nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮುಸ್ಲಿಮ್ ಮಹಿಳೆಗೆ ಸೀಮಂತ ಮಾಡಿದ ಹಿಂದೂ ಮಹಿಳೆಯರು: ಹೀಗೊಂದು ಸೌಹಾರ್ದ ಆಚರಣೆ

    September 15, 2025

    1.5 ಲಕ್ಷ ರೂಪಾಯಿಗೆ ಮಗು ಮಾರಾಟ: ನಾಲ್ವರು ಆರೋಪಿಗಳ ಬಂಧನ

    September 15, 2025

    ಜಾನುವಾರು ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ!

    September 15, 2025
    Facebook Twitter Instagram
    ಟ್ರೆಂಡಿಂಗ್
    • ಮುಸ್ಲಿಮ್ ಮಹಿಳೆಗೆ ಸೀಮಂತ ಮಾಡಿದ ಹಿಂದೂ ಮಹಿಳೆಯರು: ಹೀಗೊಂದು ಸೌಹಾರ್ದ ಆಚರಣೆ
    • 1.5 ಲಕ್ಷ ರೂಪಾಯಿಗೆ ಮಗು ಮಾರಾಟ: ನಾಲ್ವರು ಆರೋಪಿಗಳ ಬಂಧನ
    • ಜಾನುವಾರು ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ!
    • ಗದ್ದೆಯಂತಾದ ರಸ್ತೆ: ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಅವ್ಯವಸ್ಥೆ: ಗಾಢ ನಿದ್ದೆಯಲ್ಲಿರುವ ಅಧಿಕಾರಿಗಳು
    • ಜೈನ್ ಪಿಯು ಕಾಲೇಜು: ವಿಶೇಷ ಶಿಕ್ಷಣ ಮೇಳ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ
    • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಆರೋಗ್ಯ ತಪಾಸಣಾ ಶಿಬಿರ
    • ಬಾಲ್ಯ ಶಿಕ್ಷಣದ ಗುಣಮಟ್ಟ ಬಲಪಡಿಸಲು ಸಮುದಾಯದ ಪಾತ್ರ ಬಹುಮುಖ್ಯ: ರವಿಕುಮಾರ್
    • ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಅಧ್ಯಕ್ಷ ದೇವಲಾಪುರ ಸಿದ್ದರಾಜುಗೆ ಸಚಿವ ಮಹದೇವಪ್ಪ ಸನ್ಮಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಂಕಿ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ನಿವೇಶನದ ಭರವಸೆ ನೀಡಿದ ಸಚಿವ ಪರಮೇಶ್ವರ್
    ಕೊರಟಗೆರೆ April 29, 2024

    ಬೆಂಕಿ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ನಿವೇಶನದ ಭರವಸೆ ನೀಡಿದ ಸಚಿವ ಪರಮೇಶ್ವರ್

    By adminApril 29, 2024No Comments2 Mins Read
    g parameshwar
    • ನೊಂದ ಕುಟುಂಬಗಳಿಗೆ ಕರುಣೆ ತೋರಿ ಮಾದರಿಯಾದ ಸ್ವಾಮೀಜಿಗಳು

    ಕೊರಟಗೆರೆ : ಚುನಾವಣೆ ನೀತಿಸಂಹಿತೆ ಮುಗಿದ ತಕ್ಷಣವೇ ಚಿಂಪುಗಾನಹಳ್ಳಿಯ 9 ಎಕರೇ 30 ಗುಂಟೆ ಸರಕಾರಿ ಜಮೀನಿನಲ್ಲಿ ಪಶು ಆಸ್ಪತ್ರೆ, ಸರಕಾರಿ ಶಾಲೆ ಮತ್ತು ಬಡವರಿಗೆ ನಿವೇಶನಕ್ಕೆ ಲೇಔಟ್ ನಿರ್ಮಾಣ ಮಾಡ್ತಿನಿ. ಗುಡಿಸಲು ಕಳೆದುಕೊಂಡ ಜನರಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಸೌಲಭ್ಯ ಪೂರೈಸಲು ತಕ್ಷಣ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

    ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪ ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದ ಸ್ಥಳಕ್ಕೆ ಭಾನುವಾರ ಸಿದ್ದರಬೇಟ್ಟ ಶ್ರೀಗಳ ಜೊತೆಯಲ್ಲಿ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.


    Provided by
    Provided by
    Provided by

    ವರ್ಷದಲ್ಲಿ ಎರಡನೇ ಸಲ ಗುಡಿಸಲಿಗೆ ಬೆಂಕಿ ಬಿದ್ದು ಪ್ರಸ್ತುತ 10ಗುಡಿಸಲು ಸುಟ್ಟುಹೋಗಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಧವಸದಾನ್ಯ ನಾಶವಾಗಿವೆ. ಕಳೆದ ವರ್ಷವೇ ಭೇಟಿ ನೀಡಿ ನಿವೇಶನ ನೀಡುವ ಭರವಸೆ ನೀಡಿದ್ದೆ. ಈಗ ಪ್ರತಿ ಕುಟುಂಬಕ್ಕೆ 5 ಸಾವಿರ ಹಣ ನೀಡಿದ್ದೇನೆ. ಅಲೆಮಾರಿ ಕಾರ್ಮಿಕರು ಮತ್ತು ಹಂದಿಜೋಗ ಕುಟುಂಬಗಳಿಗೆ ತ್ವರಿತವಾಗಿ ನಿವೇಶನ ನೀಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ  ಎಂದು ಹೇಳಿದರು.

    ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಶಾಖ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ,  ಚಿಂಪುಗಾನಹಳ್ಳಿ ಸಮೀಪ ಎರಡನೇ ಸಲ ಬೆಂಕಿಯ ಅವಗಡ ಸಂಭವಿಸಿದೆ. ಬೆಂಕಿಯ ಅವಘಡದಿಂದ ಗುಡಿಸಲಿನಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಬಾಳುವ ವಸ್ತುಗಳು ಬೆಂಕಿಗೆ ಆಹುತಿ ಆಗಿವೆ. ಸಂಕಷ್ಟಕ್ಕೆ ಸಿಲುಕಿದ ಬಡಜನರಿಗೆ ಸಹಾಯಹಸ್ತ ನೀಡುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ ಎಂದು ಹೇಳಿದರು.

    g parameshwar

     ಶ್ರೀಗಳಿಂದ ಬಡಜನರಿಗೆ ನೆರವಿನ ಆಸರೆ:

    ಎಲೆರಾಂಪುರ ಶ್ರೀಮಠದಿಂದ 11 ಗುಡಿಸಲು ಕಳೆದುಕೊಂಡ ಬಡಜನರಿಗೆ ಆಹಾರದ ಕಿಟ್, ಬಟ್ಟೆ, ಚಾಪೆ  ಮತ್ತು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಡಾ.ಹನುಮಂತನಾಥ ಸ್ವಾಮೀಜಿಗಳು  ವಿತರಣೆ ಮಾಡಿದರು. ಪಾವಗಡ ಶ್ರೀರಾಮಕೃಷ್ಣ ಸೇವಾಮಠದಿಂದ 8 ಸಾವಿರ ಮೌಲ್ಯದ ಪಾತ್ರೆ, ಬಟ್ಟೆ, ಸೀರೆ, ಪಂಚೆ, ಟವಲ್, ಅಕ್ಕಿ, ಬೆಳೆ, ಸಕ್ಕರೆ ಮತ್ತು ಸಾಂಬರ್ ಪದಾರ್ಥಗಳನ್ನು ಶ್ರೀಜಪಾನಂದಾ ಸ್ವಾಮೀಜಿಗಳು ವಿತರಣೆ ಮಾಡಿದರು. ಸಿದ್ದರಬೆಟ್ಟ ಶ್ರೀಮಠದಿಂದ ದಿನಸಿ ಪದಾರ್ಥ, ಪಾತ್ರೆ ಮತ್ತು ಬೇಟ್‍ ಶೀಟ್‍ ಗಳನ್ನು ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಗಳು ವಿತರಣೆ ಮಾಡಿದರು.

    ನಿವೇಶನ ನೀಡಲು ಶ್ರೀಗಳ ಆಗ್ರಹ:

    ಕ್ಯಾಮೇನಹಳ್ಳಿ ಮತ್ತು ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲೆಮಾರಿ ಕಾರ್ಮಿಕರು, ಹಂದಿಜೋಗರು ಕಳೆದ 25 ವರ್ಷದಿಂದ ನೆಲೆಸಿದ್ದಾರೆ. 30ಕ್ಕೂ ಅಧಿಕ ಕುಟುಂಬಗಳಿಗೆ ಸೌಲಭ್ಯಗಳೇ ಮರೀಚಿಕೆ ಆಗಿವೆ. ರಾತ್ರಿ ವೇಳೆ ಕತ್ತಲೆಯ ಜೀವನ ನರಕದಂತಿದೆ. ತಕ್ಷಣ ಸರಕಾರ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕಿದೆ ಎಂದು ಎಲೆರಾಂಪುರದ ಶ್ರೀಹನುಮಂತನಾಥ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮತ್ತು ಪಾವಗಡದ ರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಜೀ ಆಗ್ರಹ ಮಾಡಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಅರಸಾಪುರ ಗ್ರಾ.ಪಂ. ನೂತನ ಅಧ್ಯಕ್ಷೆಯಾಗಿ ಗಂಗರತ್ನಮ್ಮ ಅವಿರೋಧ ಆಯ್ಕೆ

    September 12, 2025

    ರಾಜಕೀಯ ಸ್ಥಿತಿಗತಿಯಲ್ಲಿ ಶಿಕ್ಷಕ ಪ್ರಶಸ್ತಿಗಳಿಸುವುದು ಸುಲಭವಲ್ಲ: ಈರಣ್ಣ

    September 12, 2025

    50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೊಣಕಾಲು ಉದ್ದದ ಗುಂಡಿಗಳು!

    September 12, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮುಸ್ಲಿಮ್ ಮಹಿಳೆಗೆ ಸೀಮಂತ ಮಾಡಿದ ಹಿಂದೂ ಮಹಿಳೆಯರು: ಹೀಗೊಂದು ಸೌಹಾರ್ದ ಆಚರಣೆ

    September 15, 2025

    ಮಂಡ್ಯ: ಇಲ್ಲಿನ ಕೃಷ್ಣರಾಜ ಪೇಟೆ ಪಟ್ಟಣದ ಹಿಂದೂ ಮಹಿಳೆಯರು ಗರ್ಭಿಣಿಯಾಗಿದ್ದ ಮುಸ್ಲಿಂ ಮಹಿಳೆಗೆ ‘ಸೀಮಂತ’ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು…

    1.5 ಲಕ್ಷ ರೂಪಾಯಿಗೆ ಮಗು ಮಾರಾಟ: ನಾಲ್ವರು ಆರೋಪಿಗಳ ಬಂಧನ

    September 15, 2025

    ಜಾನುವಾರು ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ!

    September 15, 2025

    ಗದ್ದೆಯಂತಾದ ರಸ್ತೆ: ಬೆಳಕುಣಿ ಚೌದ್ರಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಅವ್ಯವಸ್ಥೆ: ಗಾಢ ನಿದ್ದೆಯಲ್ಲಿರುವ ಅಧಿಕಾರಿಗಳು

    September 14, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.