ತುಮಕೂರು: ಪಹಲ್ಗಾಮ್ ಘಟನೆಯನ್ನು ಒಂದು ಲಾಜಿಕಲ್ ಎಂಡ್ ಗೆ ತರುವ ನಿಟ್ಟಿನಲ್ಲಿ ದೇಶದ ಸ್ಥಿರತೆ, ಅಭ್ಯುದಯ, ಒಗ್ಗಟ್ಟು, ಇಂತಹ ಕೆಟ್ಟ ಸಂದರ್ಭದಲ್ಲಿ ದೇಶದ ಜನತೆ ಒಗ್ಗಟ್ಟಾಗಿ ನಿಲ್ಲುವುದಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಭಾರತದ ಅಭಿವೃದ್ದಿ ಸಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ. ಇಂತಹ ಅಸ್ಥಿರತೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಅವರ ಭಾಷೆಯಲ್ಲಿಯೇ ಹೇಳಿದ್ದಾರೆ ಎಂದರು.
ಈಗಾಗಲೇ ಪಹಲ್ಗಾಮ್ ಬಗ್ಗೆ, ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ ದೇಶ ಇದ್ದರೆ ನಾವು ಎಂಬುದನ್ನು ನೋಡುತ್ತಿದ್ದೇವೆ. ಕೆಲ ಹೇಳಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅದಕ್ಕೆ ಬೆಲೆ ತೆತ್ತಬೇಕು. ದೇಶಕ್ಕಿಂತ ದೊಡ್ಡವರು ಸಿದ್ದರಾಮಯ್ಯ ಅಲ್ಲ. ಪ್ರಧಾನಿ ತೀರ್ಮಾನ ಅಂತಿಮವಾದುದಾಗಿದೆ ಅದರಂತೆ ಹೋಗುತ್ತದೆ ಎಂದರು.
ಮನ್ ಕಿ ಬಾತ್ ನಿಂದ ಬದುಕು ಅರ್ಥ ಪೂರ್ಣ!
ಮನ್ ಕಿ ಬಾತ್ ಸಾಮಾನ್ಯರಿಗೂ ಹೃಯದ ಸ್ಪರ್ಶಿ ಆಗಿ ಅರ್ಥವಾಗುತ್ತದೆ. ನಾವು ಅರ್ಧ ಗಂಟೆ ಮನ್ ಕಿ ಬಾತ್ ನೋಡಲು ಸಮಯ ಮೀಸಲಿಟ್ಟರೆ ಬದುಕನ್ನು ಅರ್ಥ ಪೂರ್ಣವಾಗಿ ರೂಪಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮಂತ್ರಿ ಮೋದಿ ಅವರ ದೂರದೃಷ್ಟಿಯ ಚಿಂತನೆಯು ಸಾಮಾನ್ಯರಲ್ಲಿ ಪ್ರತಿಭೆ ಇದೆ, ಹೇಗೆ ಅವರು ಬದುಕು ರೂಪಿಸಿಕೊಳ್ಳಬಹುದು ಎಂಬ ಬಗ್ಗೆ ಮನ್ ಕಿ ಬಾತ್ ನಲ್ಲಿ ತಿಳಿಸಿದ್ದಾರೆ.
ದೇಶದ ವೈವಿದ್ಯತೆಯ ತುಣುಕನ್ನು ಮನ ಕಿ ಬಾತ್ ನಲ್ಲಿ ತಿಳಿಸಿಕೊಟ್ಟಿದ್ದಾರೆ. ಅದ್ರಲ್ಲಿ ಇತ್ತೀಚೆಗೆ ನಡೆದ ಪಹಲ್ಗಾಮ್ ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಸಾಮಾನ್ಯ ರೈತ ಹೇಗೆ ಬದುಕನ್ನು ರೂಪಿಸಿಕೊಳ್ಳಬಹುದು ಎಂಬ ಬಗ್ಗೆ ಒಟ್ಟಾರೆ ಭವಿಷ್ಯದ ಭಾರತಕ್ಕೆ ಮೋದಿ ಕೊಡುಗೆ ಅಪಾರವಿದೆ ಎಂದರು.
ದೇಶ 140 ಕೋಟಿ ಜನರ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಮೋದಿ ಪದೇ ಪದೇ ಹೇಳುತ್ತಿದ್ದಾರೆ. ತುಳಿತಕ್ಕೆ ಒಳಪಟ್ಟ ಅನೇಕ ಸಮಾಜವನ್ನು ಮೇಲ್ಪಂಕ್ತಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW