Subscribe to Updates
Get the latest creative news from FooBar about art, design and business.
- “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ
- ಕುಣಿಗಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು ಉರುಳಿ ತಾಯಿ–ಮಗಳು ಸ್ಥಳದಲ್ಲೇ ಸಾವು
- ಗುಜರಾತ್ ಮಾದರಿ ನಮಗೆ ಬೇಡ, ಕರ್ನಾಟಕ ಇಡೀ ದೇಶಕ್ಕೆ ಮಾದರಿ: ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗು
- ಸಾಧನಾ ಸಮಾವೇಶ: ಕೊರಟಗೆರೆಯ 13,353 ಫಲಾನುಭವಿಗಳಿಗೆ ಸೌಲಭ್ಯ
- ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
- ಪಾರ್ಟ್ಟೈಮ್ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ
- ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!
- ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ
Author: admin
ತುಮಕೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಹುಟ್ಟು ಹಬ್ಬವನ್ನು ಮಿಡಿಗೇಶಿ ಹೋಬಳಿ ನೇರಳೇಕೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಎನ್.ಶಿವಕುಮಾರ್ ಹಾಗೂ ಧನಂಜಯ ರವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪಿಡಿಒ ಎಂ ಎನ್ ಶಿವಕುಮಾರ್ ಹಾಗೂ ಧನಂಜಯ್ ರವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಸಾಧನೆಯ ಗುಣಗಾನ ಮಾಡಿದರು. ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದ್ರಾಕ್ಷಾಯಣಮ್ಮ, ಸದಸ್ಯರುಗಳಾದ ರಮೇಶ್, ಬಿಲ್ ಕಲೆಕ್ಟರ್ ಗೋವಿಂದರಾಜ್, ನಿವೃತ್ತ ಇಂಜಿನಿಯರ್ ಬಸವರಾಜ್, ಪತ್ರಿಕೆ ಬರಹಗಾರರಾದ ಎನ್ಎಸ್ ಈಶ್ವರ್ ಪ್ರಸಾದ್ ಹಾಗೂ ಅಂಬೇಡ್ಕರ್ , ಬ್ಯಾಂಕ್ ರಮೇಶ್ ಬಾಬು, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ಎನ್. ನಟರಾಜ್, ಮೌರ್ಯ ಎನ್ ಜಿ , ನಾಗರಾಜು ಆಟೋ ಕರಿಯಣ್ಣ, ಅಶ್ವತ್ ಕುಮಾರ್, ವಾಟರ್ ಮ್ಯಾನ್ ಗೋವಿಂದರಾಜು, ನಾಗರಾಜು ಇನ್ನು ಮುಂತಾದ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ತುಮಕೂರು: ಕೈಸೆಟ್ಸ್ ಅಟ್ ಬೀಬಲ್ ಡಾಟ್ ಕಾಮ್ ಎಂಬ ಮೇಲ್ ಐಡಿ ಇಂದ ಬೆಂಗಳೂರಿನ 15 ಶಾಲೆಗಳಲ್ಲಿ ಬಾಂಬನ್ನು ಇಡಲಾಗಿದೆ ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಕೊಂದು ಹಾಕುತ್ತೇವೆ ಎಂದು ಬಂದಿ̧ದೆ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಕೊರಟಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇ-ಮೇಲ್ ಬಂದಿರುವ ಮೂಲವನ್ನು ಪತ್ತೆಹಚ್ಚಲು ಈಗಾಗಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಸಕ್ರಿಯರಾಗಿದ್ದಾರೆ. ಅಲ್ಲದೆ 15 ಶಾಲೆಗಳಿಗೆ ತೆರಳಿ ಸ್ಪೋಟಕಗಳು ಇರುವ ಕುರಿತಂತೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಶಾಲೆಗಳಲ್ಲಿ ಬಾಂಬು ಇಲ್ಲದಿರುವ ಬಗ್ಗೆ ನಾನು ಕೂಡ ಬಯಸುತ್ತೇನೆ. ಆಕಸ್ಮಾತ್ ಇದ್ದರೆ ಅದನ್ನು ಯಾವ ರೀತಿ ನಿಷ್ಕ್ರಿಯಗೊಳಿಸಬೇಕು ಎಂಬ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಅವರು ಕೂಡ ಸಕ್ರಿಯರಾಗಿದ್ದಾರೆ. ಅಕಸ್ಮಾತ್ ರಾಜ್ಯದಲ್ಲಿ ಉಗ್ರ ಸಂಘಟನೆಗಳು ಚಟುವಟಿಕೆ ನಡೆಸುತ್ತಿವೆ ಎಂಬ ಬಗ್ಗೆ ಮಾಹಿತಿ ಇದ್ದರೆ ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿದೆ ಎಂದು…
ತುಮಕೂರು: ಮಣ್ಣು ಸಂರಕ್ಷಣೆ ಮತ್ತು ಸುಸ್ಥಿರ ಪರಿಸರಕ್ಕಾಗಿ ಹೋರಾಟ ಮಾಡಿದ ಊರ್ಡಿಗೆರೆಯ ಲಕ್ಷ್ಮೀಶ್ ಹಾಗೂ ಕದರನಹಳ್ಳಿ ಗೊಲ್ಲರಹಟ್ಟಿಯ ಭೈರಲಿಂಗಯ್ಯ ಅವರನ್ನು ಗುರುತಿಸಿ ‘ಇನಿಶಿಯೇಟಿವ್ ಫಾರ್ ಸಸ್ಟೇನಬಲ್ ಅಗ್ರಿಕಲ್ಚರ್ ಅಂಡ್ ಎನ್ವಿರಾನ್ಮೆಂಟ್ – ಚಾಂಪಿಯನ್ ಆಫ್ ಸಾಯಿಲ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಮೇಶ್ ನಾಯಕ್ ಎಲ್. ಅವರ ನೇತೃತ್ವದಲ್ಲಿ ಪ್ರಸಕ್ತ ವರ್ಷದಿಂದ ಆರಂಭಗೊಂಡ ಪ್ರಶಸ್ತಿ ಪ್ರದಾನವು ಕಾರ್ಯಕ್ರಮವು ಮುಂದೆ ಪ್ರತೀ ವರ್ಷವೂ ನಡೆಸಲು ತೀರ್ಮಾನಿಸಲಾಗಿದೆ. ಪ್ರಶಸ್ತಿಯು ಸ್ಮರಣಿಕೆ, 10 ಸಾವಿರ ರೂ ನಗದು ಒಳಗೊಂಡಿದೆ. ಶ್ರೀ ಸಿದ್ಧಗಂಗಾ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಶ್ರೀ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ಹೈಕೋರ್ಟ್ ಸರಕಾರಿ ವಕೀಲ ಹರೀಶ್ ಎ.ಎಸ್., ವಕೀಲ ಹಾಲೇಶ ಎ.ಎಸ್., ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಎ.ನಾರಾಯಣಸ್ವಾಮಿ, ಪ್ರಾಧ್ಯಾಪಕ ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.
ತೂಕವನ್ನು ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ವ್ಯಾಯಾಮವು ಪ್ರಮುಖವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಕೊಬ್ಬು ಕರಗಿಸುವ ಮುಖ್ಯ ಕೇಂದ್ರವೆಂದರೆ ಅಡುಗೆಮನೆ. ನೆನೆಸಿದ ಬಾದಾಮಿ ಮತ್ತು ಗೋಡಂಬಿಯಂತಹ ಬೀಜಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಪ್ರೋಟೀನ್ ದಾಲ್ ಬೆಳಗಿನ ಉಪಾಹಾರ, ತುಪ್ಪ, ಮೊಸರು, ರಾಗಿ ರೊಟ್ಟಿ, ದಾಲ್ಟಿನ್ನಿ ಚಹಾ, ಹಿಮಾಲಯನ್ ಉಪ್ಪು, ರಾತ್ರಿ 8 ಗಂಟೆಯ ಮೊದಲು ಊಟ, ರಾತ್ರಿ ಊಟದ ನಂತರ 20 ನಿಮಿಷಗಳ ಕಾಲ ನಡೆದರೆ ಸಾಕು ಕೊಬ್ಬನ್ನು ಸಲೀಸಾಗಿ ಕರಗಿಸಬಹುದು. ಕೆಮ್ಮು ಕಡಿಮೆ ಆಗ್ತಿಲ್ವ? ಹಾಗಿದ್ರೆ ಅಡುಗೆ ಮನೆಯಲ್ಲೇ ಇದೆ ಪರಿಹಾರ ಚಳಿಗಾಲದ ಸಂದರ್ಭದಲ್ಲಿ ಶೀತ ಮತ್ತು ಕೆಮ್ಮು ಸಾಕಷ್ಟು ಸಾಮಾನ್ಯವಾಗಿದೆ. ಕೆಮ್ಮು ಮತ್ತು ಶೀತದಿಂದ ಆರಾಮ ಪಡೆಯಲು ಅಡುಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಬಹುದು. ನೀರನ್ನು ಕುದಿಸಿದ ಮೇಲೆ ಅದಕ್ಕೆ ತಾಜಾ ಶುಂಠಿ ಮತ್ತು ಅದರ ಪುಡಿಯನ್ನು ಸೇರಿಸಿ ಕುಡಿಯಿರಿ ಕೆಮ್ಮು ಕಡಿಮೆ ಆಗುತ್ತೆ. ಮೊದಲು ನೀರನ್ನು ಕುದಿಸಿ ಮತ್ತು ಅದಕ್ಕೆ ಅರಿಶಿನ…
ಕನ್ನಡ ಇಂಡಸ್ಟ್ರಿ ನನಗೆ ಅನ್ನ ಕೊಟ್ಟಿದೆ, ಒಂದ್ ಹಿಟ್ ಆದ ಬಳಿಕ ಇಂಡಸ್ಟ್ರಿಯನ್ನು ಬಿಡಲಾರೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್ʼನ್ಯಾಷನಲ್ ಫಿಲ್ಡ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನೂ ಎಲ್ಲೂ ಹೋಗಲ್ಲ. ಬೇರೆ ಇಂಡಸ್ಟ್ರಿಗಳ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸುವ ಆಫರ್ ಗಳು ಬಂದರೂ ಅವುಗಳು ತಿರಸ್ಕರಿಸಿದ್ದೇನೆ ಎಂದರು. ಬೇರೆಯವರ ಹಾಗೆ ಒಂದು ಹಿಟ್ ಬಂದ ಕೂಡಲೇ ಚಿತ್ರರಂಗ ಬಿಟ್ಟು ಹೋಗುವಂತೆ ನಾನು ಮಾಡಲಾರೆ ಎಂದರು. ರಿಷಬ್ ಶೆಟ್ಟಿ ಈ ಮಾತನ್ನು ಯಾರಿಗೆ ಹೇಳಿದರು ಎಂದು ಈಗ ಚರ್ಚೆ ಶುರುವಾಗಿದೆ.
ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ನಟ ಧನ್ನೀರ್ ಅಭಿನಯದ “ಕೈವ” ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ದರ್ಶನ್, ಯಾರಾದರೂ ನಮ್ಮ ತಾಯಿ ವಿಷಯಕ್ಕೆ ಬಂದರೆ ಬಿಡ್ತೀವಾ ಇಲ್ಲ ತಾನೆ. ಹಾಗೆ ಕೂಡ ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೂ ಅಷ್ಟೇ. ಇದು ಪ್ರೀತಿಯೋ ಸ್ವಾರ್ಥನೋ ಮೊದಲು ಕನ್ನಡ ಚಿತ್ರಗಳನ್ನು ಪ್ರೀತಿಸಿ, ಅವುಗಳನ್ನು ಪ್ರೋತ್ಸಾಹ ಮಾಡಿ, ಇಲ್ಲದಿದ್ದರೆ ಪರಭಾಷಿಕರ ಹಾವಳಿ ಹೆಚ್ಚಾಗಿ ಬಿಡುತ್ತದೆ ಹುಷಾರು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಯುವ ನಟರಿಗೆ ಕಿವಿಮಾತು ಹೇಳಿದರು. ನಟ ಧನ್ನೀರ್ ಅಭಿನಯದ ‘ಕೈವ್’ ಚಿತ್ರದ ಟ್ರೈಲರ್ ಬಿಡುಗಡೆಗೆ ದರ್ಶನ್ ಬಂದಿದ್ದರು. ಈ ವೇಳೆ ಮಾತನಾಡಿ, ಅಭಿಷೇಕ್ ಅಂಬರೀಷ್, ಧನ್ನೀರ್ ಚಿಕ್ಕಣ್ಣ ಸೇರಿದಂತೆ ಬಹುತೇಕ ಸ್ನೇಹಿತರು, ನಟರ ಪೋನ್ ನಂಬರ್ ಎಲ್ಲರ ಬಳಿಯೂ ಇರುತ್ತೆ. ಯಾರೇ ಏನೇ ಅಂದರೂ ಹಿತ್ತಾಳೆ ಕಿವಿಯಾಗಬೇಡಿ. ಒಬ್ಬರಿಗೊಬ್ಬರು ಪೋನ್ಮಾಡಿಕೊಳ್ಳಿ, ಒಂದೇ ದಿನ ತಮ್ಮ ಚಿತ್ರ…
ಆದಿವಾಸಿಗಳಿಗಾಗಿ 24,104 ಕೋಟಿ ರೂಪಾಯಿಗಳ ಪ್ರಧಾನ ಮಂತ್ರಿ ಜಂಜಾಟಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಗೆ ಕೇಂದ್ರವು ತನ್ನ ಅನುಮೋದನೆಯ ಮುದ್ರೆಯನ್ನು ನೀಡಿದೆ. ಇದರಲ್ಲಿ ಕೇಂದ್ರ ಪಾಲು 15,336 ಕೋಟಿ ರೂ. ಹಾಗೂ ರಾಜ್ಯಗಳ ಪಾಲು 8,768 ಕೋಟಿ ರೂ. ಇರಲಿದೆ. ಈ ಯೋಜನೆಯಡಿ, 18 ರಾಜ್ಯಗಳಲ್ಲಿ ಅತ್ಯಂತ ಹಿಂದುಳಿದ ಬುಡಕಟ್ಟು ಗುಂಪುಗಳೆಂದು ಗುರುತಿಸಲಾದ 75 ಬುಡಕಟ್ಟುಗಳಿಗೆ ಸೇರಿದ 18.16 ಲಕ್ಷ ಜನರಿಗೆ ಮನೆ, ರಸ್ತೆ, ನಲ್ಲಿ ನೀರು, ಸಂಚಾರಿ ವೈದ್ಯಕೀಯ ಘಟಕಗಳು, ವೃತ್ತಿಪರ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.
ಬೆಂಗಳೂರಿನಲ್ಲಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಾಜ್ಯದಲ್ಲಿ ಸುಧಾರಿತ 108 ಆಂಬುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ಗಳಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ರಾಜ್ಯದಲ್ಲಿ ಹೊಸ ಆಂಬುಲೆನ್ಸ್ಗಳು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಉಚಿತ ಸೇವೆ ಲಭ್ಯವಾಗುವುದರ ಜೊತೆಗೆ ಹೊಸ ಆಂಬುಲೆನ್ಸ್ಗಳು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ. 108 ಅಂಬ್ಯುಲೆನ್ಸ್ ಸೇವೆಯನ್ನು ಬಲಪಡಿಸುವತ್ತ ಇದು ನಮ್ಮ ಮೊದಲ ಹೆಜ್ಜೆ ಎಂದು ಹೇಳಿದರು. ರಾಜ್ಯದಲ್ಲಿನ 262 ಅತ್ಯಾಧುನಿಕ ಆಂಬುಲೆನ್ಸ್ ವಿಶೇಷತೆ ಏನು ಎಂಬುದರ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟ್ರಾನ್ಸ್ ಪೋರ್ಟ್ ವೆಂಟಿಲೇಟರ್, ಡಿಫಿಬ್ರಿಲೇಟರ್ಗಳನ್ನು ಒಳಗೊಂಡ 105 ಸುಧಾರಿತ ಲೈಫ್ ಸಪೋರ್ಟ್…
ನರೇಂದ್ರ ಮೋದಿ ಅವರು ಬಂದ ಕಡೆಗಳಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದಿದ್ದ ಸಿಎಂ ಸಿದ್ಧರಾಮಯ್ಯರ ಹೇಳಿಕೆಗೆ ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇವರೇ ಸಮ್ಮಿಶ್ರ ಸರ್ಕಾರವೇ ಅಧಿಕಾರದಲ್ಲಿತ್ತು. ಲೋಕಸಭಾ ಚುನಾವಣೆ ಫಲಿತಾಂಶ ಏನು ಬಂದಿದೆ? ಎಂದು ಪ್ರಶ್ನಿಸಿದರು. ಈಗಲೂ ಅಷ್ಟೇ 2024 ರಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಆಗ ಫಲಿತಾಂಶ ನೋಡಲಿ ಎಂದು ಅಶ್ವತ್ಥನಾರಾಯಣ್ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂಗೆ ರಾಜ್ಯದಲ್ಲಿರುವ ಬರ ಪರಿಸ್ಥಿತಿ ನೆನಪಾಗಲಿಲ್ಲ. ಅವರ ಸಂಪುಟದಲ್ಲಿನ ಮಂತ್ರಿಗಳು ಮನೆ ನವೀಕರಣಕ್ಕೆ ಇಳಿದಿರುವುದು ಕಣ್ಣಿಗೆ ಬೀಳಲಿಲ್ಲ. ನಮ್ಮ ನಾಯಕ ನರೇಂದ್ರ ಮೋದಿ ಮಾತ್ರ ಕಣ್ಣಿಗೆ ಕಾಣುತ್ತಾರೆ ಎಂದು ಕಿಡಿಕಾರಿದ್ದಾರೆ.
ಮಕ್ಕಳ ಮಾರಾಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಆರೋಪಿಗಳು ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಹಾಲಕ್ಷ್ಮಿ, ನಕಲಿ ವೈದ್ಯ ಕೆವಿನ್, ಆರ್. ಟಿ. ನಗರದ ನಿವಾಸಿ ರಮ್ಯಾ, ತಮಿಳುನಾಡಿನ ಈರೋಡ್ ಕಣ್ಣನ್ ರಾಮಸ್ವಾಮಿ, ಆತನ ಸಹಚರರಾದ ಗೋಮತಿ, ಹೇಮಲತಾ, ರಾಧಾ, ಸುಹಾಸಿನಿ, ಶರಣ್ಯ, ಮುರುಗೇಶ್ವರಿ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಹಸುಗೂಸುಗಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 10 ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಪೈಕಿ ಮಹಾಲಕ್ಷ್ಮಿ ಎಂಬಾಕೆ ತರಕಾರಿ ಮಾರಾಟ ಮಾಡುತ್ತಲೇ ಮಕ್ಕಳ ಡೀಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಮಹಾಲಕ್ಷ್ಮಿ ತರಕಾರಿ ಮಾರುತ್ತಿದ್ದ ಈಕೆ ಹಲವರನ್ನು ಪರಿಚಯ ಮಾಡಿಕೊಂಡು ಯಾವುದಾದರೂ ಗ್ರಾಹಕರಿಗೆ ಮಕ್ಕಳಿಲ್ಲ ಎಂಬ ವಿಚಾರ ಗೊತ್ತಾದರೇ ಅವರ ಜೊತೆ ಇನ್ನೂ ಹೆಚ್ಚು ಸಲುಗೆ ಬೆಳೆಸುತ್ತಿದ್ದಳು. ಬಳಿಕ ಅವರ ನಂಬರ್ ಪಡೆದು…