ತುಮಕೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 07—05—2025 ಪ್ರಾದೇಶಿಕ ಹಂತದ ಒಂದು ದಿನದ ಕಾರ್ಯಾಗಾರ ನಡೆಯಿತು.
IPR–Intellectual Property “ಬೌಧ್ಧಿಕ ಆಸ್ತಿಗಳ ಹಕ್ಕು”ಗಳು ಎಂಬ ವಿಷಯದ ಕುರಿತು ವಿವಿಧ ಪದವಿ ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಪ್ರೇಮ್ ಸುಧಾ ಬಿ.ಜಿ., ಶ್ರೀ ಸಿದ್ಧಗಂಗಾ ಕಾಲೇಜು ಪ್ರಾಧ್ಯಾಪಕರು ಭಾಗವಹಿಸಿ ಮಾತನಾಡಿ, ಇಂದು ನಮ್ಮ ಚರಾಸ್ತಿ–ಸ್ಥಿರಾಸ್ತಿಗಳ ಇ ಸ್ವತ್ತು ಮಾಡಿಸಿಕೊಳ್ಳಲು ಎಲ್ಲರೂ ಶ್ರಮಿಸುತ್ತಿದ್ದೇವೆ. ಇತ್ತೀಚೆಗೆ ಜನಪ್ರೀಯತೆ ಪಡೆಯುತ್ತಿರುವ IPR ಎಂಬ ಬೌದ್ಧಿಕ ಆಸ್ತಿಗಳ ಹಕ್ಕುಗಳನ್ನು ಪಡೆಯುವುದು ಪ್ರಸ್ತುತ ಅನಿವಾರ್ಯ ಮತ್ತು ಅಗತ್ಯವಿದೆ. ಎಂಬುದರ ಬಗ್ಗೆ ಉದಾಹರಣೆ ಸಹಿತ, ಚಿತ್ರಸಹಿತ ವಿವರಣೆಗಳೊಂದಿಗೆ ತರಬೇತಿ ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ ನಾಗಾರ್ಜುನ್ ಎಂ.ಜಿ IPR ಅನಾಲಿಸ್ಟ್ ಮತ್ತು ಬ್ರಾಂಡ್ ಗಳು ವ್ಯಾಪಾರಿ ಚಿನ್ಹೆಗಳನ್ನು ಹೊಂದಿದ ದಿನಬಳಕೆ ವಸ್ತುಗಳ ಪೇಟೆಂಟ್ ಪಡೆಯುವ ವಿಧಿ–ವಿಧಾನ ಮತ್ತು ಪ್ರಯೋಜನಗಳ ಬಗ್ಗೆ ತರಬೇತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವಸಂತಾ ಟಿ.ಡಿ. ವಹಿಸಿಕೊಂಡು ಮಾತನಾಡಿ, ಸಂಬಂಧಿಸಿದ ಕ್ಷೇತ್ರದ ವ್ಯಕ್ತಿಗಳಿಂದ ಎಲ್ಲರೂ ಉಪಯುಕ್ತ ಮಾಹಿತಿ ಪಡೆದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ.ಆಯಿಷಾ ಸಿದ್ದೇಕಾ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ಕುಮಾರಸ್ವಾಮಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರುಗಳಾದ ಡಾ.ತಿಪ್ಪೇಸ್ವಾಮಿ, ಡಾ.ಗಂಗಾಧರ್, ಸಂಯೋಜಕರಾದ ಡಾ. ಅನಸೂಯಾ ಕೆ.ವಿ., ಡಾ. ಯೋಗೀಶ್, ಡಾ.ವೆಂಕಟರಮಣ, ಡಾ.ಎಚ್.ಎಂ.ರಾಘವೇಂದ್ರ ಮುಂತಾದವರು ಹಾಜರಿದ್ದರು. ವೈಶಾಲಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ತರಬೇತಿಯಲ್ಲಿ ವಿವಿಧ ಪದವಿ ಕಾಲೇಜುಗಳ ಅದ್ಯಾಪಕರು, ವಿದ್ಯಾರ್ಥಿವೃಂದ ಭಾಗವಹಿಸಿ ತರಬೇತಿ ಲಾಭ ಪಡೆದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW