ತಿಪಟೂರು : ಲೋಕದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಸಂಭವಿಸದೇ ಜನರು ಶಾಂತಿ, ನೆಮ್ಮದಿ ಜೀವನ ನಿರ್ವಹಣೆ ಮಾಡುವಂತಾಲಿ ಎಂಬ ಲೋಕಕಲ್ಯಾಣಾರ್ಥವಾಗಿ ಸತ್ಯನಾರಾಯಣ ಸ್ವಾಮಿಯ ಪೂಜಾ ಕಾರ್ಯವನ್ನು ಹಮ್ಮಿಕೊಳ್ಳಾಗಿದೆ ಎಂದು ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಾಲಯದಲ್ಲಿ ಪ್ರತಿವರ್ಷದ ಆಷಾಡ ಮಾಸದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿದ್ದ 10ನೇ ವರ್ಷದ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲೋಕದಾದ್ಯಂತ ಮಾನವನ ಸ್ವಾರ್ಥಕ್ಕಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಮಾನವನ ಆವಿಷ್ಕಾರಗಳಿಗೆ ಪ್ರತಿಯಾಗಿ ಪ್ರಕೃತಿಯು ವಿಕೋಪಗಳು ಸಂಭವಿಸಿ ಅತಿವೃಷ್ಟಿ-ಅನಾವೃಷ್ಟಿಯಿಂದ ನರಳುತ್ತಿದ್ದಾರೆ. ಪ್ರಕೃತಿಯ ವೈಪರಿತ್ಯ, ಬದಲಾವಣೆಗಳ ಮುಂದೆ ಮಾನವನ ಆಲೋಚನೆ, ಅಭಿವೃದ್ಧಿ ಚಿಂತನೆಗಳು ನಡೆಯುವುದಿಲ್ಲ. ಇಂತಹ ಘಟನೆಗಳು ನಡೆಯದಂತಿರಲಿ ಎಂಬ ಉದ್ದೇಶದಿಂದ ಜನತೆಗೆ ಒಳ್ಳೆದಾಗಲಿ ಎಂಬ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಕಬ್ಬಳ್ಳಿ ಶಾಖಾಮಠದ ಶಿವಪುತ್ರ ಸ್ವಾಮಿಜಿ, ಬಿಜಿ ನಗರದ ಸತ್ ಕೀರ್ತಿನಾಥ ಸ್ವಾಮೀಜಿ, ಹಾಸನದ ಉದ್ಯಮಿ ವಿಜಯ ಕುಮಾರ್, ಬೆಂಗಳೂರು ಉದ್ಯಮೆ ರಮೇಶ್ ಗೌಡ ಸೇರಿದಂತೆ ದಸರೀಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz