Subscribe to Updates
Get the latest creative news from FooBar about art, design and business.
- ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ
- ಭದ್ರಾವತಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ; ಪತ್ನಿ ಹಾಗೂ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ
- 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಚಿವ ಡಿ.ಸುಧಾಕರ್ ಅವರ ರಾಜಕೀಯ ಹಾದಿ ಹೇಗಿತ್ತು?
- ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರ್ತಾರೋ ಗೊತ್ತಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
- ಬೆಂಗಳೂರು: ಆರ್ಟ್ ಆಫ್ ಲಿವಿಂಗ್ನಲ್ಲಿ ನೂತನ ‘ಧ್ಯಾನ ಮಂದಿರ’ ಉದ್ಘಾಟಿಸಿದ ಪ್ರಧಾನಿ ಮೋದಿ
- ತಾಯಂದಿರ ದಿನದ ವಿಶೇಷ ‘ಅಮ್ಮ’ | ವಿ.ಎಂ.ಎಸ್.ಗೋಪಿ
- ಮೇ 11ರಂದು ಕೃತಕ ಬುದ್ಧಿಮತ್ತೆ: ಒಂದು ದಿನದ ರಾಷ್ಟ್ರೀಯ ಸಮ್ಮೇಳನ
- ತುಮಕೂರು: ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
Author: admin
ತುರುವೇಕೆರೆ: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ , ಸಂಸ್ಥೆಯ ಅಧಿಕಾರೇತರ ಅಧ್ಯಕ್ಷರಾಗಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವರನ್ನು ನಾಮನಿರ್ದೇಶನ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನ ಸಂಘದ ನಿಯಮಗಳ ಅಂತರ್ ನಿಯಮ 11(4) ರ ಪ್ರದತ್ತವಾದ ಅಧಿಕಾರದನ್ವಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಮಸಾಲಾ ಜಯರಾಮ್ ಅವರನ್ನು ಸಂಸ್ಥೆಯ ಅಧಿಕಾರೇತರ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಗಣಿ 1) ಯ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಪ್ರಕಾಶ್ ಅವರು ರಾಜ್ಯಪಾಲರ ಆಜ್ಞಾನುಸಾರ ಆದೇಶ ಹೊರಡಿಸಿದ್ದಾರೆ. ಶಾಸಕರಾದ ಮಸಾಲ ಜಯರಾಮ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಸಚಿವರುಗಳಿಗೆ ಅಭಿಮಾನಿಗಳು, ಬೆಂಬಲಿಗರು ಅಭಿನಂದನೆ ಸಲ್ಲಿಸಿದ್ದಾರೆ. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ಪಾವಗಡ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ‘ಕಾಡುಗೊಲ್ಲರ ನಡೆ ಎಸ್.ಟಿ ಮೀಸಲಾತಿ ಹೋರಾಟದ ಕಡೆಗೆ’ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕಾಡುಗೊಲ್ಲರ ಆಚಾರದಂತೆ ಮಣ್ಣಿನ ದೀಪವನ್ನು ಬೆಳಗಿಸಿ, ಕಂಬಳಿ ಜಾಡಿ ಆಕಿ ಗಣೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದರು. ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಎಸಿಪಿ ಬಸವರಾಜ್, ನಮ್ಮ ಸಮುದಾಯದ ನಾಯಕರು ಕಾಡುಗೊಲ್ಲರ ಹೋರಾಟಕ್ಕೆ ಪ್ರಬಲವಾದ ಬೆಂಬಲವನ್ನು ಎರಡೂವರೆ ವರ್ಷಗಳಿಂದ ಕೊಡುತ್ತಿದ್ದಾರೆ. ಬೇರೆ ಬೇರೆ ಸಂಘ ಪರಿವಾರದ ನಾಯಕರಿಗೆ ನಮ್ಮ ಸ್ಥಿತಿಗತಿಗಳು ಮುಟ್ಟಿಸುವ ಕೆಲಸ ಮಾಡಿದ್ದೇವೆ. ಇವರಿಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಧ್ಯಕ್ಷರಾದ ರಾಜಣ್ಣರವರ ಪರವಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ ಎಂದರು. ಎಸ್.ಎಸ್.ಕೆ. ಸಂಘದ ಉಪಾಧ್ಯಕ್ಷ ಸಿ.ಎನ್.ಆನಂದ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಹೊಂದಿರುವ ಈ ಸಮುದಾಯ ಎಸ್.ಟಿ ಸೇರುವ ಅರ್ಹತೆ ಹೊಂದಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಶಿರಾ ತಾಲೂಕಿನ ಕಾಡುಗೋಲ್ಲರ ಸಂಘದ ಅಧ್ಯಕ್ಷರಾದ ಈಶ್ವರಪ್ಪ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ., ರಾಜಕೀಯವಾಗಿ,…
ಪಾವಗಡ: ಮಟ್ಕಾ ಇಸ್ಪೀಟ್, ಮತ್ತಿತರ ಕಾನೂನು ಬಾಹಿರ ಚಟುವಟಿಕೆ ಸಂಪೂರ್ಣ ಮಟ್ಟ ಹಾಕಲು ಗ್ರಾಮಸ್ಥರು ಪೊಲೀಸ್ ಇಲಾಖೆ ಜೊತೆ ಸಹಕರಿಸುವಂತೆ ಪಾವಗಡ ಪೊಲೀಸ್ ಆರಕ್ಷಕ ನೀರಿಕ್ಷಕರಾದ ಅಜಯ್ ಸಾರಥಿ ಮನವಿ ಮಾಡಿದರು. ಮಕರ ಸಂಕ್ರಾಂತಿ ಅಂಗವಾಗಿ ಬ್ಯಾಡನೂರು ಗ್ರಾಮಸ್ಥರು ಹಮ್ಮಿಕೊಂಡಿದ್ದ ನಮ್ಮ ಪಾವಗಡ ನಮ್ಮ ಹೆಮ್ಮೆ ಕ್ಯಾಲೆಂಡರ್ ಬಿಡುಗಡೆ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಟ್ಕಾದಿಂದ ಸಾಕಷ್ಟು ಕುಟುಂಬಗಳು ಬೀದಿ ಪಾಲಗಿದ್ದು, ಜನತೆಯ ಸಹಕಾರ ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರದಿಂದ ಈಗಾಗಲೇ ಮಟ್ಕಾವನ್ನು ಸಂಪೂರ್ಣ ಮಟ್ಟ ಹಾಕಲಾಗಿದ್ದು, ಜನತೆ ನೆಮ್ಮದಿಯಿಂದ ಜೀವನ ನಡೆಸುವ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ನಮ್ಮ ಪಾವಗಡ ನಮ್ಮ ಹೆಮ್ಮೆ ಎಂಬ ಕೇಕ್ ಕತ್ತರಿಸಿ, ಕ್ಯಾಲೆಂಡರ್ ಬಿಡುಗಡೆ ಮಾಡಿ ಪೊಲೀಸ್ ಅಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಗ್ರಾಮದ ಮುಖಂಡರಾದ ವೇಣುಗೋಪಾಲ ರೆಡ್ಡಿ, ಬ್ಯಾಡನೂರು ಶಿವು,ಕುರಬರಹಳ್ಳಿ ಪ್ರಕಾಶ್ ರೆಡ್ಡಿ,ಆಟೋ…
ಪಾವಗಡ: ಮನುಷ್ಯ ಪ್ರಕೃತಿಯೊಂದಿಗೆ ಬೆರೆತು ಜೀವನ ಸಾಗಿಸುವಲ್ಲಿ ಹಬ್ಬಗಳು ಮಹತ್ತರವಾದ ಪಾತ್ರ ವಹಿಸುತ್ತವೆ ಎಂದು ಪತಂಜಲಿ ಯೋಗ ಶಿಕ್ಷಕರಾದ ಎನ್.ಜಿ.ಶ್ರೀನಿವಾಸ್ ತಿಳಿಸಿದರು. ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಇರುವ ಚೌಡೇಶ್ವರಿ ದೇವಾಲಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತಾಜಿ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಹಿಂದೂ ಧರ್ಮದಲ್ಲಿ ಹಬ್ಬಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹಿರಿಯರು ಆಚರಿಸುತ್ತಾ ಬಂದಿದ್ದಾರೆ. ಹಿರಿಯರು ನಮ್ಮ ಜೀವನದಲ್ಲಿ ಪ್ರಕೃತಿಯನ್ನು ಜೋಡಿಸಿಕೊಂಡು ಮುಂದೆ ಸಾಗುವಲ್ಲಿ ಹಬ್ಬಗಳು ರೂಪುಗೊಂಡಿವೆ. ಇದರ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಹಬ್ಬಗಳ ಆಚರಣೆ ಮರೀಚಿಕೆ ಆಗಬಹುದು ಎಂದರು. ಕಾರ್ಯಕ್ರಮದ ಭಾಗವಾಗಿ ಎಳ್ಳು,ಬೆಲ್ಲ, ಕಬ್ಬು, ಕಡಲೆ, ಅವರೆ ಇತ್ಯಾದಿಗಳನ್ನು ಜೋಡಿಸಿ ಬೋಗಿ ಹಬ್ಬ ಆಚರಿಸಲಾಯಿತು. ಆವರಣದಲ್ಲಿ ಬಣ್ಣಬಣ್ಣದ ರಂಗವಲ್ಲಿ ಬಿಡಿಸಲಾಗಿತ್ತು, ಭೋಗಿ ಬೆಂಕಿಯ ಬೆಳಕಿನಲ್ಲಿ ಕುಣಿದು ಎಳ್ಳುಬೆಲ್ಲವನ್ನು ಹಂಚಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಮಧುಗಿರಿ ಸಂಘಚಾಲಕರಾದ ಜಯಪ್ರಕಾಶ್, ಹೋಬಳಿ ಪ್ರಮುಖ್ ಶ್ರೀಕಾಂತ್, ಬೆಳ್ಳಂದೂರು ಮುಖ್ಯಶಿಕ್ಷಕ…
ಮಧುಗಿರಿ:ದೊಡ್ಡೇರಿ ಹೋಬಳಿ ದಂಡಿನ ದಿಬ್ಬ ಗ್ರಾಮದ ಭೋವಿ ಜನಾಂಗದ ವತಿಯಿಂದ ಶ್ರೀ ಗುರು ಸಿದ್ದರಾಮೇಶ್ವರರ 865 ಜಯಂತ್ಯೋತ್ಸವ ಸರಳವಾಗಿ ಪ್ರಪ್ರಥಮವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ದೊಡ್ಡೇರಿ ಗ್ರಾಮ ಪಂಚಾಯತಿಯ ಸದಸ್ಯ ವಿಜಯ್ ಪ್ರಕಾಶ್ ಈ ವೇಳೆ ಮಾತಾನಾಡಿ, ಶ್ರೀ ಗುರು ಸಿದ್ದರಾಮೇಶ್ವರ ಕರ್ಮಯೋಗಿ ಸಾಧಾರಣ ನಿಷ್ಠಾವಂತ ಸರಳ ವ್ಯಕ್ತಿತ್ವ ಹೊಂದಿರುವರಾಗಿದ್ದರು. ಅಂದಿಗೆ ಕೆರೆಕಟ್ಟೆ ಪ್ರತಿಷ್ಠಾಪನೆ ಮಾಡಿ ಜನಾಂಗಕ್ಕೆ ಜೀವವನ್ನು ಮುಡಿಪಾಗಿಟ್ಟರು ಎಂದರು. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ವರದರಾಜು, ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಹರೀಶ್, ಯುವ ಮುಖಂಡರಾದ ಪುನೀತ್, ಶಿವಕುಮಾರ್, ಭಾನುಪ್ರಕಾಶ್, ತಿಪ್ಪೇಸ್ವಾಮಿ, ಶ್ರೀನಿವಾಸ್, ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು. ವರದಿ: ದೊಡ್ಡೇರಿ ಮಹಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಮಿಳುನಾಡಿನ ಶ್ರೀಪೆರುಂಪತ್ತೂರ್ನಲ್ಲಿ ಪೊಲೀಸರ ಗುಂಡಿನ ದಾಳಿ. ಅತ್ಯಾಚಾರ ಪ್ರಕರಣದ ಆರೋಪಿಗಳಾದ ತಿರುವಳ್ಳೂರು ಮೂಲದ ನಾಗರಾಜ್ ಮತ್ತು ಪ್ರಕಾಶ್ ತಪ್ಪಿಸಿಕೊಳ್ಳಲು ಯತ್ನಿಸಿದರು . ಆಗ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗಳ ಸಾಕ್ಷ್ಯಾಧಾರ ತೆಗೆದುಕೊಳ್ಳುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಗುಂಡಿನ ದಾಳಿ ನಡೆದಿದೆ. ಆರೋಪಿಗಳು ಬೈಕ್ನಿಂದ ಕಂಟ್ರಿ ಗನ್ ತೆಗೆದುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆ. ನಂತರ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ಸದೆಬಡಿದಿದ್ದಾರೆ. ಇಬ್ಬರೂ ಕಿರುಕುಳದ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ದೇಶದ ಪ್ರತಿಯೊಬ್ಬ ನಾಗರಿಕರು ಎಲ್ಲಿ ಬೇಕಾದರೂ ಮತದಾನ ಮಾಡುವಂತೆ ಚುನಾವಣಾ ಆಯೋಗದ ಕ್ರಮಗಳು ಇಂದಿನಿಂದ ಪ್ರಾರಂಭವಾಗಿವೆ. ಅತಿಥಿ ಕೆಲಸಗಾರರೂ ಇದರ ಪ್ರಯೋಜನ ಪಡೆಯಬಹುದು. ಚುನಾವಣಾ ಆಯೋಗವು ಇಂದು 16 ರಾಜಕೀಯ ಪಕ್ಷಗಳಿಗೆ ಕರಡು ಯೋಜನೆಯನ್ನು ವಿವರಿಸಲಿದೆ. ಒಂದೇ ಭಾರತ, ಒಂದು ಚುನಾವಣೆ ಎಂಬ ಪರಿಕಲ್ಪನೆಯ ಅನುಷ್ಠಾನಕ್ಕೆ ಹೆಜ್ಜೆಗಳು ಮುಂದಿವೆ. ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವುದು ಆಯೋಗದ ಉದ್ದೇಶವಾಗಿದೆ. ಪ್ರಸ್ತುತ, ಮತದಾರರು ತಮ್ಮ ಕ್ಷೇತ್ರಗಳಿಗೆ ಪ್ರಯಾಣಿಸಲು ತೊಂದರೆಯಾಗಿರುವುದು ಇದಕ್ಕೆ ಅಡ್ಡಿಯಾಗಿದೆ. ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಈ ಪರಿಸ್ಥಿತಿಯನ್ನು ಎದುರಿಸಲು ಚುನಾವಣಾ ಆಯೋಗ ಮುಂದಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಮತಗಳನ್ನು ದಾಖಲಿಸಲು ಸೂಕ್ತವಾದ ಮತ ಯಂತ್ರವನ್ನು ಚುನಾವಣಾ ಆಯೋಗ ಪರಿಚಯಿಸಲಿದೆ. ತಾಂತ್ರಿಕವಾಗಿ, ಆಯೋಗವು ಅಂತಹ ಮತದಾನದ ಜಾಲರಿಯ ಸಿದ್ಧತೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಕರಡು ಯೋಜನೆಯನ್ನು ವಿವರಿಸಿದ ನಂತರ, ಆಯೋಗವು ಇತರ ಸಂಬಂಧಿತ ಕ್ರಮಗಳನ್ನು ಪೂರ್ಣಗೊಳಿಸುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯಾದರೂ ಇಂತಹ ಮತ ಯಂತ್ರವನ್ನು ಬಳಸಬೇಕೆಂಬುದು ಆಯೋಗದ…
ದೆಹಲಿಯಲ್ಲಿ ನೆರೆಹೊರೆಯವರ ನಡುವಿನ ಜಗಳದ ವೇಳೆ ಟಾಯ್ಲೆಟ್ ಕ್ಲೀನರ್ ಮೈಮೇಲೆ ಬಿದ್ದು ಯುವಕನೊಬ್ಬ ಗಾಯಗೊಂಡಿದ್ದಾನೆ. ದೆಹಲಿಯ ಉತ್ತಮ್ ನಗರದಲ್ಲಿ ಈ ಘಟನೆ ನಡೆದಿದೆ. ಆ್ಯಸಿಡ್ ಇರುವ ಟಾಯ್ಲೆಟ್ ಕ್ಲೀನರ್ ಬಿದ್ದು ಉತ್ತಮ್ ನಗರದ ನಿವಾಸಿ ರಾಜೇಶ್ವರ್ ಗೆ ಸುಟ್ಟ ಗಾಯಗಳಾಗಿವೆ. ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಉತ್ತಮ್ ನಗರದಿಂದ ಪೊಲೀಸರಿಗೆ ದಾಳಿಯ ವರದಿ ಬಂದಿದೆ. ರಾಜೇಶ್ವರ್ ಅವರ ಮಗ ತನ್ನ ಮುದ್ದಿನ ನಾಯಿಯೊಂದಿಗೆ ವಾಕಿಂಗ್ ಹೋದಾಗ ಅಕ್ಕಪಕ್ಕದ ಮನೆಯವರು ಗೇಟ್ ಬಳಿ ಬಂದು ನಿಂದಿಸಿದ್ದಾರೆ. ಇದನ್ನು ಕಂಡ ಮತ್ತೊಬ್ಬರು ರಾಜೇಶ್ವರನಿಗೆ ಮಾಹಿತಿ ನೀಡಿದ್ದಾರೆ. ಆಗ ಎರಡು ಮನೆಯವರ ನಡುವೆ ವಾಗ್ವಾದ ನಡೆದಿದೆ. ಬಳಿಕ ಮನೆಯೊಳಗಿದ್ದ ಟಾಯ್ಲೆಟ್ ಕ್ಲೀನರ್ ತೆರೆದು ಮೈಮೇಲೆ ಸುರಿದುಕೊಂಡಿದ್ದಾರೆ. ಘಟನೆಯಲ್ಲಿ ರಾಜೇಶ್ವರ್ ಮಾತ್ರ ಗಾಯಗೊಂಡಿದ್ದಾರೆ. ರಾಜೇಶ್ವರ್ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಅರ್ಬೋನಿ ಗೇಬ್ರಿಯಲ್ ಅವರು ವಿಶ್ವ ಸುಂದರಿ ವೇದಿಕೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವ ಮೊದಲ ಫಿಲಿಪಿನೋ-ಅಮೆರಿಕನ್ ಆಗಿದ್ದಾರೆ. ಸಾಮಾನ್ಯ ಹುಡುಗಿಯಾಗಿ ಹುಟ್ಟಿ ಬೆಳೆದ ಅರ್ಬೋನಿ ಕನಸು ನನಸಾಗಿಸಿದ್ದಾಳೆ. ಅರ್ಬೋನಿ ಮಾರ್ಚ್ 20, 1994 ರಂದು ಟೆಕ್ಸಾಸ್ನ ಹೂಸ್ಟನ್ನಲ್ಲಿ ಜನಿಸಿದರು. ಅರ್ಬೋನಿಯ ತಂದೆ ಫಿಲಿಪೈನ್ಸ್ನಿಂದ ಕೇವಲ $20 ಅನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಯುನೈಟೆಡ್ ಸ್ಟೇಟ್ಸ್ನಲ್ಲಿ ಕಾಲೇಜು ವಿದ್ಯಾರ್ಥಿವೇತನದೊಂದಿಗೆ ಅಧ್ಯಯನ ಮಾಡಲು ಬಂದರು. ಅಲ್ಲಿ ಅವರು ಟೆಕ್ಸಾಸ್ನ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಫಿಲಿಪಿನೋ ಅಮೇರಿಕನ್, ಅರ್ಬೋನಿ 2018 ರಲ್ಲಿ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಫ್ಯಾಷನ್ ವಿನ್ಯಾಸದಲ್ಲಿ ಪದವಿ ಪಡೆದರು. ಅರ್ಬೋನಿ 2021 ರಲ್ಲಿ ಮಿಸ್ ಟೆಕ್ಸಾಸ್ USA ಆಗುವ ಮೊದಲ ಫಿಲಿಪಿನೋ-ಅಮೆರಿಕನ್ ಆಗುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಆ ದಿನ ಸೆಕೆಂಡ್ ಹ್ಯಾಂಡ್ ಅಂಗಡಿಯಲ್ಲಿ ಸಿಕ್ಕ ಕೋಟ್ ಅನ್ನು ಕತ್ತರಿಸಿ ಹೊಲಿಯುವ ಮೂಲಕ ಅರ್ಬೋನಿ ಸೌಂದರ್ಯ ಸ್ಪರ್ಧೆಯ ಉಡುಪನ್ನು ತಯಾರಿಸಿದರು. ಅರ್ಬೋನಿ ನಂತರ ಅಕ್ಟೋಬರ್ 2022 ರಲ್ಲಿ ಮಿಸ್ USA ಕಿರೀಟವನ್ನು ಪಡೆದರು. ನಮ್ಮತುಮಕೂರು.ಕಾಂನ…
ತಮಿಳುನಾಡು : ತೂತುಕುಡಿ ಜಿಲ್ಲೆಯಲ್ಲಿ ‘ಮಿಲಾ’ ತಳಿಯ ಜಿಂಕೆಯೊಂದು ಸಮುದ್ರದಲ್ಲಿ ಸಿಲುಕಿಕೊಂಡಿದೆ. ಜಿಂಕೆ ಸಮುದ್ರದಲ್ಲಿ ತೇಲುತ್ತಿದ್ದ ವೇಳೆ ಇನಿಗೋ ನಗರ ಪ್ರದೇಶದ ಕೆಲ ಮೀನುಗಾರರು ಪೈಪರ್ ಬೋಟ್ ನಲ್ಲಿ ಜಿಂಕೆಯನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ದಡ ತಲುಪಿದ ನಂತರ ಅರಣ್ಯ ಇಲಾಖೆಗೆ ಜಿಂಕೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಮತ್ತು ಕಡಲತೀರದಲ್ಲಿ ಜಿಂಕೆಗಳನ್ನು ನೋಡಲು ಅನೇಕ ಜನರು ಸೇರಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy