Author: admin

ಕೊರಟಗೆರೆ:  ತಾಲ್ಲೂಕಿನ ಕೋಳಾಲ ಹೋಬಳಿಯ ಅಳಲಸಂದ್ರ  ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಫೋಟೋದಲ್ಲಿ ಕಾಣುವ ಯುವಕ ನೇಣಿಗೆ ಶರಣಾಗಿದ್ದ ಆದರೆ ಕುಟುಂಬಸ್ಥರು ಹೇಳುವ ಹಾಗೆ ನಮ್ಮ ಹುಡುಗ ನೇಣು ಹಾಕಿಕೊಳ್ಳುವ ಹೇಡಿಯಲ್ಲ. ಹುಡುಗನ ಸಹೋದರಿ ಲಕ್ಷ್ಮೀ ಮಾತನಾಡಿ,  ಕೋಳಲ ಪೊಲೀಸ್ ಠಾಣೆಯ ಅಧಿಕಾರಿ ಮಹಾಲಕ್ಷ್ಮಿ ಹಾಗೂ ಕೊರಟಗೆರೆ ಪೋಲಿಸ್ ಅಧಿಕಾರಿಗಳು ನಮಗೆ ನ್ಯಾಯ ದೊರಕಿಸುತ್ತಿಲ್ಲ.  ಎಷ್ಟು ಬಾರಿ ಮನವಿ ಮಾಡಿದರೂ ಅದು ಕೊಲೆಯಲ್ಲ ಆತ್ಮಹತ್ಯೆ ಎಂದು ಹೇಳುತ್ತಾರೆ. ಯಾರಾದರೂ ಕೈ ಕಾಲುಗಳನ್ನು ಹಿಂದಕ್ಕೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎಂದು ಕೇಳಿದರೆ ನೀವು ಲಾಯರ್ ಗಳ ಎಂದು ನಮಗೆ ಪ್ರಶ್ನಿಸುತ್ತಾರೆ.  ನಮ್ಮ ತಮ್ಮನ ನೇಣು ಬಿಗಿದಿರುವ ಮರದಲ್ಲಿ ಕಣ್ಣಾರೆ ಕಾಣಬಹುದು. ಅದು ಕೊಲೆಯೋ ಆತ್ಮಹತ್ಯೆಯೋ ಎಂದು ಈ ಅಧಿಕಾರಿಗಳು ಏಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನಮಗೆ ಅರ್ಥವಾಗುತ್ತಿಲ್ಲ.  ನಮ್ಮ ತಮ್ಮನ ಕೊಲೆಗೆ ಕಾರಣರಾದ ನಮ್ಮ ಚಿಕ್ಕಪ್ಪ ನರಸಿಂಹಯ್ಯ ,ಅದೇ ಗ್ರಾಮದವರಾದ ಗೌರಮ್ಮ ಗಂಗರಾಜು ಮೂರ್ತಿ ಶಿವರಾಜ್ ಪುನೀತ್  ಇವರುಗಳೇ ನನ್ನ…

Read More

ಪಾವಗಡ: ತಾಲ್ಲೂಕು ನಿಡಗಲು ಹೋಬಳಿಯ ವಾಪ್ತಿಯಲಿ ಬರುವ ಚನ್ನಕೇಶವಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚನ್ನಕೇಶವಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿಯ ದೊಡ್ಡ ತೇರು ಉತ್ಸವ ಬಹಳ ಅದ್ದೂರಿಯಾಗಿ ಜಾತ್ರಾ  ಮಹೋತ್ಸವ ನಡೆಯಿತು.  ಈ ಜಾತ್ರೆಯ ವಿಶೇಷವೇನೆಂದರೆ. ಪ್ರತಿವರ್ಷವೂ ಅಕ್ಕಪಕ್ಕದ ಗ್ರಾಮಸ್ಥರು ಈ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಹಾಗೂ   ಬಂದಿರುವಂತಹ ಭಕ್ತಾದಿಗಳಿಗೆ ಮಜ್ಜಿಗೆ. ಪಾನಕ. ಹೆಸರುಬೇಳೆ ಅನ್ನ ದಾಸೋಹ. ಪ್ರಸಾದವಾಗಿ ಭಕ್ತಾದಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವೆಂಕಟಭೀಮ ರಾವ್  ವಂಶಸ್ಥರು ಆದಂತಹ  ಸಿ.ಎನ್ ಆನಂದರಾವ್. ಗೋಪಾಲ್ ರಾವ್. ಮಾಜಿ ಪುರಸಭೆ ಅಧ್ಯಕ್ಷರು ಮಾನಂ ವೆಂಕಟಸ್ವಾಮಿ. Dr.ವೆಂಕ್ರಾಮಯ್ಯ. ನಾಗರಾಜ ಸ್ವಾಮಿ .ಅಜಯ್ ನಾಗೇಶ್.  ಬಿಂದು ಮಾಧವ ರಾವ್. ಶೇಷಗಿರಿರಾವ್ ಮತ್ತು ಊರಿನ ಕೈವಾಡಸ್ಥರು. ಭಕ್ತಾದಿಗಳು ಪಾಲ್ಗೊಂಡಿದ್ದರು ವರದಿ :ದೇವರಹಟ್ಟಿ ನಾಗರಾಜ, ಪಾವಗಡ ತಾಲೂಕು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ನಂದಿಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಜಾತ್ರೋತ್ಸವ ನಡೆಯಿತು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸೋಮಶೇಖರ್ ಬಿ. ಜಾತ್ರೋತ್ಸವದಲ್ಲಿ ಭಾಗವಹಿಸಿ, ರಂಗನಾಥಸ್ವಾಮಿಯ ಗಂಗಾಪೂಜೆಗೆ ಪೂಜೆ ಸಲ್ಲಿಸಿದರು. ಬಳಿಕ ಪಟಾಕಿ ಹಚ್ಚುವ ಮೂಲಕ ಪಟಾಕಿ ಉತ್ಸವಕ್ಕೆ ಚಾಲನೆ ನೀಡಿದರು. ಶ್ರೀ ರಂಗನಾಥಸ್ವಾಮಿಯ ಜಾತ್ರೆ ಮಹೋತ್ಸವದ ಪಟಾಕಿ ಕಾರ್ಯಕ್ರಮವು ಸಹ ಹಲವಾರು ವಿಧವಿಧವಾದ ಬಣ್ಣಗಳ ಹರುಷದಿಂದ ಪಟಾಕಿ ಉತ್ಸವವು ಸಹ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀ ರಂಗನಾಥಸ್ವಾಮಿಯ ಪಟಾಕಿ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ನಂದಿಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮಂಡಳಿಯ ಅಧಿಕಾರಿಗಳು , ದೇವಸ್ಥಾನದ ಅರ್ಚಕರು ಸೋಮಶೇಖರ್ ಬಿ ಅವರಿಗೆ ದೇವಾಲಯದ ಸನ್ನಿಧಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ಸೋಮಶೇಖರ್ ಅವರು ಇದೇ ವೇಳೆ ನಮ್ಮತುಮಕೂರು ಜೊತೆಗೆ ಮಾತನಾಡಿ, ರಂಗನಾಥ ಸ್ವಾಮಿ ದೇವರ ದರ್ಶನ ಪಡೆದುಕೊಂಡಿದ್ದು ನಿಜಕ್ಕೂ ನನ್ನ ಸೌಭಾಗ್ಯ. ಅದಲ್ಲದೇ ಇಂದು ಈ ರಂಗನಾಥಸ್ವಾಮಿ…

Read More

ಗುಬ್ಬಿ: ಸಮಸ್ಯೆಗಳ ಅರ್ಜಿ ನೀಡುವ ಮುಗ್ದ ಜನರಿಗೆ ನಿಮ್ಮ ಹಂತದಲ್ಲಿ ಇತ್ಯರ್ಥವಾಗದ ಬಗ್ಗೆ ಮಾಹಿತಿ ನೀಡಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಈ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾಡಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸಲಹೆ ನೀಡಿದರು. ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹು ನಿರೀಕ್ಷೆಯ ಈ ಕಾರ್ಯಕ್ರಮ ಯಶಸ್ಸು ಕಾಣಲು ಮೊದಲು ರೈತರ ಅರ್ಜಿಗೆ ಸ್ಥಳದಲ್ಲೇ ಪರಿಹಾರ ಕೊಡಬೇಕು. ನಿಗದಿತ 30 ದಿನದಲ್ಲಿ ಸಾರ್ವಜನಿಕ ಕೆಲಸ ಮಾಡಲೇಬೇಕು ಎಂದರು. ಹಿಂದೆ ಸರ್ಕಾರಿ ಕಾರ್ಯಕ್ರಮ ಯಶಸ್ವಿ ಸಾಧಿಸುವಲ್ಲಿ ವಿಫಲವಾದ ನಿದರ್ಶನವಿದೆ. ಇಡೀ ತಾಲ್ಲೂಕು ಆಡಳಿತವೇ ಹಳ್ಳಿಯಲ್ಲಿ ವಾಸ್ತವ್ಯ ಹೂಡುವ ವೇದಿಕೆಯಲ್ಲಿ ಸಮಸ್ಯೆಗೆ ಉತ್ತರ ನೀಡಿ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕಾರ್ಯಕ್ರಮ ಸದ್ಬಳಕೆ ಮಾಡಿಕೊಂಡು ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದ ಅವರು ಈ ಹಿಂದೆ…

Read More

ಸರಗೂರು:  ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ.  ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ  ಎಂದು  ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಬೀಚನಹಳ್ಳಿಯಲ್ಲಿ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ, ಕಬಿನಿ, ಕೃಷ್ಣ ಸೇರಿದಂತೆ ಬಹುತೇಕ ಅಂತಾರಾಜ್ಯ ನದಿಗಳ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಅಂತ  ನಾನು ರಾಜ್ಯಸಭೆಯಲ್ಲಿ ಕೈಮುಗಿದು ಮನವಿ ಮಾಡಿದೆ. ಯಾವ ಪಕ್ಷದವರೂ ಸಹಕಾರ ಕೊಡಲಿಲ್ಲ.  ನಮ್ಮದು ಪ್ರಾದೇಶಿಕ ಪಕ್ಷ.  ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ.  ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು  ಬೀಚನಹಳ್ಳಿಯಲ್ಲಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದರು. ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳೂ ಒಂದಾಗುತ್ತವೆ.  ಆದರೆ ನಮ್ಮ ರಾಜ್ಯದಲ್ಲಿ ಯಾರೂ ಒಂದಾಗಲ್ಲ.  ಪಂಚ ರತ್ನ, ಮಹದಾಯಿ ಸಾಕಷ್ಟು ನೋವಿದೆ. ಜಲ ಸಂಪನ್ಮೂಲ ಸಚಿವರು ನನಗೆ ಮೂರು ಬಾರಿ ಅಪಾಯಿಂಟ್ಮೆಂಟ್ ಕೊಟ್ಟರು. ಮನೆಗೆ ಹೋದಾಗ ಚಕ್ಕರ್ ಎಂದು ಅವರು ಹೇಳಿದರು. ಪರ್ಸೆಂಟೇಜ್ ಚರ್ಚೆ…

Read More

ಸರಗೂರು: ತಾಲ್ಲೂಕಿನ ಕಂದಲಿಕೆ ಹೋಬಳಿಯ ಬೆದ್ದಲಪುರ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಚಲುವರಾಜು,  ಸಭೆಯಲ್ಲಿ ತಿಳಿಸಲಾದ ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲಾಗುವುದು ಉಳಿದಂತೆ ದುರಸ್ಥಿ, ಒತ್ತುವರಿ ತೆರವು, ಓಣಿ ಬಿಡುಸುವ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಸೂಚಿಸಿ ಅವರ ಸಹಕಾರದಿಂದ ಆದಷ್ಟು ಬೇಗ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಸರಗೂರು ವ್ಯಾಪ್ತಿಯ 3 ಭಾಗಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ನಡೆಸಿ ಆ ಭಾಗಗಳ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುತಿದೆ.  ಇದು ನಾಲ್ಕನೇ ಕಾರ್ಯಕ್ರಮ ಇಲ್ಲಿಯೂ ಸಹ ಜನರ ಸಮಸ್ಯೆಗಳನ್ನು ಇಲ್ಲೇ ಬಗೆಹರಿಸುವ ಪ್ರಯತ್ನ ಮಾಡಲಾಗುವುದು, ಉಳಿದ ಸಮಸ್ಯೆಗಳನ್ನು ನಿಗದಿತ ಕಾಲಕ್ಕನುಸಾರವಾಗಿ ಬಗೆಹರಿಸಲಾಗುವುದು ಎಂದರು. ಇದೇ ವೇಳೆ ಗ್ರಾಮದ ಕರೀಗೌಡ, ಸೋಮಣ್ಣ ಸೇರಿದಂತೆ ಹಲವು ಗ್ರಾಮಸ್ಥರು ಗ್ರಾಮದಲ್ಲಿ ಕಾಡಾನೆಗಳ ಆವಳಿ ಹೆಚ್ಚಾಗಿದೆ, ರಸ್ತೆಗಳ ಸರಿಯಾಗಿಲ್ಲ ಜೊತೆಗೆ ನೂರಾರು ಎಕರೆಯಷ್ಟು ಜಮೀನುಗಳು ಸಾಗುವಳಿ, ದುರಸ್ಥಿಯಾಗಬೇಕು, ಅಲ್ಲದೇ ರೈತರು ಸಾಕಷ್ಟು…

Read More

ಮಧುಗಿರಿ: ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ವಿಶೇಷವಾಗಿ ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದಲ್ಲಿ ಅದ್ದೂರಿಯಿಂದ ಜಾತ್ರೆಯ ಸಡಗರದ ಸಂಭ್ರಮವೂ ಆಚರಣೆ ನಡೆಯಿತು. ಡೊಳ್ಳುಕುಣಿತ ಗಳಿಂದ ಶ್ರೀ ಲಕ್ಷ್ಮೀ ರಂಗನಾಥನ ಬ್ರಹ್ಮರಥೋತ್ಸವದ ಮೆರವಣಿಗೆ ಅದ್ದೂರಿಯಿಂದ ಜರುಗಿತು ದೊಡ್ಡೇರಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರುಗಳು ಯುವಕರು ಹಿರಿಯರು ಶ್ರೀ ಲಕ್ಷ್ಮೀ ರಂಗನಾಥನ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು. ಸ್ವಾಮಿಯ ರಥದ ಮೇಲೆ ಗರುಡನ ಪ್ರತ್ಯಕ್ಷ ರಂಗನಾಥ ಸ್ವಾಮಿಯ ಭಕ್ತರು ಕಣ್ತುಂಬಿಕೊಂಡರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಬಾಗಲಕೋಟೆ: ಕೋಮು ಪ್ರಚೋದಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲೆ ವತಿಯಿಂದ  ಸಲ್ಲಿಸಲಾಯಿತು. ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳ ಘಟನೆಯನ್ನು ರಾಷ್ಟ್ರಪತಿಯವರರ ಗಮನಕ್ಕೆ ತರಲು ನಾವು ಬಯಸುತ್ತೇವೆ ಎಂದು ಸಂಘಟನೆ ತಿಳಿಸಿದೆ. ಕೆಲವು ವರ್ಗಗಳು ಧಾರ್ಮಿಕ ಸಮಾರಂಭಗಳನ್ನು ಹಿಂಸಾತ್ಮಕವಾಗಿ ಪರಿವರ್ತಿಸಲು ಸಂಘಟಿತ ಪ್ರಯತ್ನಗಳನ್ನು ನಡೆಸಿದಂತೆ ತೋಚುತ್ತಿದೆ ಎಂದು ಸಂಘಟನೆ ತಿಳಿಸಿದೆ. ದೇಶದಲ್ಲಿ ನೂರಾರು ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳು ನಡೆಯುತ್ತಿದ್ದು, ಎಂದಿನಂತೆ ಅವು ಶಾಂತಿಯುತವಾಗಿ ಮುಕ್ತಾಯಗೊಳ್ಳುತ್ತವೆ. ಸಾಂಪ್ರದಾಯಿಕವಾಗಿ ಇಂತಹ ಘಟನೆಗಳನ್ನು ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಅವಕಾಶಗಳಾಗಬೇಕು ಎಂದು ಮನವಿ ಮಾಡಿದ್ದಾರೆ. ವರದಿ: ಬಂದೇನವಾಜ ನದಾಫ್,  ಬಾಗಲಕೋಟ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೇನಾಯಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತೋವಿನಕೆರೆ ಇವರ ಸಂಯುಕ್ತಶ್ರಯದಲ್ಲಿ ಆರೋಗ್ಯ ಮತ್ತು ಕ್ಷೇಮ ದಿನ ಹಾಗೂ ಯೋಗ ದಿನಾಚರಣೆಯನ್ನ ಆಚರಿಸಲಾಯಿತು. ಈ ಸಂದರ್ಭದಲ್ಲಿ ತೋವಿನಕೆರೆಯ ಪ್ರಾಥಮಿಕ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ದಿನೇಶ್ ಮಾತನಾಡಿ,  ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸೇವೆಗಳ ಸೌಲಭ್ಯ ಮತ್ತು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಅ ಆಯುಷ್ಮನ್ ಭಾರತ್ ಆರೋಗ್ಯ ಕರ್ನಾಟಕದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ನಂತರ ಮಾತನಾಡಿದ ಆರೋಗ್ಯ ರಕ್ಷಕಿ ಕವಿತಾ ಆರೋಗ್ಯ ಮತ್ತು ಕ್ಷೇಮ ಕೇಂದ್ರವು ಗ್ರಾಮದ ಜನರ ಆರೋಗ್ಯದ ಬಗ್ಗೆ ಕರ್ತವ್ಯ ನಿರ್ವಹಿಸುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು ಆದ್ದರಿಂದ ಗ್ರಾಮದ ಎಲ್ಲರೂ ಈ ಒಂದು ಅವಕಾಶವನ್ನ ಪಡೆದುಕೊಂಡು ಆರೋಗ್ಯವಾಗಿರಿ ಎಂದು ಸಲಹೆ ನೀಡಿದರು.…

Read More

ಬಾಗಲಕೋಟ: ಜಿಲ್ಲೆಯ ಮುಧೋಳ ತಾಲೂಕಿನ ರಂಜಣಗಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ  131ನೇ ಜಯಂತೋತ್ಸವ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ  115ನೇ ಜಯಂತಿ ಪ್ರಯುಕ್ತ ಜನತಾ ಸುಲ್ತಾನ್ ಬೇಪಾರಿ ಬ್ರದರ್ಸ್ ಮತ್ತು ಭೀಮ್ ಆರ್ಮಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಉಚಿತ ಕಣ್ಣಿನ ಆಪರೇಷನ್ ಹಾಗೂ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ ಬಿಸಿ ಊಟ ಕಾರ್ಯಕರ್ತರಿಗೆ, ವೀರ ಯೋಧರಿಗೆ , ಪಂಚಾಯತಿ ಸಿಬ್ಬಂದಿಗೆ ,ಲ ವಿವಿಧ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿ ಅಭಿನಂದನೆ ಕೋರಲಾಯಿತು. ಸುರೇಶ್ ಕುಂಬಾರ ಮತ್ತು ಬಸು ಹೂಗಾರ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ದಿವ್ಯ ಸಾನಿಧ್ಯ ವಹಿಸಿಕೊಂಡಿರುವ ಬಾಳಪ್ಪ ಶಿರೋಳ ಮಾತನಾಡಿ,  ಬಾಬಾಸಾಹೇಬ ಅಂಬೇಡ್ಕರ್ ಅವರು ವ್ಯಕ್ತಿ ಅಲ್ಲ. ಅವರು ಒಂದು ದೊಡ್ಡ ಶಕ್ತಿ. ಆಗಿನ ಕಾಲದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಲು ಭಗವಂತನೇ ಅಂಬೇಡ್ಕರ್ ರೂಪದಲ್ಲಿ ಹುಟ್ಟಿ ಬಂದರೆಂದು ತಿಳಿಸಿದರು. ಉಪನ್ಯಾಸ ನೀಡಿದ ಶ್ರೀನಿವಾಸ್ ದಾಸರ,   ಅಂಬೇಡ್ಕರ್…

Read More