ತುಮಕೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ಮಾಡಲು ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ವಿಚರಣ ಆಯೋಗ ನೀಡಿರುವ ಆದೇಶದಂತೆ ರಾಜ್ಯದಾದ್ಯಂತ ರಾಜ್ಯದಾದ್ಯಂತ ಪರಿಶಿಷ್ಟ ಜಾತಿಯ ಮನೆ ಮನೆ ಸಮೀಕ್ಷೆ ಮಾಡಿ ದತ್ತಾಂಶ ಒದಗಿಸಲು ನಿರ್ದೇಶನ ನೀಡಿದ್ದು ಇದಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಅವರು ತಿಳಿಸಿದರು.
ಈ ಕುರಿತಾಗಿ ಈಗಾಗಲೇ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣೆ ಅಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ದತ್ತಾಂಶ ಸಂಗ್ರಹಿಸಲು ಪರಿಣಿತ ಅಧಿಕಾರಿಗಳಿಗೆ ಈಗಾಗಲೇ ರಾಜ್ಯಮಟ್ಟದಲ್ಲಿ ತರಬೇತಿಯನ್ನು ನೀಡಲಾಗಿದ್ದು ಜಿಲ್ಲೆಯ ಅರ್ಹ ಗಣತಿದಾರ ಶಿಕ್ಷಕರ ಮೂಲಕ ದತ್ತಾಂಶ ಸಂಗ್ರಹಿಸುವ ಸಲುವಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಮಟ್ಟದಲ್ಲಿ ಇದೆ ತಿಂಗಳ 28ರಂದು ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಸುಮಾರು 150 ನುರಿತ ಅಧಿಕಾರಿಗಳಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಸಮಿಕ್ಷಾದಾರರಿಂದ ತರಬೇತಿ ನೀಡಲಾಗುತ್ತಿದ್ದು ಜಿಲ್ಲೆಯ ಅರ್ಹ ಪ್ರಾಂಶುಪಾಲರು, ಮುಖ್ಯ ಶಿಕ್ಷಕರನ್ನ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ತರಬೇತಿ ನಂತರ ಇದೇ ತಿಂಗಳ 29 ರಿಂದ 30ರವರೆಗೆ ತಾಲೂಕು ಮಟ್ಟದ ಬೂತ್ ವೈಸ್ ಮತಗಟ್ಟೆ ಗಣತಿ ದಾರರಿಗೆ ಅಥವಾ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದ್ದು ಮನೆ ಮನೆಗೆ ತೆರಳಿ ಪಾರದರ್ಶಕವಾಗಿ ಸಮೀಕ್ಷೆ ಮಾಡಲು ಉಪ ವಿಭಾಗಾಧಿಕಾರಿಗಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸೂಚನೆಗಳನ್ನು ಕೊಡಲಾಗುತ್ತಿದ್ದು ಈ ರೀತಿಯಲ್ಲಿ ಸಮೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತದೆ ಎಂದರು.
ದತ್ತಾಂಶ ಸಂಗ್ರಹಿಸಲು 3 ಹಂತದಲ್ಲಿ ಸಮೀಕ್ಷೆ;
ಮೊದಲನೇ ಹಂತದಲ್ಲಿ ಮೇ 5 ರಿಂದ ಮೇ 17ರ ವರೆಗೆ ಮನೆ ಮನೆಗೆ ತೆರಳಿ ಗಣತಿದಾರರು ವಾಸ್ತವವಾಗಿ ಇರುವ ಕುಟುಂಬದ ಸದಸ್ಯರನ್ನು ಖುದ್ದಾಗಿ ಭೇಟಿ ಮಾಡಿ ಉಪ ಜಾತಿಯನ್ನ ಕೇಳಿ ಮಾಹಿತಿ ಪಡೆಯಲಿದ್ದಾರೆ, ಇನ್ನು ಎರಡನೇ ಹಂತದಲ್ಲಿ ಮೊದಲನೇ ಹಂತದ ಸಮೀಕ್ಷೆ ವೇಳೆ ಇಲ್ಲದವರ ಮಾಹಿತಿಯನ್ನು ಮತಗಟ್ಟೆಯ ಕೇಂದ್ರ ಸ್ಥಾನ ಮೂರು ದಿನಗಳ ಕಾಲ ವಿಶೇಷ ಶಿಬಿರಗಳನ್ನ ಆ ಯೋಜನೆ ಮಾಡಲಾಗಿದ್ದು ಈ ವೇಳೆ ಮೊದಲನೇ ಹಂತದಲ್ಲಿ ಬಿಟ್ಟು ಹೋಗಿದ್ದ ಕುಟುಂಬಸ್ಥರು ಮಾಹಿತಿ ನೀಡಿ ತಮ್ಮ ಉಪಜಾತಿಯನ್ನು ನೋಂದಾಯಿಸಲು ಅವಕಾಶ ನೀಡಲಾಗುತ್ತಿದ್ದು ವಿಶೇಷ ಶಿಬಿರದಲ್ಲಿ ನಮ್ಮ ಗೆಣತಿದಾರರು ಸ್ಥಳದಲ್ಲಿಯೇ ಇರುತ್ತಾರೆ ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ ಉಪಜಾತಿಯನ್ನು ಹೇಳಿ ಬರಸಲು ಅವಕಾಶ ನೀಡಲಾಗಿದೆ, ಮೂರನೇ ಹಂತದಲ್ಲಿ ಸ್ವಯಂ ಘೋಷಣೆಯ ಮೂಲಕ ಸರ್ಕಾರ ರೂಪಿಸಿರುವ ಮೊಬೈಲ್ ಆಪ್ ನಲ್ಲಿ ಗಣತಿ ದಾರ ರಿಗೆ ತಮ್ಮ ಉಪಜಾತಿಗಳನ್ನ ಹೇಳಲು ಮುಜುಗರ ಪಡುವವರು ಆನ್ಲೈನ್ ನಲ್ಲೂ ಕೂಡ ತಮ್ಮ ಉಪಜಾತಿಯನ್ನು ನೋಂದಾಯಿಸಬಹುದು ಇದು ಸುಮಾರು ಐದು ದಿನಗಳ ಕಾಲದ ವರೆಗ ಅವಕಾಶ ಕಲ್ಪಿಸಲಾಗಿದ್ದು ಪರಿಶಿಷ್ಟ ಜಾತಿಯ ಸಮುದಾಯದವರು ಈ ಮೂಲಕ ತಮ್ಮ ಉಪಜಾತಿಯನ್ನು ಘೋಷಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಪರಿಶಿಷ್ಟ ಜಾತಿ ಸಮುದಾಯದ ದತ್ತಾಂಶವನ್ನು ಸಂಗ್ರಹಿಸಲು ಮೂರು ಹಂತದಲ್ಲಿ ಸರ್ಕಾರದ ನಿರ್ದೇಶನದಂತೆ ಗಣತಿದಾರರಿಗೆ ತರಬೇತಿಯನ್ನು ನೀಡಿ ಮನೆಮನೆ ಸಮೀಕ್ಷೆ ನಡೆಸಿ ಪಾರದರ್ಶಕವಾಗಿ ದತ್ತಾಂಶವನ್ನು ಸಂಗ್ರಹಿಸಲು ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದ್ದು ಇದಕ್ಕೆ ಪರಿಶಿಷ್ಟ ಜಾತಿಯ ಸಮುದಾಯದವರು ದಲಿತಪರ ಮುಖಂಡರುಗಳು ಸಹಕಾರ ನೀಡಬೇಕಾಗಿ ಎಂದು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW