Subscribe to Updates
Get the latest creative news from FooBar about art, design and business.
- ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
- ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
- ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
- ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
- ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
- ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
- ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್ ಕಾರಣ ಆಗ್ತಾ ಇದೆಯೇ?
- ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
Author: admin
ರಾಜಕೀಯ ದ್ವೇಷದಿಂದ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಚಾಕು ಇರಿದ ಪ್ರಕರಣ ಕುಣಿಗಲ್ ತಾಲ್ಲೂಕಿನ ನಡೇಮಾವಿನಪುರದಲ್ಲಿ ನಡೆದಿದೆ. ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೆ ತೆರಳಿದ್ದಕ್ಕೆ ಚಾಕು ಇರಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವೆಂಕಟಗೌಡನಪಾಳ್ಯದ ಕೀರ್ತಿ ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ ಎಂದು ತಿಳಿದು ಬಂದಿದೆ. ಚಂದ್ರ, ಜಗದೀಶ್ ಹಾಗೂ ಸುನೀಲ್ ಎಂಬ ಮೂವರು, ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆಗೆ ಯಾಕೆ ತೆರಳಿದ್ದೆ ಎಂದು ಕೀರ್ತಿಯವರ ಬಳಿ ಜಗಳ ಆರಂಭಿಸಿದ್ದಾರೆ. ಬಳಿಕ ಮೂವರು ಸೇರಿ ಕೀರ್ತಿ ಮೇಲೆ ಚಾಕು, ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕು ಇರಿತದಿಂದ ಗಾಯಗೊಂಡ ಕೀರ್ತಿಯನ್ನು ಕುಣಿಗಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕರ್ತವ್ಯ ನಿರತ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಹುಸೇನಿ ಹಾಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 10ನೇ ಬೆಟಾಲಿಯನ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಮಹೆಬೂಬ್ ನಗರದ ನಾಗರ್ ಕರ್ನೂಲ್ ಜಿಲ್ಲೆ ಅಚಂ ಪೇಟ್ ಮಂಡಲದ ಲಕ್ಷ್ಮೀಪುರ ಗ್ರಾಮದ ಬಾಲೇಶ್ವರ್(48) ಆತ್ಮಹತ್ಯೆಗೈದಿರುವ ಅಧಿಕಾರಿ. ಬಾಳೇಶ್ವರ ತಮ್ಮ ಕರ್ತವ್ಯದ ಭಾಗವಾಗಿ ಮಹಬೂಬ್ನಗರ 10ನೇ ಬೆಟಾಲಿಯನ್ ನಿಂದ ಪಟಬಸ್ತಿಗೆ ಬಂದಿದ್ದರು. ಜಮುನಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಸರ್ವ್ ಎಸ್ ಐ ಬಾಳೇಶ್ವರ್ ಅವರು ಆರು ತಿಂಗಳ ಕಾಲ ಹಳೇ ಟೌನ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಎರಡೇ ದಿನಕ್ಕೆ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ದಕ್ಷಿಣ ವಲಯ ಡಿಸಿಪಿ ಸಾಯಿ ಚೈತನ್ಯ ಮತ್ತು ಚಾರ್ಮಿನಾರ್ ಎಸಿಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಲಾಗಿದೆ. ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ. ನಮ್ಮತುಮಕೂರಿನ…
ರಾಜ್ಯದಲ್ಲಿ ಕಳೆದ ಆರ್ಥಿಕ ವರ್ಷದ ಅಂದರೆ 2023-24ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಮುಜರಾಯಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನು ಇಲಾಖೆಯ ಆಯುಕ್ತರು ಬಿಡುಗಡೆಗೊಳಿಸಿದ್ದಾರೆ. ಅದರಂತೆಯೇ, ಕುಕ್ಕೆ ಸುಬ್ರಮಣ್ಯ ದೇವಾಲಯ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಸತತವಾಗಿ ಹದಿಮೂರು ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಪ್ರಸಿದ್ದ ನಾಗರಾಧಾನೆಯ ಸನ್ನಿಧಿ ಕುಕ್ಕೆ ಸುಬ್ರಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯವಿದೆ. 2022-23ಕ್ಕೆ ಹೋಲಿಸಿದರೆ ಕುಕ್ಕೆ ದೇವಾಲಯದ ಆದಾಯವು 26 ಕೋಟಿ ಹೆಚ್ಚಾಗಿದೆ. ಕುಕ್ಕೆ ದೇವಾಲಯಕ್ಕೆ ಗುತ್ತಿಗೆ ಆಧಾರದ, ತೋಟದ ಉತ್ಪನ್ನಗಳು, ಕಟ್ಟಡಗಳ ಬಾಡಿಗೆ, ಅನುದಾನ, ವಸತಿಗೃಹ ಮುಂತಾದವುಗಳಿಂದಲೂ ಆದಾಯ ಬರುತ್ತಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಪೂಜೆ ನೆರವೇರಿಸಲು ದೇಶದೆಲ್ಲಡೆಯಿಂದ ಭಕ್ತರು ಬರುತ್ತಾರೆ. ಎರಡು ಅಥವಾ ಮೂರು ಪಾಳಿಯಲ್ಲಿ ಈ ಪೂಜೆಯನ್ನು ದೇವಸ್ಥಾನ ನಡೆಸುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ರಜಾದಿನಗಳು, ವಾರಂತ್ಯಕ್ಕೆ ಹೊಂದಿಕೊಂಡು ಬಂದಿದ್ದರಿಂದ, ಕುಕ್ಕೆ ಸೇರಿದಂತೆ ದೇವಾಲಯಗಳಲ್ಲಿ ವಿಪರೀತ…
ಬೆಣ್ಣೆ ನಗರಿ, ಶಿಕ್ಷಣ ನಗರಿ ಎಂದೆಲ್ಲ ಪ್ರಖ್ಯಾತಿ ಹೊಂದಿರುವ ದಾವಣಗೆರೆ ನಗರದಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಮತ್ತು ಕಡುಬಡವರಂತಹ ಲಕ್ಷಾಂತರ ಜನರು ವಾಸ ಮಾಡುತ್ತಿದ್ದಾರೆ. ಇಂತಹ ದಾವಣಗೆರೆಯ ಶಾಮನೂರು ಕೆಳ ಸೇತುವೆಯನ್ನೇ ಸೂರು ಮಾಡಿಕೊಂಡು ಪುಟ್ಟ ನಾಯಿಮರಿಯೊಂದಿಗೆ ವಾಸವಿದ್ದ ವಯೋವೃದ್ಧೆಯನ್ನು ರಕ್ಷಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾನವೀಯತೆ ಮೆರೆದಿದ್ದಾರೆ. ನ್ಯಾಯಾಧೀಶರು ಪ್ರತಿದಿನ ವಸತಿಗೆ ಹಿಂದಿನ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ, ಗಾಳಿ ಮತ್ತು ಧೂಳಿನ ನಡುವೆ ವಾಸವಿದ್ದ ಈ ವಯೋವೃದ್ಧೆಯನ್ನು ಗಮನಿಸಿದ್ದಾರೆ. ತಮ್ಮ ಇಲಾಖೆಯ ಇನ್ನೋರ್ವ ನ್ಯಾಯಾಧೀಶರಾದ ಮಹಾವೀರ ಕರೆಣ್ಣನವರ ಇವರೊಂದಿಗೆ ಸೇರಿ ವೃದ್ಧೆಯ ಬದುಕಿಗೆ ಆಸರೆ ಆಗಿದ್ದಾರೆ. ಮೊದಮೊದಲು ತೀವ್ರ ಪ್ರತಿರೋಧ, ಆಕ್ರೋಶ, ಕೌಟುಂಬಿಕವಾಗಿ ತನ್ನ ಮೇಲಾದ ಆಕ್ರಮಣಗಳನ್ನು ಅಸ್ಪಷ್ಟವಾಗಿ ಹೇಳುತ್ತಿದ್ದ ಆ ವಯೋವೃದ್ಧೆ, ಉಂಡ ಸಂಕಟಗಳ ಕಾರಣಕ್ಕೋ ಏನೋ ತನ್ನೆದುರಿಗೆ ನಿಂತು ತನ್ನನ್ನು ವಿಚಾರಿಸುತ್ತಿದ್ದ ನ್ಯಾಯಾಧೀಶರ ಮೇಲೆಯೇ ಹರಿಹಾಯ್ದಿದ್ದರು ಎನ್ನಲಾಗಿದೆ. ಆದರೂ ಸಹ, ಸಹನೆ…
ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅದು ಬೇಗನೆ ಸಾಯುತ್ತದೆ ಎಂದು ಹಲವರ ದೂರು. ಹಾಗಾದರೆ ತುಳಸಿ ಗಿಡವನ್ನು ಹೇಗೆ ಕಾಳಜಿ ವಹಿಸಬೇಕು? ಬನ್ನಿ ತಿಳಿಯೋಣ. ಬಿಸಿಲಿನ ಸ್ಥಳವನ್ನು ಆರಿಸಿ – ತುಳಸಿ ಗಿಡವನ್ನು ನೆಡುವಾಗ, ನಿಮ್ಮ ಬಾಲ್ಕನಿಯಲ್ಲಿ ಅಥವಾ ಮನೆಯ ಉದ್ಯಾನದಲ್ಲಿ ಬಿಸಿಲಿನ ಸ್ಥಳವನ್ನು ಆಯ್ಕೆ ಮಾಡಿ. ಏಕೆಂದರೆ ಅದು ಸಂಪೂರ್ಣ ಸೂರ್ಯನ ಬೆಳಕಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಏಕೆಂದರೆ ಇದು ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ನೀರು ಯಾವಾಗ ಹಾಕಬೇಕು? – ತುಳಸಿ ಸಸ್ಯವು ತೇವಾಂಶವುಳ್ಳ ಮಣ್ಣನ್ನು ಬೆಳೆಯಲು ಇಷ್ಟಪಡುತ್ತದೆ. ಆದರೆ ಅದಕ್ಕೆ ಹೆಚ್ಚು ನೀರನ್ನು ಸೇರಿಸಬೇಡಿ. ಏಕೆಂದರೆ ಇದು ಸುಲಭವಾಗಿ ಬೇರುಗಳು ಮತ್ತು ಕಾಂಡವನ್ನು ಕೊಳೆಯಲು ಕಾರಣವಾಗಬಹುದು. ಮೇಲಿನ ಮಣ್ಣು ಸ್ಪರ್ಶಕ್ಕೆ ಒಣಗಿದಾಗ ಸಸ್ಯಕ್ಕೆ ನೀರು ಹಾಕಿ ಮತ್ತು ಬಿಸಿಲಿನ ಸ್ಥಳದಲ್ಲಿದ್ದರೆ, ಪ್ರತಿದಿನ ನೀರು ಹಾಕಿ. ಎಲೆಗಳನ್ನು ಕೀಳುವುದು- ತುಳಸಿ ಎಲೆಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಜನರು ಅವುಗಳನ್ನು ಕೀಳಲು ಇಷ್ಟಪಡುವುದಿಲ್ಲ,…
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರಿದೆ. ದಿನದಿಂದ ದಿನಕ್ಕೆ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಈ ನಡುವೆ ನಾಮಪತ್ರಗಳ ಸ್ವೀಕೃತಿ ಕಾರ್ಯವು ಕೂಡ ಮುಗಿದು ಹೋಗಿದೆ. ಇದೀಗ ಅಚ್ಚರಿ ಎಂಬಂತೆ ಎಸ್ ಎಂ ಕೃಷ್ಣ ಹಾಗೂ ರಾಹುಲ್ ಗಾಂಧಿ ಅವರು ಬೆಂಗಳೂರಿಂದ ಕಣಕ್ಕಿಳಿದಿದ್ದಾರೆ ಎಂಬ ಸುದ್ದಿ ಬಂದಿದೆ. ಚುನಾವಣೆಯಲ್ಲಿ ಎದರಾಳಿಯನ್ನು ಮಣಿಸಲು ಹಲವು ತಂತ್ರಗಳು ನಡೆಯುತ್ತವೆ. ಅದರಲ್ಲಿ ಪ್ರಮುಖವಾದುದು ಎಂದರೆ ಎದುರಾಳಿಯ ಹೆಸರಿನ ಮತ್ತೊಬ್ಬ ಕ್ಯಾಂಡಿಡೇಟ್ ನನ್ನು ಅಕಾಡಕ್ಕೆ ಇಳಿಸುವುದು. ಹೌದು, ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಗ್ರಾಮಾಂತರದಿಂದ ಬಿಜೆಪಿ ಅಭ್ಯರ್ಥಿ ಸಿ ಎನ್ ಮಂಜುನಾಥ್ ವಿರುದ್ಧ ಅಪ್ಪ, ಅಮ್ಮ, ಊರು, ಜಿಲ್ಲೆ ಎಲ್ಲದೂ ಒಂದೇ ಆಗಿದ್ದ ಮತ್ತೊಬ್ಬ ಸಿಎನ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಅವರ ಅಣ್ಣನ ಹೆಸರಿನಂತೆ ಎಚ್ ಡಿ ರೇವಣ್ಣ ಎಂಬುವವರೂ ನಾಮಪತ್ರ ಸಲ್ಲಿಸಿದ್ದರು. ಇದೀಗ ಈ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಾಯಕರ ಹೆಸರು ಇರುವ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಗಮನ…
ಲೈಂಗಿಕ ಕ್ರಿಯೆ ಅಥವಾ ಶಾರೀರಿಕ ಸಂಬಂಧವು ದಾಂಪತ್ಯ ಜೀವನದ ಒಂದು ಪ್ರಮುಖ ಭಾಗ. ಸಂಸಾರ ಸುಖಮಯವಾಗಿರಲು ಅಥವಾ ಹಾಳಾಗಲೂ ಇದೂ ಒಂದು ಕಾರಣ. ಇಂದಿನ ಆಹಾರ ಕ್ರಮದಿಂದಾಗಿ ಅನೇಕರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆ ಆಗಿದೆ. ಇದು ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣ ಆಗಬಹುದು. ಆದರೆ ಅದರ ಬಗ್ಗೆ ಟೆನ್ಶನ್ ಬಿಡಿ. ಊಟ ಆದ ತಕ್ಷಣ ಇದೊಂದು ಇದನ್ನು ತಿಂದರೆ ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗೋದು ಪಕ್ಕಾ!! ಊಟವಾದ ನೀವು ಏಲಕ್ಕಿ ತಿಂದರೆ ಎಲ್ಲಾ ರೀತಿಯಿಂದಲೂ ಅದು ನಿಮಗೆ ಲಾಭದಾಯಕ. ಏಲಕ್ಕಿ ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಮಸಾಲೆಯಾಗಿದ್ದು, ಇದು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ನೀವು ಲೈಂಗಿಕವಾಗಿಯೂ ಹೆಚ್ಚು ಸಾಮರ್ಥ್ಯ ಗಳಿಸಬಹದು. ಊಟದ ನಂತರ ಏಲಕ್ಕಿ ತಿನ್ನುವುದ್ರಿಂದ ಮುಖ್ಯವಾಗಿ ಆಹಾರ ಜೀರ್ಣವಾಗುತ್ತದೆ. ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ರಾತ್ರಿ ಊಟದ ನಂತ್ರ ಏಲಕ್ಕಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆದು ನಿದ್ರೆ ಬರುತ್ತದೆ. ಜೊತೆಗೆ…
ಕ್ರಿಮಿನಲ್ ಗಳಿಗೆ ಎಚ್ಚರಿಕೆ ನೀಡುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜದ ಭದ್ರತೆಗೆ ಯಾರೇ ಧಕ್ಕೆ ತಂದರೂ ಅವರ ‘ರಾಮ ನಾಮ ಸತ್ಯ’ (ಅಂತ್ಯ ಸಂಸ್ಕಾರ) ನಿಶ್ಚಿತ ಎಂದು ಹೇಳಿದ್ದಾರೆ. ಅವರು ಅಲಿಗಢದಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಪರ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ. ಹೆಣ್ಣುಮಕ್ಕಳು ಮತ್ತು ವ್ಯಾಪಾರಸ್ಥರು ಆತಂಕವಿಲ್ಲದೆ ರಾತ್ರಿಯಲ್ಲಿ ಹೊರಗೆ ಹೋಗಬಹುದು ಎಂದು ಯಾರೂ ಯೋಚಿಸಿರಲಿಲ್ಲ. ಹೆಣ್ಣುಮಕ್ಕಳು ಮತ್ತು ಉದ್ಯಮಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡಲು ನಾವು ‘ರಾಮ್ ನಾಮ್ ಸತ್ಯ’ ಖಾತ್ರಿಪಡಿಸುತ್ತೇವೆ. ನಾವು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾ ನಮ್ಮಜೀವನವನ್ನು ನಡೆಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ. ಆದರೆ ಯಾರಾದರೂ ಸಮಾಜದ ಭದ್ರತೆಗೆ ಧಕ್ಕೆ ತಂದರೆ ‘ರಾಮ ನಾಮ ಸತ್ಯ’ ಕೂಡ ನಿಶ್ಚಿತ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 10 ವರ್ಷಗಳ ಹಿಂದೆ ಕಂಡ ಕನಸು ಈಗ ನನಸಾಗುತ್ತಿದೆ, ಮತ್ತು ಅದು ನಿಮ್ಮ ಮತದ ಮೌಲ್ಯದಿಂದ ನಡೆಯುತ್ತಿದೆ, ತಪ್ಪು ಮತವು ದೇಶವನ್ನು…
ಕಳೆದ 50 ವರ್ಷಗಳಲ್ಲೇ ಅತ್ಯಂತ ಸುದೀರ್ಘವಾದ ಸಂಪೂರ್ಣ ಸೂರ್ಯಗ್ರಹಣ ಇಂದು ಸಂಭವಿಸಿದೆ.ಅಮೆರಿಕ, ಕೆನಡಾ, ಮೆಕ್ಸಿಕೋ ಸೇರಿದಂತೆ ಉತ್ತರ ಅಮೆರಿಕಾದ ದೇಶಗಳಲ್ಲಿ ಗೋಚರಿಸುವ ಗ್ರಹಣ ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಗೋಚರಿಸುವುದಿಲ್ಲ. ಭಾರತೀಯ ಕಾಲಮಾನ ರಾತ್ರಿ 9.12ಕ್ಕೆ ಗ್ರಹಣ ಆರಂಭವಾಗಲಿದ್ದು, ನಾಳೆ ಬೆಳಗಿನ ಜಾವ 2.22ರವರೆಗೆ ಇರಲಿದೆ. ಒಟ್ಟು ಗ್ರಹಣದ ಅವಧಿ 4 ನಿಮಿಷ 27 ಸೆಕೆಂಡುಗಳು ಇರುತ್ತದೆ. ಸಂಪೂರ್ಣ ಗ್ರಹಣದ ಅವಧಿ 1 ನಿಮಿಷ 27 ಸೆಕೆಂಡುಗಳು. ನಾಸಾ ಸೇರಿದಂತೆ ಏಜೆನ್ಸಿಗಳು ಗ್ರಹಣವನ್ನು ನೇರ ಪ್ರಸಾರ ಮಾಡುತ್ತಿವೆ. ಚಂದ್ರನು ಸೂರ್ಯನನ್ನು ಮರೆಮಾಚುವ ಹಗಲಿನಲ್ಲಿಯೂ ಕತ್ತಲೆಯ ಅನುಭವವಾಗುತ್ತದೆ. ಸಂಪೂರ್ಣ ಸೂರ್ಯಗ್ರಹಣವನ್ನು NASA+, NASA TV ಮತ್ತು ಏಜೆನ್ಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಲಾಗುತ್ತದೆ. U.S. ಬಾಹ್ಯಾಕಾಶ ಸಂಸ್ಥೆಯು ತನ್ನ ಯೂಟ್ಯೂಬ್ ಚಾನೆಲ್ ಮತ್ತು ನಾಸಾ ಟೆಲಿವಿಷನ್ ನ ಮಾಧ್ಯಮ ಚಾನೆಲ್ ನಲ್ಲಿ ಗ್ರಹಣದ ದೂರದರ್ಶಕ ತುಣುಕನ್ನು ಒದಗಿಸುತ್ತದೆ. ಸ್ಟ್ರೀಮಿಂಗ್ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ನಿರಂತರವಾಗಿ ಮೂರು ಗಂಟೆಗಳ…
ನಟಿ ಹರಿಪ್ರಿಯಾ ಹಲವು ಸಿನಿಮಾಗಳನ್ನು ನಟಿಸಿ ಖ್ಯಾತಿ ಪಡೆದಿದ್ದಾರೆ. 2020ರ ನಂತರ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಇದೆಲ್ಲದರ ನಡುವೆ ಅವರು ಹೊಸ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಖಾಸಗಿ ವಾಹಿನಿಯೊಂದು ಹಂಚಿಕೊಂಡಿರುವ ಪ್ರೊಮೋದಲ್ಲಿ ನಟಿ ಕಾಣಿಸಿಕೊಂಡಿದ್ದು, ಭಾರೀ ಕುತೂಹಲ ಮೂಡಿಸಿದೆ. ‘ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಶೀಘ್ರದಲ್ಲಿ!’ ಎಂಬ ಕ್ಯಾಪ್ಷನ್ ನೊಂದಿಗೆ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಈ ಪ್ರೊಮೋದಲ್ಲಿ ನಟಿ ಹರಿಪ್ರಿಯಾ ಅವರು ಅಡ್ವೊಕೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಅಭಿಮಾನಿಗಳು ‘ನಮ್ಮ ಹರಿಪ್ರಿಯಾ ಸೀರಿಯಲ್ ನಲ್ಲಿ ನಟಿಸ್ತಾರಾ ಎಂದ ಅಚ್ಚರಿ ವ್ಯಕ್ತವಾಗಿದೆ. ಪ್ರೊಮೋ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಇದು ಧಾರಾವಾಹಿಯೋ ಅಥವಾ ರಿಯಾಟಿಲಿ ಶೋಗೆ ಸಂಬಂಧಿಸಿದ ಪ್ರೋಮೋ ಆಗಿರಬಹುದಾ ಎಂಬ ಅನುಮಾನ ಕೂಡ ಇದೆ. ಒಂದು ವೇಳೆ ಸೀರಿಯಲ್ ಆಗಿದ್ದರೆ, ಅದರಲ್ಲಿ…