Subscribe to Updates
Get the latest creative news from FooBar about art, design and business.
- ಇ–ಪೌತಿ ಖಾತಾ ಆಂದೋಲನ–2 : ರೈತರಿಂದ ಅರ್ಜಿಗಳ ಸ್ವೀಕಾರ — ಬಾಕಿ ಆರ್ ಆರ್ ಟಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
- ನೀಟ್ ಮರು ಪರೀಕ್ಷೆ ; ಕಟ್ಟುನಿಟ್ಟಿನ ಸಿದ್ಧತೆಗೆ ಎಡಿಸಿ ಸೂಚನೆ
- ಕೆಪಿಎಸ್ ಶಾಲೆಗೆ ಕುಂಕಮನಹಳ್ಳಿ ಶಾಲೆಯನ್ನು ವಿಲೀನಗೊಳಿಸದಂತೆ ಆಗ್ರಹ
- ಜೂನ್ 19ರಂದು ತುಮಕೂರಿನಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ
- ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
- ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
- ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
Author: admin
ಈ ಪ್ರಶ್ನೆಯೂ ನನ್ನದೇ, ಉತ್ತರ ಹುಡುಕುವ ಪ್ರಯತ್ನವೂ ನನ್ನದೇ; ನಮ್ಮ ಭೂಮಿ ಎನ್ನುವುದು ಅಸಂಖ್ಯಾತ ಜೀವಿಗಳು ವಾಸ ಮಾಡುತ್ತಿರುವ ಒಂದು ತಾಣ. ಇಲ್ಲಿ ಮನುಷ್ಯನಾಗಿರಲಿ ಅಥವಾ ಯಾವುದೇ ಜೀವಿಯಾಗಿರಲಿ, ಸಹಜವಾಗಿ ಗುಣ ಅಥವಾ ಸ್ವಭಾವ ಎನ್ನುವುದು ಸಮಯ, ಪರಿಸ್ಥಿತಿ ಅಥವಾ ಸಂದರ್ಭಗಳು ಆ ಜೀವಿಗೆ ಕಲಿಸುವ ಪಾಠವಾಗಿರಬಹುದು. ಉದಾಹರಣೆಗೆ ಹಸಿವು ಎಂಬುದು ಯಾವ ಜೀವಿಗೆ ತಾನೆ ಇರುವುದಿಲ್ಲ, ಒಂದು ಮಾಂಸಾಹಾರಿ ಜೀವಿ ಅದಕ್ಕೆ ಹೊಟ್ಟೆ ಹಸಿವಾದಾಗ ಮತ್ತೊಂದು ಸಸ್ಯಾಹಾರಿ ಜೀವಿಯನ್ನು ಮುಲಾಜಿಲ್ಲದೆ ಬೇಟೆಯಾಡಿ ತಿನ್ನುತ್ತದೆ. ಅದಕ್ಕೆ ತನ್ನ ಹಸಿಯುತ್ತಿರುವ ಹೊಟ್ಟೆಯನ್ನು ತುಂಬಿಸುವ ಅಗತ್ಯವಿದೆಯೇ ಹೊರತು, ತಾನು ಬೇಟೆಯಾಡಲಿರುವ ಜೀವಿಯೂ ಕೂಡ ನನ್ನ ಹಾಗೆ ಒಂದು ಜೀವಿ ಅದಕ್ಕೂ ಬದುಕುವ ಹಕ್ಕಿದೆ ಎಂದು ಯೋಚಿಸುವುದೇ ಇಲ್ಲ ಅಥವಾ ಯೋಚಿಸುವಷ್ಟು ಅದರ ಮೆದುಳು ವಿಕಸನ ಹೊಂದಿಲ್ಲ. ಈ ಹೇಳಿಕೆ ಮಾಂಸಾಹಾರ ಜೀವಿಯ ಗುಣ ಅಥವಾ ಸ್ವಭಾವ ಸೂಚಿಸುವುದಿಲ್ಲ, ಬದಲಿಗೆ ಅದರ ಹೊಟ್ಟೆ ಹಸಿಯುವ ಸಮಯದಲ್ಲಿ, ತನ್ನ ಹೊಟ್ಟೆ ತುಂಬಿಸುವ ಸಲುವಾಗಿ ಅಂದರೆ, ತಾನು ಇರುವ…
ಸಂಕ್ರಾಂತಿ ಹಬ್ಬವು ಕರ್ನಾಟಕದ ಜನಜೀವನದೊಂದಿಗೆ ಅವಿಭಾಜ್ಯವಾಗಿ ಬೆಸೆದುಕೊಂಡಿರುವ ಒಂದು ಮಹತ್ವದ ಹಬ್ಬ. ಇದು ಕೇವಲ ಋತುಮಾನಗಳ ಬದಲಾವಣೆಯ ಸೂಚಕವಲ್ಲ, ಬದಲಾಗಿ ಶ್ರಮ, ಸಹನೆ ಮತ್ತು ಪ್ರಕೃತಿಯೊಂದಿಗೆ ಮನುಷ್ಯನ ನಂಟನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ಕೃಷಿ ಪ್ರಧಾನ ರಾಜ್ಯವಾಗಿರುವ ಕರ್ನಾಟಕದಲ್ಲಿ ಸಂಕ್ರಾಂತಿ ರೈತರ ಬದುಕಿನಲ್ಲೊಂದು ಹೊಸ ಆರಂಭದ ಸಂಕೇತವಾಗಿದ್ದು, ಬೆಳೆದ ಬೆಳೆಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಹೌದು. ಹಬ್ಬಗಳು ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುವ ಶಕ್ತಿ ಹೊಂದಿವೆ. ಸಂಕ್ರಾಂತಿ ಹಬ್ಬದಂದು ಜಾತಿ–ಮತ–ಭಾಷೆ ಎನ್ನದೆ ಎಲ್ಲರೂ ಒಂದೇ ಮನೋಭಾವದಲ್ಲಿ ಸಂಭ್ರಮಿಸುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಎಳ್ಳು–ಬೆಲ್ಲ ಹಂಚಿಕೊಳ್ಳುವ ಮೂಲಕ ಸೌಹಾರ್ದತೆ, ಸಿಹಿ ಮಾತು ಮತ್ತು ಸಹಬಾಳ್ವೆಯ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಇಂದಿನ ವೇಗದ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ, ಸಂಕ್ರಾಂತಿಯಂತಹ ಹಬ್ಬಗಳು ಸಮಾಜವನ್ನು ಮತ್ತೆ ಮೂಲ ಮೌಲ್ಯಗಳತ್ತ ಕರೆತರುತ್ತವೆ. ಕಾರ್ಮಿಕರು, ರೈತರು, ಉದ್ಯೋಗಿಗಳು ಸೇರಿದಂತೆ ಎಲ್ಲ ವರ್ಗದ ಜನರ ಶ್ರಮವೇ ಸಮಾಜದ ಪ್ರಗತಿಗೆ ಮೂಲವೆಂಬ ಅರಿವು ಈ ಹಬ್ಬದ ಮೂಲಕ ಮತ್ತಷ್ಟು ಗಟ್ಟಿಯಾಗುತ್ತದೆ. ಗೊಲನ…
ಹೊಸ ವರ್ಷ ಆರಂಭದಲ್ಲಿ ಬರುವ ಮೊದಲ ಹಬ್ಬ ಸಂಕ್ರಾಂತಿ. ಮಕರ ಸಂಕ್ರಾಂತಿಯನ್ನು ಉತ್ಸವ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಇದರ ಸಂಭ್ರಮ ಹೆಚ್ಚು ತಮ್ಮದೇ ಆದ ರೀತಿಯಲ್ಲಿ. ಪದ್ಧತಿಯಲ್ಲಿ ನಡೆಯುವ ಹಬ್ಬದ ಸಿದ್ಧತೆಗಳು ಆರಂಭವಾಗುತ್ತದೆ. ಅಕ್ಕ ಪಕ್ಕದ ಮನೆಯ ಹೆಂಗಸರು ಒಬ್ಬರನ್ನೊಬ್ಬರು ಕೇಳುತ್ತಾ… ಹಬ್ಬಕ್ಕೆ ಸಿದ್ಧವಾಗುತ್ತಾರೆ ಎಳ್ಳು ಬೆಲ್ಲಕ್ಕೆ ಬೇಕೆಂದು ಕಡಲೆಕಾಯಿ ಸುಲಿಯೋದು, ಕೊಬ್ಬರಿ ಕಾಯಿ ಸಣ್ಣದಾಗಿ ಹಚ್ಚೋದು ಸಕ್ಕರೆ ಅಚ್ಚುಗಳನ್ನು ಮಾಡುವುದು ಬಿಳಿ ಎಳ್ಳನ್ನು ಹುರಿದು ಅದಕ್ಕೆ ಕಡಲೇ ಬೀಜ ಕೊಬ್ಬರಿ ಸಕ್ಕರೆ ಅಚ್ಚುಗಳನ್ನು ಸೇರಿಸಿ ಪ್ಯಾಕೇಟ್ ಮಾಡುವುದು. ಹಬ್ಬದ ದಿನ ಬೆಳಿಗ್ಗೆ ಎದ್ದು, ಮನೆಯಂಗಳದಲ್ಲಿ ಪೊಂಗಲ್ ಉಕ್ಕುತ್ತಿರುವ ರಂಗೋಲಿ ಮತ್ತು ಕಬ್ಬುಗಳ ಚಿತ್ರಗಳ ರಂಗೋಲಿ ಬಿಡಿಸಿ. ಬಣ್ಣ ಮತ್ತು ಹೂಗಳಿಂದ ರಂಗೋಲಿಗೆ ಅಲಂಕಾರ ಮಾಡುತ್ತಾರೆ. ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಮಾವಿನ ತಳಿರು ತೋರಣಗಳು ಮತ್ತು ಕಬ್ಬು ಹೂವುಗಳಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಪೂಜೆ ಪುನಸ್ಕಾರ ಮುಗಿಸಿ ಊಟ ಮಾಡುವ ಹೊತ್ತಿಗೆ ಮಧ್ಯಾಹ್ನ ಆಗುತ್ತದೆ. ಸಂಜೆ ವೇಳೆಗೆ…
ತುಮಕೂರು: ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು. ಮೂಲತಃ ಕ್ರೀಡಾಪಟುವಾದ ತಮ್ಮ ಹೆಸರನ್ನು ಇಡುವುದಕ್ಕೆ ವಿರೋಧಿಸಿ ಪ್ರತಿಭಟಿಸಿದ ವಿರೋಧ ಪಕ್ಷದ ಬಿಜೆಪಿ ವಿರುದ್ಧ ವೇದಿಕೆಯಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಕೀರ್ಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, “ನಾನು ಮೂಲತಃ ಕ್ರೀಡಾಪಟು. ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷನಾಗಿ, ವಿದ್ಯಾರ್ಥಿಯಾಗಿದ್ದಾಗ ಅಥ್ಲೆಟಿಕ್ಸ್ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದೇನೆ. ಜಿಲ್ಲೆಯ ಶೈಕ್ಷಣಿಕ ಹಾಗೂ ಕ್ರೀಡೆ ಸೇರಿದಂತೆ ಅಭಿವೃದ್ಧಿಗೆ ನನ್ನ ಕೊಡುಗೆಯಿದೆ.” ಒಳಾಂಗಣ ಕ್ರೀಡಾಂಗಣಕ್ಕೆ ನನ್ನ ಹೆಸರು ಇಡಬೇಕೆಂದು ನಾನು ಯಾರಿಗೂ ಹೇಳಲಿಲ್ಲ. ಜಿಲ್ಲೆಯ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳೇ ಆಸಕ್ತಿಯಿಂದ ಈ ಸಂಕೀರ್ಣಕ್ಕೆ ನನ್ನ ಹೆಸರಿಡಬೇಕೆಂದು ಮನವಿ ಸಲ್ಲಿಸಿದ್ದರು. ಅದಕ್ಕೆ ಇಲಾಖೆಯ ಸಮ್ಮತಿಯೊಂದಿಗೆ ನನ್ನ ಹೆಸರಿಟ್ಟಿದ್ದಾರೆ. ಮಹಾತ್ಮ ಗಾಂಧಿ ಹೆಸರನ್ನು ಬದಲಿಸಿ ನನ್ನ ಹೆಸರು ಇಡಲಾಗಿದೆ ಎಂಬ ಬಿಜೆಪಿ ಅವರ ಪ್ರಚಾರ ಅಪ್ಪಟ ಸುಳ್ಳು ಮತ್ತು ಇದು ಕೇವಲ ರಾಜಕೀಯ ಅಪಪ್ರಚಾರ ಎಂದು ಅವರು ಹೇಳಿದರು. ಪರಮೇಶ್ವರ್…
ಶಬರಿಮಲೆ: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಗೋಚರಿಸಲಿರುವ ದಿವ್ಯ ‘ಮಕರ ಜ್ಯೋತಿ’ಯನ್ನು ಕಣ್ತುಂಬಿಕೊಳ್ಳಲು ದೇಶದಾದ್ಯಂತದ ಲಕ್ಷಾಂತರ ಭಕ್ತರು ಶಬರಿಮಲೆಯಲ್ಲಿ ಜಮಾಯಿಸಿದ್ದಾರೆ. ಅಯ್ಯಪ್ಪನ ದರ್ಶನಕ್ಕಾಗಿ ಈಗಾಗಲೇ ಶಬರಿಮಲೆ ಭಕ್ತರ ಸಾಗರದಿಂದ ತುಂಬಿ ತುಳುಕುತ್ತಿದ್ದು, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತಿವೆ. ಜ್ಯೋತಿ ದರ್ಶನ: ಸಂಜೆ ಪೊನ್ನಂಬಲಮೇಡುವಿನಲ್ಲಿ ಮೂರು ಬಾರಿ ಜ್ಯೋತಿ ರೂಪದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ನೀಡಲಿದ್ದು, ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಹೆಚ್ಚುವರಿ ಭದ್ರತೆ: ಭಕ್ತರ ಸಂಖ್ಯೆ ಅಪಾರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇರಳ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಭಕ್ತರ ಅನುಕೂಲಕ್ಕಾಗಿ ವಿಶೇಷವಾಗಿ 1,000 ಕೆಎಸ್ ಆರ್ ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಭಕ್ತರ ಆಕ್ರೋಶ: ಭಕ್ತರ ಸಂಭ್ರಮದ ನಡುವೆಯೇ ಕೇರಳ ಪೊಲೀಸರ ನಡೆಗೆ ಕರ್ನಾಟಕದ ಮಾಲಾಧಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಖಾಸಗಿ ವಾಹನಗಳನ್ನು ‘ಎರೆಮಲೆ’ಯಲ್ಲಿಯೇ ತಡೆಹಿಡಿದು, ಅಲ್ಲಿಂದ ಕೇರಳ ಸರ್ಕಾರದ ಬಸ್ಗಳಲ್ಲಿ…
ತುಮಕೂರು: ಜಿಲ್ಲೆಯಲ್ಲಿ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಇತರೆ ಜನಾಂಗದವರು ಸುಳ್ಳು ದಾಖಲಾತಿಗಳನ್ನು ನೀಡಿ, ಅಕ್ರಮವಾಗಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿದ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ಹಂದಿಜೋಗಿಸ್ ಜನಾಂಗಕ್ಕೆ ಸೇರಬೇಕಾದ ಸರ್ಕಾರದ ಸೌಲಭ್ಯಗಳು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಇದರಿಂದ ನಿಜವಾದ ಹಂದಿಜೋಗಿಸ್ ಜನಾಂಗದವರಿಗೆ ತೊಂದರೆಯಾಗುತ್ತಿದೆ ಎಂದು ತುಮಕೂರು ಜಿಲ್ಲಾ ಹಂದಿಜೋಗಿಸ್ ಸಂಘ ಜಂಟಿ ನಿರ್ದೇಶಕರು ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ಮನವಿ ಸಲ್ಲಿಸಿದ್ದಾರೆ. ನಿಜವಾದ ಹಂದಿಜೋಗಿಸ್ ಜನಾಂಗದವರ ಅನಕ್ಷರತೆ, ಬಡತನ ಮತ್ತು ತಮ್ಮ ಜನಾಂಗದ ಬಗ್ಗೆ ಧ್ವನಿ ಎತ್ತದ ನಾಯಕರಿಲ್ಲದ ಕಾರಣ ಕಳೆದ 08 ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಇತರೆ ಜನಾಂಗದವರು ಅಂದರೆ ಅತಿ ಹೆಚ್ಚಾಗಿ ಹೇಳವ ಜನಾಂಗದವರು ಹಂದಿ ಸಾಕುವ ಮತ್ತು ಹಂದಿ ಮಾರಾಟ ಮಾಡುವ ಹೆಸರಿನಲ್ಲಿ ನಾವೇ ಹಂದಿಜೋಗಿಸ್ ಗಳೆಂದು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ನಿಜವಾದ ಹಂದಿಜೋಗಿಸ್ ಜನಾಂಗದವರ ಮೇಲೆ ದೌರ್ಜನ್ಯಗಳನ್ನು ಮಾಡುತ್ತಿದ್ದು ನಿಜವಾದ ಅಲೆಮಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.…
ಕೊರಟಗೆರೆ : ಸತತ 16 ವರ್ಷಗಳ ನನ್ನ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ, ನನ್ನ ಸಂಘ ಒಂದು ಕುಟುಂಬದಂತೆ ನಾನು ಮುನ್ನಡೆಸಿಕೊಂಡು ಬಂದಿದ್ದೇನೆ, ಅಷ್ಟು ವರ್ಷಗಳ ಕಾಲ ನನ್ನ ಜೊತೆಗೆ ಆತ್ಮೀಯವಾಗಿದ್ದ ಎಲ್ಲಾ ನನ್ನ ಹಿರಿಯ ಹಾಗೂ ಕಿರಿಯ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತಾ,ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಬೆಳೆವಣಿಗೆ ಅತ್ಯಂತ ಪ್ರಾಮುಖ್ಯತೆ ವಹಿಸುತ್ತವೆ, ನಮ್ಮ ಸಂಘ ಹೀಗೆ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ಮಾಜಿ ಅಧ್ಯಕ್ಷ, ಜಿಲ್ಲಾ ನಿರ್ದೇಶಕ ಕೆ.ವಿ ಪುರುಷೋತ್ತಮ್ ಆಶಿಸಿದರು. ಕೊರಟಗೆರೆ ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಎನ್. ಮೂರ್ತಿ(ವಿ.ಕೆ.ಮೂರ್ತಿ)ಯವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಪತ್ರಿಕಾರಂಗ ಈ ಸಮಾಜದಲ್ಲಿ ತನ್ನದೇ ಆದ ಗೌರವವನ್ನು ಉಳಿಸಿಕೊಂಡು ಬಂದಿದೆ ಹಾಗೇಯೆ ಸಂಘದ ಯುವ ಸಮೂಹ ತಾಳ್ಮೆಯಿಂದ ಎಚ್ಚರವಹಿಸಿ ಕೆಲಸ ಮಾಡುವಂತಹ ಕೆಲಸವಾಗಬೇಕು, ಸದಾ ನಿಮ್ಮೊಟ್ಟಿ ಸಲಹೆ ಸೂಚನೆಗಳನ್ನು ನೀಡುತ್ತಾ ನಮ್ಮ ಸಂಘವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ನಡೆಸೋಣ, ನೂತನವಾಗಿ ಅಧ್ಯಕ್ಷ ಸ್ಥಾನವಹಿಸುವವರ ಜೊತೆ ಎಲ್ಲಾರೂ ಹೊಂದಾಣಿಕೆಯಿಂದ ಸಾಗೋಣ…
ತಿಪಟೂರು: ಟ್ಯೂಷನ್ ಗೆ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯವಾಗಿದ್ದು, ಕೊನೆಗೂ ನಾಪತ್ತೆಯಾಗಿದ್ದ ಬಾಲಕ ತಾಯಿ ಮಡಿಲು ಸೇರಿದ್ದಾನೆ. ಮಾಹಿತಿಗಳ ಪ್ರಕಾರ ಮನೆಯಲ್ಲಿ ಬೈದರು ಎಂದು ನೊಂದುಕೊಂಡಿದ್ದ ಬಾಲಕ ಟ್ಯೂಷನ್ ಗೆಂದು ಮನೆಯಿಂದ ಹೊರಟ ನಂತರ ತನ್ನ ಸೈಕಲ್ ನ್ನು ಬೇರೆ ಸ್ಥಳದಲ್ಲಿ ನಿಲ್ಲಿಸಿ, ರೈಲಿನ ಮೂಲಕ ಬೆಂಗಳೂರು ರೈಲು ಹತ್ತಿದ್ದಾನೆ. ನಂತರ ಆತನಿಗೆ ಅಲ್ಲಿ ಏನೂ ಗೊತ್ತಾಗದ ಕಾರಣ, ವಾಪಸ್ ಬಂದಿದ್ದು ತಾಯಿಯ ಮಡಿಲು ಸೇರಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೂ ಬಾಲಕ ನಾಪತ್ತೆಯಾದ ಬೆನ್ನಲ್ಲೇ ನಮ್ಮ ತುಮಕೂರು ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಬಾಲಕನನ್ನು ಹುಡುಕುವ ಪ್ರಯತ್ನಕ್ಕೆ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ. ಬಾಲಕನ ನಾಪತ್ತೆಯಿಂದ ಕಂಗಾಲಾಗಿದ್ದ ಪೋಷಕರು, ಇದೀಗ ಬಾಲಕ ಪತ್ತೆಯಾದ ಬೆನ್ನಲ್ಲೇ ನಿರಾಳರಾಗಿದ್ದಾರೆ. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಅಪೊಲೋ ಫಾರ್ಮಸಿ, ಇಂಡ್ಆಟೋ ಫಿಲ್ಟರ್ಸ್, ಪಿಟ್ಟಿ ಇನ್ಸ್ಡಸ್ಟೀಸ್ ಪ್ರೈ. ಲಿ. ವಾಹಿನಿ ಪೈಪ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಂಬಂಧ ಜನವರಿ 16ರಂದು ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಯಾವುದೇ ಪದವಿ, ಐ.ಟಿ.ಐ, ಡಿಪ್ಲೊಮಾ(ಮೆಕ್ಯಾನಿಕಲ್), ಡಿ.ಫಾರ್ಮ ಹಾಗೂ ಬಿ.ಫಾರ್ಮ, ಬಿ.ಇ.(ಮೆಕ್ಯಾನಿಕಲ್) ಹಾಗೂ ಬಿ.ಇ(ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಕನಿಷ್ಠ 5 ವರ್ಷ ಅನುಭವ) ಪಾಸಾದ ಅಭ್ಯರ್ಥಿಗಳು ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಜನವರಿ 16ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಡಿ.ಡಿ.ಪಿ.ಐ ಬಸ್ ನಿಲ್ದಾಣ, ವಾಸನ್ ಕಣ್ಣಿನ ಆಸ್ಪತ್ರೆ ಹತ್ತಿರ, ಮೂಲೆಮನೆ ಹೋಟೆಲ್ ಪಕ್ಕ, ಸೋಮೇಶ್ವರಪುರಂ, 14ನೇ ಕ್ರಾಸ್, ತುಮಕೂರು-572102 ಇಲ್ಲಿ ತಮ್ಮ ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816-2278488ನ್ನು ಸಂಪರ್ಕಿಸಬೇಕೆಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…
ತುಮಕೂರು: ‘ತ್ರಿವಿಧ ದಾಸೋಹಿ’, ‘ಕರ್ನಾಟಕ ರತ್ನ’, ಸಿದ್ದಗಂಗಾ ಮಠದ ಲಿಂಗೈಕ್ಯ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 7ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಜನವರಿ 21ರಂದು ಬೆಳಿಗ್ಗೆ 11 ಗಂಟೆಗೆ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿದೆ. ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ದಿವ್ಯ ನೇತೃತ್ವದಲ್ಲಿ ಈ ಸಮಾರಂಭ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲದ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ ಸಿದ್ದಗಂಗಾ ಮಠದ ಉತ್ತರಾಧಿಕಾರಿಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಗಣ್ಯರ ಉಪಸ್ಥಿತಿ: ಪುಣ್ಯ ಸ್ಮರಣೋತ್ಸವವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಉದ್ಘಾಟಿಸಲಿದ್ದು, ರಾಜ್ಯಪಾಲರಾದ ಥಾವರ್ಚಂದ್ ಗೆಹಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಭಾಗವಹಿಸಲಿದ್ದಾರೆ. ಸಿದ್ಧತಾ ಸಭೆ: ಕಾರ್ಯಕ್ರಮದ ಯಶಸ್ಸಿಗಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಮಠದ ಆಡಳಿತ…