ಕೊರಟಗೆರೆ : ತಾಲ್ಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಜೂನ್ 21 ರಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಯಸುವ ನೂತನ ವಧು–ವರರು ಶ್ರೀಮಠಕ್ಕೆ ಬಂದು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಾಯಿಸಿಕೊಳ್ಳುವಂತೆ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶೀವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಿದ್ದರಬೆಟ್ಟದ ಶ್ರೀಮಠದಲ್ಲಿ ನಡೆದ ಪೂರ್ವಭಾವಿಯಲ್ಲಿ ಮಾತನಾಡಿ ಮುಂಬರುವ ಜೂನ್ 21ರ ಭಾನುವಾರದಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದಲ್ಲಿ20ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಮತ್ತು ಧರ್ಮ ಜಾಗೃತಿ ಸಮಾವೇಶ ಆಚರಿಸಲಾಗುವುದು. ಅಂದು ವೀರಶೈವ ವಟುಗಳಿಗೆ ಉಚಿತ ದೀಕ್ಷಾ ಸಂಸ್ಕಾರ ನೀಡಿವುದರೋಂದಿಗೆ ಉಚಿತ ಆದರ್ಶ ಸಾಮೂಹಿಕ ವಿವಾಹವನ್ನು ನಡೆಸಲಾಗುವುದು. ಆ ಸಾಮೂಹಿಕ ವಿವಾಹಗಳನ್ನು ಜೂನ್ 21 ರ ಮದ್ಯಾಹ್ನ 12:20 ಕ್ಕೆ ಅಭಿಜಿನ್ ಲಗ್ನದಲ್ಲಿ ನಡೆಸಲಾಗುವುದು. ಮದುವೆಯನ್ನು ಶಾಸ್ತ್ರೋತ್ರವಾಗಿ ಮಾಡಿ ಕೊಡಲಾಗುವುದು ನೂತನ ವಧು–ವರರಿಗೆ ಮಾಂಗಲ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀಡುವರು. ಈ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಳ್ಳುವ ವಧುವಿಗೆ 18 ವರ್ಷ ಆಗಿರಬೇಕು ವರನಿಗೆ 21 ವರ್ಷ ತುಂಬಿರಬೇಕು ಅಂತಹ ವಧು–ವರರ ತಂದೆ–ತಾಯಿಗಳು ಅಥವಾ ಸಂಬಂಧಿಕರು ಅಗತ್ಯ ದಾಖಲಾತಿಗಳನ್ನು ಶ್ರೀ ಮಠಕ್ಕೆ ಮೇ 31ರ ಒಳಗೆ ಶ್ರೀ ಮಠಕ್ಕೆ ಸಲ್ಲಿಸಬೇಕು ಎಂದರು.
ಸಮಾರಂಭದಲ್ಲಿ ಈ ಬಾರಿ ಸಿದ್ದಶ್ರೀ ಪ್ರಶಸ್ತಿಯನ್ನು ಧರ್ಮಸ್ಥಳದ ಶ್ರೀ ವೀರೇಂದ್ರ ಹಗ್ಗಡೆಯವರಿಗೆ ಪ್ರಧಾನಿಸಲಾಗುವುದು ಎಂದ ಅವರು ಈ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮಗಳು ನಡೆಯಲ್ಲಿದ್ದು ಮಠದ ಎಲ್ಲಾ ಸಭಕ್ತರು ಈ ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭದಲ್ಲಿ ಸೇವೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಮುಖಂಡರುಗಳಾದ ಸೋಮಣ್ಣ, ಆರ್.ಎಸ್.ರಾಜಣ್ಣ, ಬಿಪಿಎಸ್ ಕುಮಾರ್, ಶಿವಕುಮಾರ್, ಪಂಚಾಕ್ಷರಯ್ಯ, ಅಖಂಡರಾದ್ಯ, ಜೆಡಿಎಸ್ ಅದ್ಯಕ್ಷ ಕಾಮರಾಜು, ಗೊಂದಿಹಳ್ಳಿ ರಂಗರಾಜು, ಬಿಜೆಪಿ ಅದ್ಯಕ್ಷ ರುದ್ರೇಶ್, ಮಾಜಿ ಅದ್ಯಕ್ಷ ದರ್ಶನ್, ಹನುಮಂತರಾಯಪ್ಪ, ಸಿದ್ದಮಲ್ಲಯ್ಯ, ವೀರಭದ್ರಯ್ಯ (ಭದ್ರಣ್ಣ), ಮಂಜುಳಾಆರಾದ್ಯ, ಮಮತಾ ದಿವಾಕರ್, ಕೆ.ಬಿ.ಲೋಕೇಶ್, ಜಿಎಸ್ ಎಮ್ ರಘು ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


