Author: admin

ತುಮಕೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ತುಮಕೂರು ದಸರಾ ಪ್ರಯುಕ್ತ ಆಯೋಜಿಸಿದ್ದ ‘ಪಂಜಿನ ಕವಾಯತು’ ದಸರಾದ ವೈಭವ ಹೆಚ್ಚಿಸಿತು. ಎನ್‌ಸಿಸಿ, ಎನ್‌ಎಸ್‌ಎಸ್, ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಾಹಸಕ್ಕೆ ಸಾವಿರಾರು ಜನ ಸಾಕ್ಷಿಯಾದರು. ನೂರಾರು ವಿದ್ಯಾರ್ಥಿಗಳು ಸಾಲಾಗಿ ನಿಂತು ಬೆಂಕಿಯ ಜತೆಗೆ ಆಟವಾಡುತ್ತಿದ್ದಂತೆ ಭಾಸವಾಯಿತು. ನೂರಾರು ಬೆಂಕಿ ಪಂಜುಗಳನ್ನು ಬಳಸಿ ‘ತುಮಕೂರು’, ‘ದಸರಾ-2025’, ‘ಥ್ಯಾಂಕ್ಯೂ’, ‘ವೆಲ್‌ ಕಮ್ ಟು ಆಲ್’ ಎಂಬ ಇಂಗ್ಲಿಷ್ ಪದದ ಕಲಾಕೃತಿ ಅರಳಿಸಿದರು. ಬೆಂಕಿ ಹಿಡಿದು ಧೈರ್ಯದಿಂದ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿಗಳು ವೀಕ್ಷಕರಲ್ಲಿ ಬೆರಗು ಮೂಡಿಸಿದರು. ಜಿಲ್ಲೆಯ ಜನತೆಯ ಎದುರಿಗೆ ವಿಸ್ಮಯ ಲೋಕ ತೆರೆದಿಟ್ಟರು. ಇಡೀ ದಸರಾಗೆ ಮೆರುಗು ತಂದರು. ಸಂಜೆ 7 ಗಂಟೆಗೆ ಸರಿಯಾಗಿ ಶುರುವಾದ ಕವಾಯತು ಸುಮಾರು 25 ನಿಮಿಷಗಳ ಕಾಲ ನಡೆಯಿತು. 256 ಜನರಲ್ಲಿ 160 ಮಂದಿ ವಿದ್ಯಾರ್ಥಿನಿಯರೇ ಇದ್ದರು. ಯಾವುದೇ ಅಳುಕಿಲ್ಲದೆ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸಾಹಸ ದೃಶ್ಯಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಎರಡು ತಿಂಗಳ ನಿರಂತರ ತಯಾರಿ ಫಲ ನೀಡಿತು.…

Read More

ಕೊರಟಗೆರೆ: ತಾಲೂಕಿಗೆ ನೀಡಲಾಗಿರುವ ತುರ್ತು ಪೊಲೀಸ್ ವಾಹನ 112 ಪದೇ ಪದೇ ದಾರಿಯಲ್ಲಿ ಕೆಟ್ಟು ನಿಲ್ಲುತ್ತಿದ್ದು, ಇದು ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ರಾತ್ರಿ ತುರ್ತು ಕರೆ ಬಂದಾಗ ಪೊಲೀಸರು ತೆರಳುವ ವೇಳೆ ಪೊಲೀಸ್ ಜೀಪ್ ಕೆಟ್ಟು ನಿಂತಿರುವ ಹಲವು ಉದಾಹರಣೆಗಳಿವೆ. ಜೊತೆಗೆ ರಾತ್ರಿ ಯಾರಾದರೂ ತುರ್ತು ಕರೆ ಮಾಡಿದರೆ, ಜೀಪು ಸ್ಟಾರ್ಟ್ ಆಗುತ್ತೋ, ಇಲ್ಲವೋ ಎಂದು ಸಿಬ್ಬಂದಿ ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ. ಕೆಟ್ಟು ನಿಂತಾಗ ಸಿಬ್ಬಂದಿಯೇ ಸಾರ್ವಜನಿಕರ ಸಹಾಯದಿಂದ ವಾಹನ ತಳ್ಳಿಸಿಕೊಂಡು ಹೋಗಬೇಕಾದ ಸನ್ನಿವೇಶ ಸಾಮಾನ್ಯವಾಗಿದೆ, ಜನರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ತುರ್ತಾಗಿ ಕರೆ ಬಂದ ಸ್ಥಳಕ್ಕೆ ತಲುಪುವಾಗಲೇ ಜೀಪ್ ಒಮ್ಮೊಮ್ಮೆ ಕೈಕೊಡುತ್ತದೆ. ಇದರಿಂದ ಸಮಸ್ಯೆಯಾಗುತ್ತಲೇ ಇದೆ  ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಿದ್ದಾರೆ. ಈ ವಾಹನಗಳನ್ನು ಸ್ಥಳೀಯ ವರ್ಕ್ ಷಾಪ್‌ ಗಳಲ್ಲಿ ದುರಸ್ತಿ ಮಾಡಲಾಗುತ್ತಿದೆಯೊ ತಿಳಿಯದು. ಆದರೆ ಮೆಕ್ಯಾನಿಕ್‌ ಗಳು ಬಂದು ಸರಿಪಡಿಸಿದರೂ ಈ ಜೀಪ್‌ ಗಳು ಸ್ಥಿರವಾಗಿ ಕೆಲಸ ಮಾಡುವುದಿಲ್ಲ ಎಂದು…

Read More

ತುಮಕೂರು: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ತರಗತಿ ಬಹಿಷ್ಕಾರಿಸಿದರು. ಎಐಡಿಎಸ್‌ ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ತರಗತಿಯಿಂದ ದೂರ ಉಳಿದರು. ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಕಾಲೇಜುಗಳಲ್ಲಿ ತರಗತಿ ಪೂರ್ಣಗೊಳಿಸಿ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಕನಿಷ್ಠ ಉಪನ್ಯಾಸಕರ ನೇಮಕವಾಗಿಲ್ಲ. ವಿದ್ಯಾರ್ಥಿಗಳು 30ರಿಂದ 40 ಕಿ.ಮೀ ಪ್ರಯಾಣಿಸಿ ಕಾಲೇಜಿಗೆ ಬರುತ್ತಿದ್ದಾರೆ. ತರಗತಿಗಳು ನಡೆಯದೆ ಮನೆಗೆ ಮರಳುತ್ತಿದ್ದಾರೆ’ ಎಂದು ಎಐಡಿಎಸ್‌ ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ ಹೇಳಿದರು. ಸರ್ಕಾರ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಒಂದೂ ತರಗತಿ ನಡೆಯದಿದ್ದರೂ ವಿ.ವಿಗಳು ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ, ಶುಲ್ಕ ಪಾವತಿಯ ಸುತ್ತೋಲೆ ಹೊರಡಿಸಿರುವುದು ಖಂಡನೀಯ. ತರಗತಿ ನಡೆಸದೆ ಪರೀಕ್ಷೆ ಮಾಡಬಾರದು ಎಂದು ಆಗ್ರಹಿಸಿದರು. ಎಐಡಿಎಸ್‌ ಒ ಸದಸ್ಯರಾದ ಭರತ್‌, ವೃಷಭ, ಸೈಯದ್, ಪುನೀತ್, ರೋಜಾ ಮತ್ತು ರಕ್ಷಿತಾ…

Read More

ತಿಪಟೂರು: ತಾಲ್ಲೂಕಿನ ಸಾರ್ಥವಳ್ಳಿ ವಲಯದ ಹಾಲೇನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾರತಾಂಬೆ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಯೋಜನಾಧಿಕಾರಿ ಉದಯ್, ಭಾರತಾಂಬೆ ತಂಡವು ತಾಲ್ಲೂಕಿನಲ್ಲಿ ಯೋಜನೆಯ ನಿಯಮಾನುಸಾರ ಕ್ರಮವತ್ತಾಗಿ ಶಿಸ್ತಿನಿಂದ ಸಂಘಟನೆ ಮಾಡುತ್ತಿದ್ದು, ತಾಲ್ಲೂಕಿಗೆ ಮಾದರಿ ಸಂಘವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಳೆದ ಐದು ವರ್ಷದಲ್ಲಿ 64 ಸಾವಿರ ಉಳಿತಾಯ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ರೂ. 10 ಲಕ್ಷಕ್ಕೂ ಮೀರಿ ಆರ್ಥಿಕ ವ್ಯವಹಾರ ಮಾಡಿರುವುದು ಶ್ಲಾಘನೀಯ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೇವಲ ರೂ. 107 ಶುಲ್ಕದೊಂದಿಗೆ ಪಾನ್ ಕಾರ್ಡ್ ಮಾಡಿಸುವುದು ವಿಶೇಷವಾಗಿ ಯೋಜನೆಯಿಂದ ಸಂಪೂರ್ಣ ಉಚಿತವಾಗಿ ಆಯುಷ್ಮಾನ್ ಕಾರ್ಡ್, ಈ–ಶ್ರಮ್, ವಿಶ್ವಕರ್ಮ ಯೋಜನೆಯಿದ್ದು ಜೊತೆಯಲ್ಲಿ ಪಾಲುದಾರರ ಮಕ್ಕಳು ವೃತ್ತಿಪರ ಕೋರ್ಸ್ ಮಾಡುತ್ತಿದ್ದರೆ ಸುಜ್ಞಾನ ನಿಧಿ ಶಿಷ್ಯವೇತನದ ಅವಕಾಶವಿದ್ದು ಪ್ರಯೋಜನವನ್ನು ಪಡೆದುಕೊಳ್ಳುವ ಬಗ್ಗೆ ಕರೆ ನೀಡಿದರು. ಭಾರತಾಂಬೆ ತಂಡವು ಭವಿಷ್ಯದ ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಪಟ್ಟಣದಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ವಿಗ್ರಹ ಅನಾವರಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜನಪ್ರತಿನಿಧಿಗಳು ಹಾಗೂ ವಾಲ್ಮೀಕಿ ಸಮುದಾಯದ ಗಣ್ಯರು ಭಾಗವಹಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ವಹಿಸಿದ್ದರು.  ಮಾಜಿ ಸಚಿವ ಬಳ್ಳಾರಿ ಶ್ರೀರಾಮುಲು ಅವರು ಮಾತನಾಡಿ, “ವಾಲ್ಮೀಕಿ ಸಮುದಾಯದವರು ಪಕ್ಷಾತೀತವಾಗಿ ಸಮಾಜದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅಭಿವೃದ್ಧಿಗೆ ಒತ್ತುಕೊಡಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು” ಎಂದು ಕರೆ ನೀಡಿದರು. ಮಾಜಿ ಸಚಿವ ಹಾಗೂ ಹಾಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು, “ವಾಲ್ಮೀಕಿ ಸಮಾಜದಲ್ಲಿ ನಾಯಕತ್ವ ಹುಟ್ಟಿನಿಂದಲೇ ಇದೆ. ಆದರೆ ಜನರನ್ನು ಆಳುವಂತಹ ನಾಯಕರಾಗಲು ಶಿಕ್ಷಣವೇ ಪ್ರಮುಖ ಆಯುಧ. ಪ್ರತಿಯೊಬ್ಬರೂ ವಿದ್ಯಾಭ್ಯಾಸದಲ್ಲಿ ಶ್ರಮಿಸಬೇಕು” ಎಂದು ಸಲಹೆ ನೀಡಿದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, “ವಾಲ್ಮೀಕಿ ಸಮಾಜವು ಎಲ್ಲಾ ಸಮುದಾಯಗಳಂತೆ ಉತ್ತಮ ಸ್ಥಾನಕ್ಕೆ ಬೆಳೆಯಬೇಕು. ಯಾವುದೇ ದ್ವೇಷದ ಕೆಲಸಕ್ಕೆ ಮುಂದಾಗದೆ ಸಾಮರಸ್ಯದಿಂದ ನಡೆದುಕೊಳ್ಳಬೇಕು. ವಾಲ್ಮೀಕಿ…

Read More

ನಾನು ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಆತ್ಮಗಳಿಗೆ ಸಂಬಂಧಿಸಿದಂತೆ ಯಾವ ಲೇಖನವನ್ನೂ ಓದಿರುವುದಿಲ್ಲ ಎಂದು ಸ್ಪಷ್ಟೀಕರಣ ಮಾಡುತ್ತಾ ಪ್ರಾರಂಭಿಸುತ್ತೇನೆ. ಒಂದು ವೇಳೆ ನನ್ನ ಈ ಲೇಖನದ ಯಾವುದಾದರೂ ಒಂದು ಅಂಶ ಈ ಹಿಂದಿನ ಯಾರದಾದರೂ ಲೇಖನಕ್ಕೆ ಸಂಬಂಧಪಟ್ಟಿರುವುದು ಕಂಡುಬಂದರೆ ಅದು ಕಾಕತಾಳಿಯವಾಗಿರುತ್ತದೆ. ವೈಯಕ್ತಿಕವಾಗಿ ತಿಳಿದಿರುವಂತೆ ನಾನು ಆತ್ಮಗಳಿಗೆ ಸಂಬಂಧಿಸಿದಂತೆ ನಮ್ಮ ಹಿರಿಯರು ಕೆಲವು ಸಂದರ್ಭಗಳಲ್ಲಿ ದೆವ್ವ ಎಂತಲೂ ಕರೆದಿದ್ದಾರೆ, ಇದಕ್ಕೆ ಅವರು ಕೊಡುತ್ತಿದ್ದ ಕಾರಣ ಯಾರಾದರೂ ಬದುಕಿನಲ್ಲಿ ತಮ್ಮದೇ ಕೆಲವು/ಹಲವು ಆಸೆಗಳನ್ನು ಇಟ್ಟುಕೊಂಡು ಆಯಸ್ಸು ತುಂಬುವ ಮೊದಲು ಯಾವುದಾದರೂ ಕಾರಣಕ್ಕೆ, ಅದು ಆತ್ಮಹತ್ಯೆಯಾಗಿರಲೂ ಬಹುದು ಅಥವಾ ಯಾರಿಂದಲಾದರೂ ಸಾವು ಸಂಭವಿಸರಲೂ ಬಹುದು ಈ ಕಾರಣಗಳಿಂದ ಅಸುನೀಗಿದರೆ ಅವರು ಬದುಕಿ ಉಳಿದಿರುವಷ್ಟು ಕಾಲ ಅಸುನೀಗಿದ ಸಮಯದಿಂದ ದೆವ್ವವಾಗಿ (ಅಂತರ ಪಿಶಾಚಿ) ಉಳಿದ ಆಯಸ್ಸನ್ನು ಕಳೆಯಬೇಕಾಗುತ್ತದೆ ಎಂದು ಹೇಳುತ್ತಿದ್ದರು. ನಂತರ ಪುನರ್ಜನ್ಮೋ ಅಥವಾ ಅವರ ಪಾಪದ ಕರ್ಮದನಿಮಿತ್ತ ನರಕವಾಸ ಅಥವಾ ಬೇರೊಂದು ಜೀವಿಯಾಗಿ ಹುಟ್ಟಿ ಶಿಕ್ಷೆ ಅನುಭವಿಸಬೇಕು ಎಂದು ಹಲವು ಸಂದರ್ಭಗಳಲ್ಲಿ…

Read More

ಔರಾದ: ಬೀದರ್ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬೋಸ್ಕೋ ಬೆಂಗಳೂರು ಹಾಗೂ ಡಾನ್ ಬೋಸ್ಕೋ ಬೀದರ್  ಇವರ ಸಂಯುಕ್ತ ಆಶ್ರಯದಲ್ಲಿ ಪೋಷಕತ್ವ ಯೋಜನೆಯಡಿಯಲ್ಲಿ  ಪಾಲನೆ–ಪೋಷಣೆಯಿಂದ ವಂಚಿತರಾದ ಮಕ್ಕಳಿಗೆ ಸೂಕ್ತ ಪರಿವಾರದ ವ್ಯವಸ್ಥೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಇದರಿಂದ ಮಕ್ಕಳು ಮಾನಸಿಕ, ದೈಹಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಡಾನ್ ಬೋಸ್ಕೋ  ಬೀದರ್ ಸಂಸ್ಥೆಯ ಪೋಷಕತ್ವ ಯೋಜನೆ ಜಿಲ್ಲಾ ಸಂಯೋಜಕರಾದ ರಮೇಶ್ ಸೂರ್ಯವಂಶಿ ಹೇಳಿದರು. ಶುಕ್ರವಾರ, ತಾಲೂಕಿನ ಸಂತಪೂರ  ಗ್ರಾಮದ ದೀಪಾಲಯ ಸಮಾಜ ಸೇವಾ ಸಂಸ್ಥೆಯಲ್ಲಿ  ದೀಪಾಲಯ ಸಮಾಜ ಸೇವಾ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತರು ಮತ್ತು ಆರ್ಬಿಟ್ ಸಂಸ್ಥೆಯ ಔರಾದ ತಾಲೂಕಿನ ಸಾಮಾಜಿಕ ಕಾರ್ಯಕರ್ತರು ಜಂಟಿಯಾಗಿ ಪೋಷಕತ್ವ ಯೋಜನೆ ಜಾಗೃತಿ ತರಬೇತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಈ ಸಭೆಯಲ್ಲಿ ಪೋಷಕತ್ವ ಯೋಜನೆ ಕುರಿತು ಕುಲಂಕುಶವಾಗಿ ಮಾಹಿತಿಯನ್ನು ನೀಡಲಾಯಿತು. ಪೋಷಕತ್ವ ಯೋಜನೆಯ ಲಾಭ ಅರ್ಹ ಮಕ್ಕಳಿಗೆ ದೊರೆಯಬೇಕಾದರೆ ಸ್ವಯಂ ಸೇವಾ  ಸಂಸ್ಥೆಗಳ ಪಾಲುದಾರಿಕೆ ಬಹು ಮುಖ್ಯವಾಗಿದೆ ಮತ್ತು ತಾವು ತಮ್ಮ ತಮ್ಮ…

Read More

ಸರಗೂರು:  ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಎಸ್ ವಿವೈಎಂ ಸಂಸ್ಥೆ ಉತ್ತಮ ಅವಕಾಶ ಮಾಡಿದ್ದಾರೆ ಎಂದು ಜೆಎಸ್ಎಸ್ ವಿದ್ಯಾ ಸಂಸ್ಥೆಗಳ ಹಾಗೂ ಮೃತ್ಯುಂಜಯಪ್ಪ ಟ್ರಸ್ಟ್ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಹೇಳಿದರು. ಪಟ್ಟಣದ ವಿವೇಕಾನಂದರ ಯೂತ್ ಮೂವ್ ಮೆಂಟ್ ಆಸ್ಪತ್ರೆ ಆವರಣದಲ್ಲಿ ಶನಿವಾರದಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆ ಮತ್ತು ವರ್ತಕ ಮಂಡಳಿ ಸರಗೂರು ಲಯನ್ ಕ್ಲಬ್ ಆಫ್ ಸರಗೂರು, ನೋಟರಿ ಕ್ಲಬ್ ಎಚ್.ಡಿ.ಕೋಟೆ, ಜೈನ್ ಮಿಲನ್ ಸರಗೂರು, ರಾಜಸ್ಥಾನ ಸಂಘ‌, ಲಯನ್ಸ್ ಕ್ಲಬ್,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಬೇಕು. ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಎಂದರು. ಅಧುನಿಕ ಜೀವನಶೈಲಿ, ಆಹಾರ ಪದ್ಧತಿ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು, ಆಗಾಗ ನಿಯಮಿತ ರೋಗ ತಪಾಸಣೆಯಿಂದ ಆರೋಗ್ಯಮಯ…

Read More

ವೈ.ಎನ್.ಹೊಸಕೋಟೆ: ಹೋಬಳಿಯ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ  ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಪುಷ್ಪವತಿ ಶಿವಣ್ಣ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜುಳಾ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಏಕೈಕ ಮಾತ್ರ ನಾಮಪತ್ರ ಸಲ್ಲಿಸಿದ್ದ ಪುಷ್ಪವತಿ ಶಿವಣ್ಣ ಅವರನ್ನು  ಚುನಾವಣಾಧಿಕಾರಿ ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಉತ್ತಮ್ ರವರು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು. ಈ ವೇಳೆ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.  ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಾತಿ, ಸದಸ್ಯರಾದ ಜ್ಯೋತಿ ಆನಂದ್, ಶೈಲಜಾ, ರಾಮಾಂಜಿನೇಯ, ರವಿ, ಸುಬ್ಬಪ್ಪ, ಚನ್ನ ರೆಡ್ಡಿ, ನರಸಿಂಹಪ್ಪ, ರಾಮರಾಜು, ನಾಗರಾಜು, ರಾಮಾಂಜಿನಮ್ಮ, ಪಿಡಿಒ ಹನುಮಂತರಾಯಪ್ಪ, ಮಾಜಿ ತಾ.ಪಂ. ಸದಸ್ಯರಾದ ರಾಮಸ್ವಾಮಿ, ದಿವಾಕರಪ್ಪ, ಪೂಜಾರಿ ತಿಮ್ಮಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಹಾಲಿಂಗಪ್ಪ, ಮುಖಂಡರಾದ ಆನಂದ್ ಕುಮಾರ್, ಗಂಗಪ್ಪ, ರಾಮಾಂಜಿನೇಯ, ಸತ್ಯಪ್ಪ, ಜಯರಾಮ್, ಇಂದ್ರಬೆಟ್ಟ ಶ್ರೀನಿವಾಸ್, ಮತ್ತಿತರರು ಇದ್ದರು. ವರದಿ: ನಂದೀಶ್ ನಾಯ್ಕ,  ಪಾವಗಡ ನಮ್ಮತುಮಕೂರಿನ ಕ್ಷಣ…

Read More

ಪಾವಗಡ: ಪಾವಗಡದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳದಿಂದ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾ ಗಣಪತಿಯ ಶೋಭಯಾತ್ರೆಯನ್ನು ಸೆ.28ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಶ್ರೀರಾಮ ಸೇನೆ ಅಧ್ಯಕ್ಷ ಕಾವಲಗೆರೆ ರಾಮಾಂಜಿ ತಿಳಿಸಿದರು ಶುಕ್ರವಾರ ಅರಳಿಕಟ್ಟೆ ಗಣಪತಿ ಬಳಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 11 ಗಂಟೆಗೆ ಮಧುಗಿರಿ ಊರು ಬಾಗಿಲು ಸಮೀಪದ ಅರಳಿಕಟ್ಟೆಯಿಂದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ.  ಶೋಭಾಯಾತ್ರೆಯಲ್ಲಿ ಹಿಂದೂ ಫೈರ್ ಬ್ರಾಂಡ್ ಬಸನ ಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ, ಪಾವಗಡ ಶಾಸಕ ಎಚ್.ವಿ.ವೆಂಕಟೇಶ್, ಎಂಎಲ್ಸಿ ಸಿ.ಟಿ. ರವಿ, ಪ್ರತಾಪ್ ಸಿಂಹ, ನಿಖಿಲ್ ಕುಮಾರಸ್ವಾಮಿ, ಚಿದಾನಂದ್ ಎಂ ಗೌಡ, ಹಿಂದೂ ಮುಖಂಡ ಶರಣ್ ಪಂಪ್ವೆಲ್, ರಘು ಸಕಲೇಶಪುರ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳು ಭಾಗವಹಿಸಲಿವೆ ಜೊತೆಗೆ ಹತ್ತಕ್ಕೂ ಅಧಿಕ ಕಲಾತಂಡಗಳೊಂದಿಗೆ ವೈಭವ ಶೋಭಯಾತ್ರೆಯನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. ಬಜರಂಗದಳ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗುಪ್ತ ಮಾತನಾಡಿ, 28ರ ಭಾನುವಾರ ಬೆಳಗ್ಗೆ 11 ಗಂಟೆಯಿಂದ…

Read More