ತುರುವೇಕೆರೆ: ತಾಲ್ಲೂಕು ಮಾಯಸಂದ್ರದಲ್ಲಿ ” ವಿಶ್ವ ಮಹಿಳಾ ದಿನಾಚರಣೆ “ಯನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ , ಪಾತ್ರ ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದ ಮಹಿಳಾ ಸಮಾಜದ ಅಧ್ಯಕ್ಷರಾದ ಆನಂದ ಮದನ್ ಕುಮಾರ್ ರವರು ನೆರೆದಿದ್ದ ಸರ್ವರಿಗೂ ಶುಭಾಶಯ ತಿಳಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಲೀಲಾವತಿ ಗಿಡ್ಡಯ್ಯ , ಸಮಾಜದ ಮುಖ್ಯ ಸದಸ್ಯರುಗಳಾದ ವಿಜಯ ವಸಂತ್ ರಾಜ್ , ಸ್ವರಣಂಭ, ಭುವನೇಶ್ವರಿ, ಆಶಾ ಚಂದು, ಶೈಲಾ ಪ್ರಸಾದ್ , ಪೂರ್ಣಿಮಾ , ಸಹನ ಸತ್ಯ, ಅಂಜಲಿ ಭಾನುಪ್ರಕಾಶ್ , ಪಾರ್ವತಮ್ಮ, ಗೀತಾ ವಿಪುಲ್ ಜೈನ್ , ಸಂಗೀತಾ ಮತ್ತು ಇತರರು ಭಾಗವಹಿಸಿದ್ದರು.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy