Subscribe to Updates
Get the latest creative news from FooBar about art, design and business.
- ಜನಗಣತಿ ವೇಳೆ ಬಯಲಾದ ವಲಸೆ ಚಿತ್ರಣ: ತುಮಕೂರಿನಲ್ಲಿ 1,514 ಮನೆಗಳಿಗೆ ಬೀಗ!
- ಪಾರ್ಟ್ಟೈಮ್ ಕೆಲಸದ ಆಮಿಷ: ತುಮಕೂರಿನ ಮಹಿಳಾ ವೈದ್ಯೆಗೆ ₹4 ಲಕ್ಷ ವಂಚನೆ
- ಸಿರಾ: ಬುಕ್ಕಾಪಟ್ಟಣ ವೃತ್ತದಲ್ಲಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಉದ್ಘಾಟನೆಗೊಳ್ಳದ ಶೌಚಾಲಯ!
- ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ: ರಸ್ತೆ ದುರಾವಸ್ಥೆ ವಿರುದ್ಧ ಪ್ರತಿಭಟನೆ
- ಹುಳಿಯಾರು: ಮೇ 20 ರಂದು ವಿಶ್ವ ತಾಯಂದಿರ ದಿನಾಚರಣೆ
- ಮಧುಗಿರಿ: ಚಾಕು ತೋರಿಸಿ ಕೇಬಲ್, ಪೈಪ್ ಕಳವು
- ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಪಾಪಿ ತಂದೆ: ಕೊಲೆಯ ನಂತರ ಮಗಳು ನಾಪತ್ತೆ ಎಂದು ಹೈಡ್ರಾಮಾ
- ಸಾಧನ ಸಮಾವೇಶಕ್ಕೆ ಸರ್ಕಾರಿ ನೌಕರರ ಬಳಕೆ: ಹೈಕೋರ್ಟ್ ಮೆಟ್ಟಿಲೇರಲು ಮುಂದಾದ ಬಿಜೆಪಿ
Author: admin
ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಬಿದನಗೆರೆ ಶನೇಶ್ವರ ಸ್ವಾಮಿ ಅರ್ಚಕ ಧನಂಜಯ ಗುರೂಜಿ ಬಿದನಗೆರೆ ಕೊರಳಿನಲ್ಲಿ ಹುಲಿಯ ಉಗುರು ಧರಿಸಿರುವ ಬಗ್ಗೆ ಪರಿಶೀಲನೆ ನಡೆಸಿ ವನ್ಯಜೀವಿ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಒತ್ತಾಯಿಸಿದ್ದಾರೆ. ರಾಜ್ಯದ್ಯಂತ ಹುಲಿ ಉಗಿರಿನ ಬಗ್ಗೆ ಚರ್ಚೆ ಆಗುತ್ತಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಬ್ಬ ಆರೋಪಿಯನ್ನ ಬಂಧಿಸಿ ರಾಜ್ಯದ ಅರಣ್ಯ ಅಧಿಕಾರಿಗಳು ಸಾರ್ವಜನಿಕರ ಮನೆಗೆದ್ದು ಉತ್ತಮ ಸೇವೆ ಮಾಡಿದ್ದಾರೆ. ಇದು ಸಂತಸ ವಿಷಯವಾಗಿದೆ. ಹಾಗೆಯೇ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಬಿದನಗೆರೆ ಶನೇಶ್ವರ ಸ್ವಾಮಿ ಅರ್ಚಕ ಧನಂಜಯ ಗುರೂಜಿ ಬಿದನಗೆರೆ ಕೊರಳಿನಲ್ಲಿ ಕೂಡ ಹುಲಿ ಉಗುರನ್ನು ಧರಿಸಿದ್ದು, ಅವರ ಕೊರಳಿನಲ್ಲಿ ಹಾಕಿರುವ ಚಿನ್ನಾಭರಣಗಳ ಜೊತೆ ಸಾರ್ವಜನಿಕರ ಮುಂದೆ ತೋರ್ಪಡಿಸಿರುತ್ತಾರೆ ಅದು ಅಸಲಿಯೋ ? ನಕಲಿಯೋ ? ಪರಿಶೀಲಿಸಿ ವನ್ಯಜೀವಿ ಕಾಯ್ದೆ ಇಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು…
ತುಮಕೂರು: ಎಲ್ಲಿ ನೋಡಿದರಲ್ಲಿ ಬೂದು ಕುಂಬಳಕಾಯಿ ರಾಶಿಗಳು. ಫುಟ್ಪಾತ್ ಗಳಲ್ಲಿ, ರಸ್ತೆಗಳಲ್ಲಿ ಗ್ರಂಥಾಲಯದ ಮುಂಭಾಗದಲ್ಲಿ, ಸಾರ್ವಜನಿಕ ಶೌಚಾಲಯಗಳ ಮುಂಭಾಗದಲ್ಲಿ ರಾಶಿ ರಾಶಿ ಬೂದುಗುಂಬಳಗಾಯಿ ಅಚ್ಚರಿ ಸೃಷ್ಟಿಸಿತು. ರಸ್ತೆ ಬದಿಯಲ್ಲಿ ರಾಶಿರಾಶಿಯಾಗಿ ಬೂದುಗುಂಬಳಕಾಯಿ ಯಾಕೆ ಸುರಿಯಲಾಗಿದೆ ಎನ್ನುವುದು ಗೊತ್ತಿಲ್ಲ, ಸಾರ್ವಜನಿಕರಂತೂ ಈ ದೃಶ್ಯ ಕಂಡು ಅಚ್ಚರಿಗೊಳಗಾಗಿದ್ದಾರೆ. ತುಮಕೂರು ನಗರದ ಹೃದಯ ಭಾಗವಾದ ಸಿರಾ ಗೇಟ್ ಬಳಿ ಮತ್ತು ಸಾರ್ವಜನಿಕ ಗ್ರಂಥಾಲಯ ಹಾಗೂ ಸಾರ್ವಜನಿಕ ಶೌಚಾಲಯದ ಬಳಿ ಹೀಗೆ ಬೂದು ಕುಂಬಳಕಾಯಿ ಬಿದ್ದಿರುವುದು ಕಂಡು ಬಂತು. ಸಿರಾ ಗೇಟ್ ನಿಂದ ತುಮಕೂರು ಮಾರುಕಟ್ಟೆ ವರೆಗೂ ಇದೇ ರೀತಿ ರಸ್ತೆಗೆ ಮತ್ತು ಚರಂಡಿಗೆ ಬೂದುಗುಂಬಳಕಾಯಿ ಸುರಿಯಲಾಗಿದೆ. ಹಬ್ಬದ ಪ್ರಯುಕ್ತ ರಾಶಿ ರಾಶಿ ಬೂದುಗುಂಬಳಕಾಯಿ ತರಲಾಗಿದ್ದು, ಆದ್ರೆ ವ್ಯಾಪಾರವಿಲ್ಲದೇ ಇಲ್ಲಿಯೇ ಸುರಿದು ಹೋಗಿರುವ ಶಂಕೆ ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ಸುರಿಯಲಾಗಿರುವ ಬೂದುಗುಂಬಳಕಾಯಿ ಕೊಳೆತರೆ ನಗರದ ಸ್ಥಿತಿ ಏನಾಗಬಹುದು ಎನ್ನುವ ಮಾತುಗಳು ಕೂಡ ಕೇಳಿ ಬಂದವು. ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಶಿರಾಶಿ ಬೂದುಗುಂಬಳಕಾಯಿ ಸುರಿಯಲಾಗಿದ್ದರೂ, ಅದನ್ನು…
ಹಣಕಾಸಿನ ವಿಚಾರವಾಗಿ ಅಪಹರಿಸಿದ್ದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಭಿಲಾಷ್ ಎಂಬುವರನ್ನು ಬೆಂಗಳೂರಿನಿಂದ ಅಪಹರಿಸಿ ರಾಮನಗರ ಗೋಡೌನ್ ನಲ್ಲಿ ಇರಿಸಿದ್ದರು. ಅಪಹರಣಕಾರರು ಊಟಕ್ಕೆ ತೆರಳಿದ್ದಾಗ ಪೊಲೀಸರಿಗೆ ಅಭಿಷೇಕ್ ಕರೆ ಮಾಡಿ ಕಿಡ್ನಾಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ ಅಭಿಷೇಕ್ ನನ್ನು ರಕ್ಷಿಸಿ, ನಾಲ್ವರನ್ನು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಪ್ರಕರಣದ ತನಿಖೆ ವರ್ಗಾವಣೆ ಮಾಡಲಾಗಿದೆ.
ಹೋಟೆಲ್ ಬಗ್ಗೆ ಆನ್ ಲೈನ್ ನಲ್ಲಿ ಒಳ್ಳೆಯ ಅನಿಸಿಕೆ(ರಿವ್ಯೂ) ಬರೆದರೆ ಹಣ ನೀಡುವುದಾಗಿ ಹೇಳಿ ವಂಚಿಸಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ‘ಸ್ಥಳೀಯ ನಿವಾಸಿಯೊಬ್ಬರು ವಂಚನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ದೂರುದಾರರಿಗೆ ಆನ್ ಲೈನ್ ಮೂಲಕ ಆರೋಪಿ ಪರಿಚಯವಾಗಿತ್ತು. ‘ಹೋಟೆಲ್ ಬಗ್ಗೆ ಆನ್ ಲೈನ್ನಲ್ಲಿ ಒಳ್ಳೆಯ ರೀತಿಯಲ್ಲಿ ಅನಿಸಿಕೆ ಬರೆದರೆ ಹಣ ನೀಡಲಾಗುವುದು’ ಎಂದಿದ್ದ.
ಮುಂಬೈ: ಭಾರತ ಕ್ರಿಕೆಟ್ ನ ಜೀವಂತ ದಂತಕಥೆ ಎಂದೇ ಖ್ಯಾತಿ ಪಡೆದಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೊಲ್ಕರ್ ಅವರು ವಿಜಯ ದಶಮಿಯ ಪ್ರಯುಕ್ತ ಇಂದು( ಮಂಗಳವಾರ ) ಶುಭಾಶಯ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.. ಎಂದು ಹೇಳಿದ್ದಾರೆ. ಚೆಂಡು ಬೌಂಡರಿಯನ್ನು ದಾಟಿದಂತೆ, ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸಲಿ. ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿ, ಸರಿಯಾದ ಕಾರಣಕ್ಕೆ ಮತ್ತು ಉತ್ತಮ ವಿಷಯಗಳ ಪರ ಬ್ಯಾಟಿಂಗ್ ಮುಂದುವರಿಸಿ ಎಂದು ಬರೆದುಕೊಂಡಿದ್ದಾರೆ.
ಇಲ್ಲಿನ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕನನ್ನು ಆತನ ಸ್ನೇಹಿತರು ಚಾಕುವಿನಿಂದ ಇರಿದು ಕೊಂದಿದ್ದಾರೆ. ಸೋಮವಾರ ರಾತ್ರಿ ಜಗದೀಶ್ ಪುರ ಪಟ್ಟಣದ ಮೊಹಬ್ಬತ್ ಪುರ ಗ್ರಾಮದ ಅರಣ್ಯದಿಂದ ಮೆರಾಜ್ ನ ಶವವನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ತನ್ನ ಮಗ ತನ್ನ ಸ್ನೇಹಿತರಾದ ಗುಲಾಮ್ ಮತ್ತು ಪರಿಕಲ್ ಅಲಿ ಅವರೊಂದಿಗೆ ಗ್ರಾಮದಲ್ಲಿ ಮದುವೆಗೆ ಹೋಗಿದ್ದನು ಆದರೆ ಮನೆಗೆ ಹಿಂತಿರುಗಲಿಲ್ಲ ಎಂದು ಮೆರಾಜ್ ತಂದೆ ರಿಯಾಜ್ ಪೊಲೀಸರಿಗೆ ತಿಳಿಸಿದ್ದಾರೆ. ಮೆರಾಜ್ ಬಗ್ಗೆ ವಿಚಾರಿಸಲು ಕುಟುಂಬದವರು ಇಬ್ಬರನ್ನು ಸಂಪರ್ಕಿಸಿದಾಗ ಅವರು ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಗದೀಶ್ ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಸಿಂಗ್ ಮಾತನಾಡಿ, ಮೆರಾಜ್ ಅವರ ಸ್ನೇಹಿತರನ್ನು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ ಮತ್ತು ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹಾರ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ನಟ ದರ್ಶನ್ ವಿರುದ್ಧವೂ ಆರೋಪ ಕೇಳಿಬಂದಿದ್ದು, ಟೈಗರ್ ಲಾಕೆಟ್ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಈ ಆರೋಪದ ನಂತರ, ಅರಣ್ಯ ಅಧಿಕಾರಿಗಳು ಸಂತೋಷ್ ಅವರ ಆಪ್ತ ಸಹಾಯಕ ರಂಜಿತ್ ಮತ್ತು ಚಿನ್ನದ ಸರವನ್ನು ತಯಾರಿಸಿದ ಶಂಕಿತ ಆಭರಣ ವ್ಯಾಪಾರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಹುಲಿ ಪಂಜದ ಲಾಕೆಟ್ ಹೊಂದಿದ್ದ ದರ್ಶನ್ ಮತ್ತು ವಿನಯ್ ಗುರೂಜಿ ಅದೇ ಅಪರಾಧದಲ್ಲಿ ತಪ್ಪಿತಸ್ಥರೇ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ದರ್ಶನ್ ಮತ್ತು ವಿನಯ್ ಗುರೂಜಿ ವಿರುದ್ಧ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಲಾಕೆಟ್ ನಲ್ಲಿರುವ ಹುಲಿ ಉಗುರು ಅಸಲಿಯೇ ಅಥವಾ ನಕಲಿಯೇ ಎಂದು ನಿರ್ಧರಿಸಲು ಅರಣ್ಯ ಇಲಾಖೆ ಸಮಗ್ರ ತನಿಖೆ ನಡೆಸುತ್ತಿದೆ. ದರ್ಶನ್ ಅವರ ಹುಲಿ ಪಂಜದ ಪೆಂಡೆಂಟ್ ಅಸಲಿಯೇ…
ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಹುಲಿ ಪಂಜದ ಪೆಂಡೆಂಟ್ ಹೊಂದಿದ್ದಕ್ಕಾಗಿ ಅರಣ್ಯ ಇಲಾಖೆ ಬಂಧಿಸಿದ ಬೆನ್ನಲ್ಲೇ ಇದೀಗ ಮತ್ತಿಬ್ಬರಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಸಮನ್ಸ್ ಜಾರಿ ಮಾಡಲಾಗಿದೆ. ಹುಲಿ ಉಗುರುಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂದು ಅಧಿಕಾರಿಗಳು ಶ್ರದ್ಧೆಯಿಂದ ತನಿಖೆ ನಡೆಸುತ್ತಿದ್ದಾರೆ. ವರ್ತೂರ್ ಸಂತೋಷ್ ಅವರ ಆರಂಭಿಕ ವಿಚಾರಣೆಯ ನಂತರ, ಅರಣ್ಯ ಅಧಿಕಾರಿಗಳು ಅವರ ಆಪ್ತ ಸಹಚರ ರಂಜಿತ್ ಮತ್ತು ಚಿನ್ನದ ಸರವನ್ನು ಹೆಣೆದುಕೊಂಡಿರುವ ಆಭರಣ ವ್ಯಾಪಾರಿಗೆ ನೋಟಿಸ್ ನೀಡಿದ್ದಾರೆ. ಸಂತೋಷ್ ಅವರ ವಿಚಾರಣೆಯ ಸಮಯದಲ್ಲಿ, ಹುಲಿ ಉಗುರುಗಳ ಮೂಲದ ಬಗ್ಗೆ ಸಂಘರ್ಷದ ಪ್ರತಿಕ್ರಿಯೆಗಳು ಹೊರಹೊಮ್ಮಿದವು, ಈ ವಿಚಿತ್ರ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ವ್ಯಕ್ತಿಗಳನ್ನು ಒಳಗೊಳ್ಳಲು ತಮ್ಮ ವಿಚಾರಣೆಯನ್ನು ವಿಸ್ತರಿಸಲು ಅಧಿಕಾರಿಗಳನ್ನು ಪ್ರೇರೇಪಿಸಿತು. ಅದೇ ಸಮಯದಲ್ಲಿ, ಅರಣ್ಯ ಇಲಾಖೆಯು ಉಗುರುಗಳನ್ನು ಅವು ನಿಜವಾಗಿಯೂ ಹುಲಿ ಅಥವಾ ಇತರ ಪ್ರಾಣಿಗಳದ್ದೇ ಎಂದು ನಿರ್ಧರಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ. ಅರಣ್ಯ ಇಲಾಖೆಯು ಸ್ವಯಂಪ್ರೇರಿತ ಪ್ರಕರಣವನ್ನು ಪ್ರೇರೇಪಿಸಿತು ಮತ್ತು…
ವಿಜಯದಶಮಿ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ನೆರವೇರಿಸುವ ಮೂಲಕ ಸೈನಿಕರೊಂದಿಗೆ ಹಬ್ಬವನ್ನು ಆಚರಿಸಿದರು. ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, 4 ವರ್ಷಗಳ ಹಿಂದೆ ಸೈನಿಕರೊಂದಿಗೆ ವಿಜಯದಶಮಿ ಆಚರಿಸಲು ಯೋಜನೆ ಹಾಕಿಕೊಂಡಿದ್ದೆ ಅದರಂತೆ ಇಂದು ನಿಮ್ಮೊಡನೆ ಹಬ್ಬ ಆಚರಿಸುತ್ತಿರುವುದಕ್ಕೆ ತುಂಬಾ ಖುಷಿಯಿದೆ. ಕಷ್ಟದ ಸಂದರ್ಭಗಳಲ್ಲಿ ದೇಶದ ಭದ್ರತೆಯ ಬಗ್ಗೆ ನೀವು ವಹಿಸುವ ಜವಾಬ್ದಾರಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುತ್ತಿದೆ. ಸೈನಿಕರು ದೇಶದ ಗಡಿಯನ್ನು ಸುರಕ್ಷಿತವಾಗಿ ಇಡದಿದ್ದರೆ ಭಾರತ ವಿಶ್ವದಲ್ಲಿ ಇಂದು ಈ ಮಟ್ಟಕ್ಕೆ ಬರುತ್ತಿರಲಿಲ್ಲ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಿದರು. ಹಿಂದಿನ ಭಾರತ ಹಲವು ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದರು…ಆದರೆ ಇಂದು 20 ಸಾವಿರ ಕೋಟಿಗೂ ರೂ. ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿರುವುದಾಗಿ ತಿಳಿಸಿದರು. ತವಾಂಗ್ ತಲುಪುವ ಮುನ್ನ ರಕ್ಷಣಾ ಸಚಿವರು ಅಸ್ಸಾಂನ ತೇಜ್ ಪುರದಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿದರು.…
ಪಂಜಾಬ್: ರೆಸ್ಟಾರೆಂಟ್ ಮಾಲೀಕನೊಂದಿಗೆ ಬಿಲ್ ಪಾವತಿಗೆ ಸಂಬಂಧಿಸಿದಂತೆ ನಡೆದ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಪೊಲೀಸ್ ಸಿಬ್ಬಂದಿಯನ್ನು ನಾಲ್ವರು ಕಬಡ್ಡಿ ಆಟಗಾರರು ಥಳಿಸಿ ಸಾಯಿಸಿದ್ದಾರೆ. ಆರೋಪಿಗಳು ಸಮೀಪದ ರೈಸರ್ ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಊಟಕ್ಕೆಂದು ರೆಸ್ಟೋರೆಂಟ್ ಗೆ ಬಂದಿದ್ದರು. ಬಿಲ್ ಪಾವತಿಸುವಾಗ ವಾಗ್ವಾದ ಆರಂಭವಾಗಿದ್ದು, ಆರೋಪಿಗಳು ದರೋಡೆ ಪ್ರಯತ್ನಿಸಿದ್ದಾರೆಂದು ರೆಸ್ಟಾರೆಂಟ್ ಮಾಲೀಕ ಪೊಲೀಸರನ್ನು ಕರೆದಿದ್ದಾರೆ. ಈ ವೇಳೆ, ಹೆಡ್ ಕಾನ್ ಸ್ಟೇಬಲ್ ದರ್ಶನ್ ಸಿಂಗ್ ಪೊಲೀಸ್ ತಂಡದೊಂದಿಗೆ ಆಗಮಿಸಿ, ಆರೋಪಿಗಳನ್ನು ಠಾಣೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಗಲಾಟೆಯಲ್ಲಿ ದರ್ಶನ್ ಸಿಂಗ್ ಕೆಳಗೆ ಬಿದ್ದಿದ್ದು, ಅವರ ತಲೆಗೆ ಬಲವಾದ ಏಟಾಗಿದೆ. ಅವರನ್ನು ಬರ್ನಾಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ವಿವರ ತಿಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಕರ್ತವ್ಯದ ವೇಳೆ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಪೊಲೀಸ್…