ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾರೂ ಮುಂಬರುವ ಜಿಲ್ಲಾ ಮತ್ತು ತಾಪಂ ಹಾಗೂ ಪುರಸಭೆ ಪಟ್ಟಣ ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಎದುರಿಸಲು ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡವಂತೆ ಜೆಡಿಎಸ್ ಪಕ್ಷದ ಮುಖಂಡ ಹಾಗೂ ಎನ್ ಡಿ ಎ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ತಿಳಿಸಿದರು.
ತಾಲ್ಲೂಕಿನ ಸಮೀಪದ ಮಾದಪುರ ಗ್ರಾಮ ಬಳಿ ಇರುವ ಕೃಷ್ಣನಾಯಕರವರ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಮಾರ್ಚ್ 27ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಲಿರುವ ಹಿನ್ನೆಲೆ ಪೂರ್ವ ಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೆ.ಎಂ.ಕೃಷ್ಣನಾಯಕ ಮಾತನಾಡುತ್ತಿದ್ದರು.
ಎಚ್.ಡಿ.ಕೋಟೆ ಪಟ್ಟಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತಾಲೂಕಿನಿಂದ 20ರಿಂದ 25 ಸಾವಿರ ಜನರು ಆಗಮಿಸ ಬೇಕು ಎಂದು ಕಾರ್ಯಕರ್ತರಿಗೆ ಅವರು ಸೂಚನೆ ನೀಡಿದರಲ್ಲದೇ, ಪಕ್ಷದ ತತ್ವದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು, ತಳಮಟ್ಟದಲ್ಲಿ ಸಂಟನೆ ಬಲಪಡಿಸಿದರೆ ಎಲ್ಲಾ ಚುನಾವಣೆಯಲ್ಲಿ ಯಶಸ್ಸು ಸಾಧಿಸುವುದು ಬಹಳ ಸುಲಭ ಎಂದರು.
ಈ ಬಾರಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಜಯಶಾಲಿಯಾಗಿದ್ದಾರೆ. ಇದು ಮುಂದಿನ ಚುನಾವಣೆಗಳಿಗೆ ಜೆಡಿಎಸ್ ಪಕ್ಷಕ್ಕೆ ದಿಕ್ಸೂಚಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಚ್.ಡಿ.ಕೋಟೆ ಜೆಡಿಎಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ತಾ.ಪಂ. ಸದ್ಯಸರಾದ ಎಚ್ ಹನು, ಮಳಲಿ ಶಾಂತಕುಮಾರ, ಮುಖಂಡರಾದ ಕಾಳಿಹುಂಡಿ ಸಿದ್ದೇಗೌಡ, ಉದಯಕುಮಾರ, ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಸಾಗರೆ ಶಂಕರ್, ಪುರದಕಟ್ಟೆ ಬೆಟ್ಟ ನಾಯಕ, ವಾಲ್ಮೀಕಿ ಸಿದ್ದರಾಜು, ಮುಳ್ಳೂರು ನಿಂಗರಾಜು, ಪ್ರಕಾಶ್, ಮಹೇಶ್ ಸಿ.ವಿ.ನಾಗರಾಜು, ಹರೀಶ್ ಗೌಡ, ಯೋಗಾನರಸಿಂಹ , ನರಸಿಂಹೇಗೌಡ , ಎಂ.ಬಿ.ಜಯರಾಮ್, ಕಾಟವಾಳು ಪರಶಿವಮೂರ್ತಿ, ಪುಟ್ಟ ಹನುಮಯ್ಯ, ಶಿವಣ್ಣ, ಚನ್ನೀಪುರ ಮಲ್ಲೇಶ್, ನಟರಾಜು, ಎಂ.ಡಿ.ಮಂಜಯ್ಯ, ಶ್ಯಾಮ್ ಸುಂದರ್, ಹನುಮಂತಯ್ಯ, ನಾಗರಾಜು, ವೆಂಕಟಾಚಲ, ನಾಗೇಶ್, ಮಹದೇವಸ್ವಾಮಿ, ವಿನೋದ್, ಇನ್ನೂ ಮುಖಂಡರು ಸೇರಿದಂತೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


