nammatumakuru

    Subscribe to Updates

    Get the latest creative news from FooBar about art, design and business.

    What's Hot

    ರುಡ್ ಸೆಟ್ ಸಂಸ್ಥೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    August 19, 2026

    ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್

    August 19, 2026

    ಮುಖ್ಯಮಂತ್ರಿ ಬಗ್ಗೆ ವೈಯಕ್ತಿಕ ನಿಂದನೆ ನಿಲ್ಲಿಸಿ: ಶಾಸಕರಿಗೆ ಕಾಂಗ್ರೆಸ್ ಮುಖಂಡರ ಆಗ್ರಹ

    August 19, 2026
    Facebook Twitter Instagram
    ಟ್ರೆಂಡಿಂಗ್
    • ರುಡ್ ಸೆಟ್ ಸಂಸ್ಥೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ
    • ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್
    • ಮುಖ್ಯಮಂತ್ರಿ ಬಗ್ಗೆ ವೈಯಕ್ತಿಕ ನಿಂದನೆ ನಿಲ್ಲಿಸಿ: ಶಾಸಕರಿಗೆ ಕಾಂಗ್ರೆಸ್ ಮುಖಂಡರ ಆಗ್ರಹ
    • ತುಮಕೂರು: ಸ್ಮಶಾನ ಭೂಮಿ ಪರಭಾರೆ ಆರೋಪ: ಬೃಹತ್ ಪ್ರತಿಭಟನೆ
    • ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಪೃಶ್ಯತೆ ಆಚರಣೆ ವಿರೋಧಿಸಿ ಛಲವಾದಿ ಮಹಾಸಭಾ ಪ್ರತಿಭಟನೆ
    • ಡೈರಿ ಕಟ್ಟಡದ ಪಿಲ್ಲರ್ ಕುಸಿದು ಬಿದ್ದು 10 ವರ್ಷದ ಶಾಲಾ ಬಾಲಕ ಸ್ಥಳದಲ್ಲೇ ಸಾವು!
    • ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿಧನ: 67 ವರ್ಷದ ಬಿ.ಸಿ.ನಾಗೇಶ್ ಅವರಿಗೆ ಏನಾಗಿತ್ತು?
    • ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗಲ್ಲ: ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..! | ಹಾಶಿಂ ಬನ್ನೂರು ಅವರ ಲೇಖನ
    ಲೇಖನ August 8, 2024

    ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..! | ಹಾಶಿಂ ಬನ್ನೂರು ಅವರ ಲೇಖನ

    By adminAugust 8, 2024No Comments2 Mins Read
    hashim bannur

    ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ ವಿಕೋಪಗಳಿಂದಾಗಿ ನಮ್ಮ ಸುತ್ತಮುತ್ತಲು ದುರಂತಗಳು ದೈನಂದಿನವಾಗಿ ಏರುತ್ತಿವೆ, ಹೆಚ್ಚಿನ ಮಳೆ, ಭೂಮಿ,ಗುಡ್ಡ ಬೆಟ್ಟಗಳ ಕುಸಿತ, ನದಿ ಕೆರೆಗಳು ತುಂಬಿ ತುಳುಕುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ ಅಲ್ಲದೇ ಮನುಷ್ಯ ಪ್ರಾಣಿ ಸಂಕುಲಕ್ಕೆ ಹಾನಿ ಮತ್ತು ತೊಂದರೆಗಳು ಎದುರಾಗುತ್ತಿವೆ. ರಸ್ತೆಗಳು ದಾರಿ ಮನೆ ಹಾಗೂ ವಿಶಾಲ ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಜನ ಸಂಚಾರ ವಾಹನ ಚಲಾವಣೆ ಎಲ್ಲವೂ ಸಂಕಷ್ಟಕರವಾಗಿದೆ. ಎಡ ಬಿಡದೆ ಬರುವ ಮಳೆ, ವೇಗವಾಗಿ ಬೀಸುವ ಗಾಳಿ ಮನೆ ಕಟ್ಟಡಗಳಿಗೆ ಹಾಗೂ ಗಿಡ ಮರಗಳು ಧರೆಗುರುಳಿ ಉಂಟಾಗುತ್ತಿರುವ ಹಾನಿಗಳು ಎಲ್ಲವೂ ಮನುಷ್ಯ ರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಜೀವನ್ಮರಣ ಹೋರಾಟದ ನಡುವೆ ಕೆಲವು ಜೀವಗಳು ಮಣ್ಣಿನಲ್ಲಿ ಮಾಯವಾಗಿ ಇನ್ನು ಕೆಲವು ಜೀವಗಳು ಮೃತವಾಗಿ. ಕಣ್ಣು ಮುಂದೆಯೇ ನೀರಿನಲ್ಲಿ ಜನ ಕೊಚ್ಚಿ ಹೋಗುವ ದೃಶ್ಯ ನಿಜಕ್ಕೂ ಭಯಾನಕರ ಸನ್ನಿವೇಶವೇ ಬಂದಾಗಿದೆ. ಇದು ದೇವರ ಪರೀಕ್ಷೆಯೋ..? ಮನುಷ್ಯ ಮಾಡಿರುವ ತಪ್ಪಿಗೆ ಶಿಕ್ಷೆಯೋ..? ದೇವನೇ ಬಲ್ಲ.

    ಮನುಷ್ಯನು, ಪ್ರಾಣಿ, ಪಕ್ಷಿ ಸಕಲ ಜೀವ ರಾಶಿಗಳು, ಚರಾಚರಗಳು ಇಲ್ಲಿ ಬದುಕಬೇಕಾದರೆ ಅವುಗಳ ಬೆಳವಣಿಗೆಗೆ ಪರಿಸರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಆವಶ್ಯಕತೆಯಿರುವ ನೀರು, ಗಾಳಿ, ಬೆಳಕು, ಆಹಾರ ಇತರ ಆವಶ್ಯಕತೆಗೆ ಭೂಮಿಯನ್ನು ಅವಲಂಬಿಸಿದೆ. ಆದರೆ ಮನುಷ್ಯನು ಮಾಡುವ ಕೆಲವು ಕೆಲಸಗಳಿಂದ ದೈನಂದಿನ ನೀರು, ಗಾಳಿ, ಪರಿಸರ ತ್ಯಾಜ ವಿಷ ಅವಶೇಷಗಳಿಂದ ನಾಶವಾಗುತ್ತಿದೆ.

    ಪರಿಸರವನ್ನು ಸಂರಕ್ಷಿಸಬೇಕಾದ ನಾವು ನಮ್ಮ ಲಾಭಕ್ಕಾಗಿ ಪರಿಸರವನ್ನು ದುರುಪಯೋಗ ಮಾಡುತ್ತಿದ್ದೇವೆ.
    ನಮಗೆ ಬೇಕಾದ ಆಮ್ಲಜನಕ, ನೆರಳು, ಹಾಗೂ ಪರಿಸರವನ್ನು ತಂಪಾಗಿಡಲು ಗಿಡ ಮರಗಳು ಬಹಳ ಅವಶ್ಯಕ ಅವುಗಳ್ನು ಸಾದ್ಯವಾದಷ್ಟು ಬೆಳೆಸಬೇಕಾಗಿದೆ. ಆದರೆ ಗಿಡ ಮರ ಕಡಿಯುವುದು ಕೂಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಇದರಿಂದ ನಮ್ಮ ಪರಿಸರ ನಾಶವಾಗುತ್ತಿದೆ.

    ಮನುಷ್ಯನಿಗೆ ಆರೋಗ್ಯವಂತನಾಗಿರಲು ಪರಿಸರ ಬಹಳ ಅವಶ್ಯಕ, ನಾವು ಸ್ವಚ್ಛವಾಗಿರಲು ಮತ್ತು ನಮ್ಮ ಅವಶ್ಯಕತೆಗೆ ನೀರು ಬಹಳ ಮುಖ್ಯವಾಗಿದೆ. ನಾವು ಕೆರೆ, ಬಾವಿ, ನದಿ, ಮುಂತಾದವುಗಳಿಂದ ನೀರು ಬಳಸಿಕೊಳ್ಳುತ್ತೇವೆ. ಆದರೆ ವಿಷ ವಸ್ತುಗಳು, ಕಸ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳನ್ನು ನೀರಿಗೆ ಬಿಡೂದು, ನೀರನ್ನು ಅಮಿತವಾಗಿ ಬಳಸೂದು ಇವುಗಳಿಂದ ತುಂಬಾ ತೊಂದರೆ ಅಲ್ಲದೆ ಪರಿಸರ ನಾಶಕ್ಕೆ ಇದೂ ಕೂಡ ಕಾರಣವಾಗುತ್ತಿದೆ.ಹೆಚ್ಚುತ್ತಿರುವ ವಾಹನ ಸಂಚಾರ, ಕಾರ್ಖಾನೆಗಳು ಮುಂತಾದವುಗಳಿಂದ ವಾಯು ದೂಳು ಮಸಿ ಎಲ್ಲವೂ ಕಲುಷಿತಗೊಂಡು ವಾಯುಮಾಲಿನ್ಯ ನಿಯಂತ್ರಣ ತಪ್ಪುತ್ತಿದೆ, ಶುದ್ಧ ವಾಯು ಸಿಗದೇ ಇದರಿಂದ ರೋಗಗಳು ಹೆಚ್ಚುತ್ತಿವೆ.

    ಮುಂದಿನ ನಮ್ಮ ಪೀಳಿಗೆಯು ಉಳಿಯಬೇಕಾದರೆ ನಾವು ಈಗಾಗಲೇ ಜಾಗರೂಕತೆಯಿಂದ ಇರಬೇಕಾಗಿದೆ. ಪರಿಸರ ಪ್ರಕೃತಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಮಿತವಾದ ನೀರಿನ ಬಳಕೆ, ಶುದ್ಧ ನೀರು ಬಳಸಿಕೊಳ್ಳೂದು, ತ್ಯಾಜ್ಯಗಳನ್ನು ಕಸ, ಹಾಗೂ ವಿಷ ವಸ್ತುಗಳು ನೀರಿಗೆ ಹಾಕದೇ ಇರೂದು. ಶುದ್ಧ ಆಮ್ಲಜನಕ ಪೂರೈಕೆಗೆ ಗಿಡ ಮರ ಬೆಳೆಸೂದು, ಕಾಡುಗಳನ್ನು ಬೆಳೆಸುವುದು, ಗಿಡ ಮರ ಕಡಿಯದಂತೆ ನೋಡಿಕೊಳ್ಳೂದು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡೂದು ಇವುಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹಾಗಾದರೆ ಮಾತ್ರ ನಮ್ಮ ಪರಿಸರ ಪ್ರಕೃತಿಯನ್ನು ದುರಂತಗಳಿದ ಪಾರಾಗಿಸಲು ಸಾಧ್ಯ. ಇಲ್ಲವಾದಲ್ಲಿ ನಾವು ಮಾಡುವ ಕೃತ್ಯಕ್ಕೆ ಇನ್ನೂ ಭೀಕರತೆಯ ದುರಂತಗಳನ್ನು ಎದುರಿಸಬೇಕಾಗುತ್ತದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     

    admin
    • Website

    Related Posts

    ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಾಗೂ ನಮ್ಮ ಕರ್ತವ್ಯ: ಒಂದು ಪರಾಮರ್ಶೆ

    August 15, 2026

    ಇಪಿಎಫ್‌ ಒದಿಂದ ಉದ್ಯೋಗದಾತರಿಗೆ ಬಿಗ್ ರಿಲೀಫ್: ‘EEC 2026’ ಮತ್ತು ‘ವಿಶ್ವಾಸ್ 2026’ ಯೋಜನೆಗಳು ಜಾರಿ

    August 14, 2026

    ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ

    August 11, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ರುಡ್ ಸೆಟ್ ಸಂಸ್ಥೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

    August 19, 2026

    ತುಮಕೂರು: ರುಡ್ ಸೆಟ್ ಸಂಸ್ಥೆ ವತಿಯಿಂದ ಗ್ರಾಮೀಣ ನಿರುದ್ಯೋಗಿ ಯುವಕ, ಯುವತಿಯರಿಗೆ ಆಗಸ್ಟ್ 20 ರಿಂದ ಎಂಬ್ರಾಯ್ಡರಿ, ಆರಿ ವರ್ಕ್…

    ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಿ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್

    August 19, 2026

    ಮುಖ್ಯಮಂತ್ರಿ ಬಗ್ಗೆ ವೈಯಕ್ತಿಕ ನಿಂದನೆ ನಿಲ್ಲಿಸಿ: ಶಾಸಕರಿಗೆ ಕಾಂಗ್ರೆಸ್ ಮುಖಂಡರ ಆಗ್ರಹ

    August 19, 2026

    ತುಮಕೂರು: ಸ್ಮಶಾನ ಭೂಮಿ ಪರಭಾರೆ ಆರೋಪ: ಬೃಹತ್ ಪ್ರತಿಭಟನೆ

    August 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.